Health – Dance: ನೃತ್ಯದಿಂದ ಆರೋಗ್ಯ


Team Udayavani, Sep 10, 2024, 5:47 PM IST

7-dance

ಸಂಗೀತ, ನೃತ್ಯ, ಶಿಲ್ಪಕಲೆ, ಚಿತ್ರಕಲೆಗಳನ್ನು ನಮ್ಮ ಹಿರಿಯರು ಗಂಧರ್ವ ವಿದ್ಯೆಗಳೆಂದು ಭಾವಿಸಿದ್ದರು. ಇಂದ್ರನ ಆಸ್ಥಾನದಲ್ಲಿದ್ದ ಪ್ರಸಿದ್ಧ ನರ್ತಕಿಯರಾದ ಊರ್ವಶ್ರೀ, ರಂಬೆ, ಮೇನಕೆ, ತಿಲೋತ್ತಮ ನಾಟ್ಯ ಪ್ರವೀಣೆಯರಾಗಿದ್ದರು. ಜತೆಗೆ ಇವರು ಅಪ್ಸರೆಯರು ಕೂಡ.

ಭರತನಾಟ್ಯ ಪ್ರೌಢಿಮೆಯನ್ನು ಕುರಿತು ಜಕ್ಕನ ಕವಿ ಅದ್ಭುತವಾಗಿ ವರ್ಣಿಸುತ್ತಲೇ, ನಾಟ್ಯಶಾಸ್ತ್ರದ ಎಷ್ಟೋ ರಹಸ್ಯಗಳನ್ನು ಕೂಡ ತನ್ನ ಗ್ರಂಥದಲ್ಲಿ ಬರೆದಿದ್ದಾನೆ. ಸಾಹಿತ್ಯದ ಭಾವಕ್ಕೆ ಸರಿ ತೂಗುವಂತಹ ಹಸ್ತಮುದ್ರಿಕೆಗಳನ್ನು ಊರ್ವಶಿ ನಯನಾನಂದಕರವಾಗಿ ಅಂದು ಪ್ರದರ್ಶಿಸಿದಳೆಂದು, ನಾಟ್ಯದ ಸೂಕ್ತ ಭಾವ ಭಂಗಿಗಳು, ತಾಳ ವೈವಿಧ್ಯವನ್ನು ತನ್ನ ಕಾಲಿನ ಅಂದುಗೆಗಳ ಧ್ವನಿಗೆ ಸಮನ್ವಯಿಸುತ್ತಾ ತನ್ನ ನಾಟ್ಯವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದಳಂತೆ, ತಾಳ, ನೃತ್ಯ, ಭಂಗಿಗಳಿಗೆ ಪ್ರಾಣಾಧಾರವಾದ ಆಂಗಿಕ ಅಭಿನಯ, ನೇತ್ರವಿಲಾಸ, ಪಾದ ವಿನ್ಯಾಸಗಳಿಗಿರುವ ಪ್ರಾಧಾನ್ಯತೆಯನ್ನು ತನ್ನ ಗ್ರಂಥದಲ್ಲಿ ಅರ್ವಶಿಯ ನಾಟ್ಯದ ಮೂಲಕ ಜಕ್ಕನ ಕವಿ ತಿಳಿಸಿದ್ದಾನೆ.

ನಮ್ಮ ದೇವಾಲಯಗಳಲ್ಲಿ ನಾಟ್ಯವನ್ನು ಬಿಂಬಿಸುವ ಅನೇಕ ಕಲಾಕೃತಿಗಳನ್ನು ಶಿಲ್ಪಿಗಳು ಕೆತ್ತಿದಿಟ್ಟಿದ್ದಾರೆ. ನಮ್ಮ ಬೇಲೂರು- ಹಳೆಬೀಡು ದೇವಸ್ಥಾನಗಳಲ್ಲಿಯಂತೂ ನಾಟ್ಯರಾಣಿ ಶಾಂತಲಾದೇವಿಯ ನೃತ್ಯದ ಅನೇಕ ಭಾವಭಂಗಿಗಳನ್ನೇ ಶಿಲ್ಪಿಗಳು ಕೆತ್ತಿದಿಟ್ಟಿದ್ದಾರೆ.

