Bramavara: ಆಕಾಶವಾಣಿ ಜಂಕ್ಷನ್‌ ಗಾಯಕ್ಕೆ ಉಪ್ಪು ಸವರುವ ಖಾಸಗಿ ಬಸ್‌ಗಳು!

ಸರ್ವಿಸ್‌ ರಸ್ತೆಯಲ್ಲಿ ವಾಹನ ಪಾರ್ಕಿಂಗ್‌ ಸಮಸ್ಯೆ; ಜಂಕ್ಷನ್‌ ವಿಸ್ತರಣೆ, ಸರ್ಕಲ್‌ ನಿರ್ಮಾಣಕ್ಕೆ ಆಗ್ರಹ

Team Udayavani, Sep 11, 2024, 7:15 PM IST

Bramavara: ಆಕಾಶವಾಣಿ ಜಂಕ್ಷನ್‌ ಗಾಯಕ್ಕೆ ಉಪ್ಪು ಸವರುವ ಖಾಸಗಿ ಬಸ್‌ಗಳು!

ಬ್ರಹ್ಮಾವರ: ಇಲ್ಲಿನ ಆಕಾಶವಾಣಿ ಜಂಕ್ಷನ್‌ ಸಂಚಾರಿ ಸಮಸ್ಯೆಯಿಂದ ಮೊದಲೇ ಜರ್ಜರಿತವಾಗಿದೆ. ಇದಕ್ಕೆ ಸರಿಯಾಗಿ ಉಪ್ಪು ಸವರುವ ಕೆಲಸವನ್ನು ಖಾಸಗಿ ಬಸ್‌ಗಳು ಮಾಡುತ್ತಿವೆ.

ಇದು 6 ರಸ್ತೆಗಳು ಕೂಡುವ ಅಪಾಯಕಾರಿ ಸ್ಥಳ. ರಾ.ಹೆ.ಯಿಂದ ಬಾರಕೂರು ಕಡೆ ತೆರಳುವವರು, ಬಾರಕೂರು ಕಡೆಯಿಂದ ಹೆದ್ದಾರಿ ಪ್ರವೇಶಿಸುವವರು, ಸರ್ವಿಸ್‌ ರಸ್ತೆಯ ಎರಡೂ ಕಡೆಯಿಂದ ಬರುವವರು, ಸಂತೆ ಮಾರುಕಟ್ಟೆ ರಸ್ತೆಯಿಂದ ಸಂಪರ್ಕಿಸುವವರು. ಹೀಗೆ ಯಾರು ಯಾವ ಕಡೆ ತೆರಳುವವರು ಎಂದು ತಿಳಿಯದೆ ಮೊದಲೇ ಗೊಂದಲದ ಗೂಡು. ಇದರ ನಡುವೆ ಕುಂದಾಪುರ ಕಡೆಯಿಂದ ಆಗಮಿಸುವ ಎಲ್ಲಾ ಬಸ್‌ಗಳು ಸರ್ವಿಸ್‌ ರಸ್ತೆಯಲ್ಲಿ ಬಾರದೆ ನೇರವಾಗಿ ಹೆದ್ದಾರಿಯಿಂದ ಒಳ ನುಗ್ಗಿ ಜಂಕ್ಷನ್‌ನಲ್ಲೇ ಅಡ್ಡವಾಗಿ ನಿಲ್ಲುತ್ತಿವೆ. ಬಾರಕೂರು ಕಡೆಯಿಂದ ಬಂದ ಬಸ್‌ಗಳೂ ನಡು ರಸ್ತೆಯಲ್ಲೇ ನಿಂತು ಸಮಸ್ಯೆ ಉಲ್ಬಣಿಸುತ್ತಿವೆ.

