Sitavana: ಕೌತುಕದ ತಾಣ ಸೀತಾವನ


Team Udayavani, Sep 10, 2024, 4:43 PM IST

6-uv-fusion

ರಾಮಾಯಣ ನಿಜ ಎಂಬುದಕ್ಕೆ ಈಗಲೂ ಅಲ್ಲಲ್ಲಿ ಕಾಣಸಿಗುವ ಕೆಲವೊಂದು ಕೌತುಕದ ಸನ್ನಿವೇಶಗಳು, ವಿಸ್ಮಯಗಳೇ ಸಾಕ್ಷಿ. ಇದಕ್ಕೆ ರುಜು ಎಂಬಂತೆ ರಾಮಾಯಣ ಕಾಲದಲ್ಲಿ ಶ್ರೀ ರಾಮನ ಪತ್ನಿ ಸೀತೆ ಸ್ನಾನ ಮಾಡಿದ ಪುಣ್ಯಸ್ಥಳ ಚಿಕ್ಕಮಗಳೂರಿನಲ್ಲಿದೆ. ಅಂದಿನಿಂದ ಇಂದಿನವರೆಗೂ ಈ ಜಾಗದಲ್ಲಿ ನೀರಿನ ಹರಿವು ಕಡಿಮೆಯಾಗಿಲ್ಲ. ಇಲ್ಲಿ ನೀರು ಹರಿಯಲು ಪ್ರಾರಂಭವಾದಾಗಿನಿಂದ ಎಂಥ ಬರಗಾಲ ಬಂದರೂ ಇಲ್ಲಿ ಮಾತ್ರ ನೀರು ಹರಿಯುವುದು ನಿಂತಿಲ್ಲ.

ಇಲ್ಲಿ ಮಳೆಗಾಲದಲ್ಲಿ ನೀರು ತುಸು ಕಡಿಮೆಯಾಗುವುದು, ಬೇಸಗೆಯಲ್ಲಿ ಹೆಚ್ಚಾಗುವುದು ಅಚ್ಚರಿಯೇ ಸರಿ. ಈ ಜಾಗಕ್ಕೆ ನೀರು ಎಲ್ಲಿಂದ ಬರುತ್ತದೆ ಈಗಲೂ ನಿಗೂಢ ಪ್ರಶ್ನೆಯಾಗಿಯೇ ಉಳಿದಿದೆ. ಈ ರೀತಿ ಅಚ್ಚರಿಯ, ಕೌತುಕ ಸ್ಥಳ ನೆಲೆಗೊಂಡಿರುವುದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಎಂಬ ಪುಟ್ಟ ಗ್ರಾಮದಲ್ಲಿ.

ಈ ಪ್ರದೇಶ ನೋಡಲು ಅತ್ತ ಜಲಪಾತವೂ ಅಲ್ಲ, ಇತ್ತ ಹಳ್ಳವೂ ಅಲ್ಲ. ಆದರೂ ಸದಾ ತಂಪು ನೀರಿನಿಂದ ಹರಿಯುವ ಮನಮೋಹಕ ತಾಣವೆಂದೇ ಹೇಳಬಹುದು. ಈ ಜಾಗವನ್ನು ಊರಿನ ಜನರು ಸೀತಾವನ ಎಂದು ಕರೆಯುವರು. ಈ ಸೀತಾವನಕ್ಕೆ ಕಲ್ಲು, ನಾಣ್ಯ, ಮರದ ತುಂಡು, ಯಾವುದೇ ವಸ್ತುವನ್ನು ಹಾಕಿದರೂ ಒಂದೇ ವಾರದಲ್ಲಿ ಆ ವಸ್ತುವಿನ ಮೇಲೆ ಸುಣ್ಣದ ಅಂಶ ಬೆಳೆದು ಕಲ್ಲಾಗುತ್ತದೆ.

ಇದರ ಹಿಂದಿರುವ ಪುರಾಣದ ಕಥೆ ನೋಡಿದರೆ, ಸೀತೆ ವನವಾಸದಲ್ಲಿದ್ದಾಗ ಈ ಜಾಗಕ್ಕೆ ಭೇಟಿ ನೀಡಿ ಇಲ್ಲಿ ಸ್ನಾನ ಮಾಡಿದ್ದಾಳೆ ಎಂಬ ಪ್ರತೀತಿ ಇದೆ. ಇದೇ ಜಾಗದಲ್ಲಿ ಸೀತೆ ತಾಂಬೂಲ ಹಾಕಿ ಸುಣ್ಣ ಹಾಕಿಕೊಂಡಿದ್ದು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ಸ್ಥಳದಲ್ಲಿ ಯಾವುದೇ ವಸ್ತು ಬಿದ್ದರೂ ಅದರ ಮೇಲೆ ಸುಣ್ಣದ ಅಂಶ ಬೆಳೆಯುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಆದರೆ ಇಲ್ಲಿನ ಮಣ್ಣಿನ ಗುಣ ಹಾಗೂ ಹವಾಮಾನ ಬದಲಾವಣೆಯೇ ಈ ರೀತಿಯ ಪವಾಡಗಳಿಗೆ ಕಾರಣವೆಂದು ವಿಜ್ಞಾನದ ವಾದ. ಏನೇ ಇದ್ದರು ಈಗಲೂ ಪುರಾಣಗಳಲ್ಲಿ ಇರುವ ಸ್ಥಳಗಳು ಕಾಣುವುದು ಒಂದು ಕೌತುಕವೇ ಸರಿ.

- ಬಿ. ಶರಣ್ಯ ಜೈನ್‌

ಎಸ್‌ಡಿಎಂ, ಉಜಿರೆ

ಟಾಪ್ ನ್ಯೂಸ್

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

cyber crime

Cybercrime; ಚಾಲ್ತಿ ಖಾತೆ ತೆರೆದು ಕೋಟ್ಯಂತರ ರೂ.ವರ್ಗಾವಣೆ: ಇಬ್ಬರ ಬಂಧನ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.