ಭರತಮುನಿಯೇ ಭರತ ನಾಟ್ಯವನ್ನು ಪ್ರಚುರಪಡಿಸಿದ ಗುರು. ನಾಟ್ಯವು ಮನುಷ್ಯನ ಮನಸ್ಸನ್ನು ಎಷ್ಟೋ ಸಂತೋಷಗೊಳಿಸುತ್ತದೆ. ಅವನಿಗಿರುವ ತಾತ್ಕಾಲಿಕ ದುಃಖಗಳನ್ನೂ ಮರೆಸುತ್ತದೆ. ಇನ್ನು ಸಂಗೀತವನ್ನಂತೂ “ಶಿಶುìಪೇತ್ರಿ, ಪಶುìವೇತ್ರಿ, ವೇತ್ತಿ¤ಗಾನರ ಸಂಘಣೆ’ ಎಂದಿದ್ದಾರೆ ಎಂದರೆ ಸಂಗೀತದಲ್ಲಿನ ಮಾಧುರ್ಯವನ್ನು ಶಿಶುಗಳು, ಪಶುಗಳೂ ಅಲ್ಲದೆ ಸರ್ವಗಳೂ ಸಂಗೀತಕ್ಕೆ ತಲೆದೂಗುತ್ತವೆ ಎಂದು ಇದರ ಅರ್ಥ.

ನಮ್ಮ ದೇಶದಲ್ಲಿ ಶಾಸ್ತ್ರೀಯ ನೃತ್ಯಗಳ ಜತೆಗೆ ಜಾನಪದ ನಾಟ್ಯರೂಪಗಳೂ ಪ್ರಚುರ ಪಡೆದಿವೆ. ಸಾಧಾರಣ ವ್ಯಾಯಾಮಗಳಿಗೆ ಹೋಲಿಸಿದರೆ ನೃತ್ಯದ ಅಭ್ಯಾಸದಿಂದ ಮೆದುಳಿನಲ್ಲಿಯ ‘ಹಿಪ್ಪೋಕ್ಷಾಂಪಸ್‌’ ಭಾಗವು ಚೆನ್ನಾಗಿ ಅಭಿವೃದ್ಧಿಯಾಗಿ ಮುಪ್ಪನ್ನು ಮುಂದೂಡುತ್ತದೆಯಂತೆ. ಇದರ ಜತೆಗೆ ನಾಟ್ಯದಿಂದ ದೇಹ, ದೇಹದ ಎಲ್ಲ ಅಂಗಾಂಗಗಳು ದೃಢವಾಗಿ, ಆರೋಗ್ಯಕರವಾಗಿರುತ್ತವೆಯೆಂದು ಅವರು ಹೇಳುತ್ತಾರೆ. ಮುಪ್ಪನ್ನು ಮುಂದೂಡುವುದಕ್ಕಿಂತ ಸಂತೋಷದ ಕೆಲಸ ಬದುಕಿನಲ್ಲಿ ಯಾವುದಿರುತ್ತದೆ ಹೇಳಿ? ಸುಂದರವಾದ, ದೃಢವಾದ, ಆರೋಗ್ಯಕರವಾದ ದೇಹ ಯಾರಿಗೆ, ತಾನೇ ಬೇಡ? ಹಾಗಾಗಿ ಪ್ರತಿಯೊಬ್ಬರೂ ಯಾವುದಾದರೂ ಒಂದು ರೀತಿಯ ನಾಟ್ಯವನ್ನು ಕಲಿತು ಆರೋಗ್ಯಕರವಾಗಿರುವುದು ಬಹಳ ಒಳ್ಳೆಯದೆಂದು ತಜ್ಞರ ಅಭಿಪ್ರಾಯ.

-  ಸೌಮ್ಯಾ ಕಾಗಲ್‌

ಬಸವೇಶ್ವರ ಕಲಾ ಮಹಾವಿದ್ಯಾಲಯ

ಬಾಗಲಕೋಟೆ

ಟಾಪ್ ನ್ಯೂಸ್

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.