ಕುಂದಾಪುರ ಕಡೆಯಿಂದ ಬರುವ ಬಸ್‌ಗಳು ನಿಯಮ ಪ್ರಕಾರ ಧರ್ಮಾವರಂನಿಂದ ಸರ್ವಿಸ್‌ ರಸ್ತೆಯಲ್ಲೇ ಬಂದು ಆಕಾಶವಾಣಿ ಜಂಕ್ಷನ್‌ಕ್ಕಿಂತ ಸ್ವಲ್ಪ ಹಿಂದೆ ಇರುವ ಬಸ್‌ನಿಲ್ದಾಣದಲ್ಲೇ ಪ್ರಯಾಣಿಕರನ್ನು ಇಳಿಸುವ, ಹತ್ತಿಸುವ ಕಾರ್ಯ ಮಾಡಬೇಕು. ಇಲ್ಲಿ ಯಾವುದೇ ಬಸ್‌ ನಿಲ್ಲದೆ ನಿರುಪಯುಕ್ತವಾಗಿದೆ. ಇಲ್ಲಿರುವ ಬಸ್‌ ನಿಲ್ದಾಣದ ಸುತ್ತ ಆಳೆತ್ತರ ಹುಲ್ಲು, ಗಿಡಗಳ ಪೊದೆ ಬೆಳೆದು ಪ್ರಯಾಣಿಕರು ನಿಲ್ಲಲೂ ಯೋಗ್ಯವಾಗಿಲ್ಲ. ಪೊದೆಗಳನ್ನು ಎಲ್ಲ ಸ್ವತ್ಛಗೊಳಿಸಿದರೆ ಪ್ರಯಾಣಿಕರು ತಂಗುದಾಣದಲ್ಲಿ ನಿಂತು ಬಸ್‌ ಬಂದ ಕೂಡಲೇ ಹತ್ತಲು ಅನುಕೂಲವಾಗುತ್ತದೆ. ಬಾರಕೂರು ಕಡೆಯಿಂದ ಬರುವ ಬಸ್‌ಗಳು ಸ್ವಾಗತ ಗೋಪುರಕ್ಕಿಂತ ಹಿಂದೆಯೇ ನಿಲ್ಲಿಸುವುದರಿಂದ ಜಂಕ್ಷನ್‌ ಸಮಸ್ಯೆ ಸ್ವಲ್ಪ ಬಗೆಹರಿಯುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಅವೈಜ್ಞಾನಿಕದ ಪರವಾವಧಿ
ಆಕಾಶವಾಣಿ ಜಂಕ್ಷನ್‌ ಕಾಮಗಾರಿಯು ಅವೈಜ್ಞಾನಿಕದ ಪರಮಾವಧಿ. ಬಾರಕೂರು ಹಾಗೂ ಸಂತೆ ಮಾರುಕಟ್ಟೆ ಕಡೆಯಿಂದ ಹೆದ್ದಾರಿಗೆ ಬರುವವರು ಒಮ್ಮೆಲೇ ದಿಬ್ಬ ಏರಬೇಕು. ವಯಸ್ಕರು, ಘನ ವಾಹನ ಸವಾರರು, ಅಪರಿಚಿತರು ಇಲ್ಲಿ ಪಡುವ ಪಾಡು ಹೇಳತೀರದು. ಸ್ವಾಗತ ಗೋಪುರಕ್ಕೆ ಎತ್ತರದ ವಾಹನಗಳು ಸಿಕ್ಕಿ ಹಾಕಿಕೊಂಡು ಪಡುವ ಕಷ್ಟ ಅಷ್ಟಿಷ್ಟಲ್ಲ. ಇಕ್ಕಟ್ಟಾದ ಈ ಪ್ರದೇಶದಲ್ಲಿ ಪ್ರತೀ ಕ್ಷಣ ಆತಂಕ, ಭಯದಿಂದಲೇ ವಾಹನ ಸವಾರರು ತೆರಳುತ್ತಿದ್ದಾರೆ. ಇವೆಲ್ಲದರ ಪರಿಣಾಮ ಇಲ್ಲಿ ಸಂಭವಿಸುವ ಅಪಘಾತಗಳಿಗೆ ಲೆಕ್ಕವಿಲ್ಲ.

ಹೀಗೆ ಮಾಡುವುದು ಅನಿವಾರ್ಯ
ಸರ್ವಿಸ್‌ ರಸ್ತೆಗಳಲ್ಲಿ ಯಾವುದೇ ಖಾಸಗಿ ವಾಹನ ನಿಲ್ಲಿಸಲು ಅವಕಾಶ ನೀಡಬಾರದು. ಬಸ್‌ಗಳು ಸರ್ವಿಸ್‌ ರಸ್ತೆಯಲ್ಲೇ ಸಂಚರಿಸಿ ಜಂಕ್ಷನ್‌ಗಿಂತ ಹಿಂದೆಯೇ ನಿಲ್ಲಿಸಬೇಕು. ತಂಗುದಾಣದ ಸುತ್ತ ಬೆಳೆದಿರುವ ಹುಲ್ಲನ್ನು ಕೂಡಲೇ ಸ್ವತ್ಛಗೊಳಿಸಬೇಕು. ಜಂಕ್ಷನ್‌ ಪ್ರದೇಶ ಇನ್ನಷ್ಟು ವಿಸ್ತರಿಸಿ ಸರ್ಕಲ್‌ ನಿರ್ಮಿಸಬೇಕು. ಸಂತೆಗೆ ಬರುವವರು ಕಡ್ಡಾಯವಾಗಿ ಗಾಂಧಿ ಮೈದಾನದಲ್ಲಿ ವಾಹನ ನಿಲ್ಲಿಸುವಂತಾಗಬೇಕು.
-ರಾಜು ಪೂಜಾರಿ, ಗೌರವಾಧ್ಯಕ್ಷರು, ರಿಕ್ಷಾ ಚಾಲಕ, ಮಾಲಕ ಸಂಘ, ಆಕಾಶವಾಣಿ

ಶೀಘ್ರದಲ್ಲಿ ಸೂಕ್ತ ಕ್ರಮ
ಆಕಾಶವಾಣಿ ಜಂಕ್ಷನ್‌ನ ಸಂಚಾರೀ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಬಸ್‌ಗಳು ಕಡ್ಡಾಯವಾಗಿ ಸರ್ವಿಸ್‌ ರಸ್ತೆಯಲ್ಲಿ ಸಂಚರಿಸುವಂತೆ, ಜಂಕ್ಷನ್‌ ಹಿಂದೆಯೇ ಬಸ್‌ನಿಲ್ದಾಣದಲ್ಲಿ ಬಸ್‌ ನಿಲ್ಲಿಸುವಂತೆ, ಸರ್ವಿಸ್‌ ರಸ್ತೆ ಬದಿಯಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸದಂತೆ ಜಾಗೃತಿ ಮೂಡಿಸಿ ಕಾರ್ಯಾಚರಣೆ ನಡೆಸಲಾಗುವುದು. ಘನ ವಾಹನಗಳು ಟೋಲ್‌ ತಪ್ಪಿಸಿ ಬಾರಕೂರು ರಸ್ತೆಯಲ್ಲಿ ಸಂಚರಿಸದಂತೆ ಕಮಾನು ಅಳವಡಿಸಲಾಗುವುದು.
-ದಿವಾಕರ್‌ ಪಿ.ಎಂ., ಪೊಲೀಸ್‌ ವೃತ್ತ ನಿರೀಕ್ಷಕರು, ಬ್ರಹ್ಮಾವರ

ಸರ್ವಿಸ್‌ ರಸ್ತೆ ಉದ್ದಕ್ಕೂ ವಾಹನ ಪಾರ್ಕಿಂಗ್‌
ಆಕಾಶವಾಣಿ ಜಂಕ್ಷನ್‌ಗಿಂತ ಹಿಂದೆ ಪೆಟ್ರೋಲ್‌ ಪಂಪ್‌ ಕಡೆ ಸರ್ವಿಸ್‌ ರಸ್ತೆ ಉದ್ದಕ್ಕೂ ಕಾರುಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದ ಒಳ ಬರುವ ಖಾಸಗಿ ಬಸ್‌ಗಳು ಸಹಿತ ಇತರ ಪ್ರಯಾಣಿಕರಿಗೂ ತೊಂದರೆಯಾಗುತ್ತದೆ. ವಾರದ ಸಂತೆ ಸೋಮವಾರವಂತೂ ಬಸ್ಟ್ಯಾಂಡ್ ದಿಕ್ಕಿನ ಸರ್ವಿಸ್‌ ರಸ್ತೆಯಲ್ಲೇ ಜನರು ವಾಹನಗಳನ್ನು ನಿಲ್ಲಿಸುವುದರಿಂದ ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

-ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವಚ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.