Bengaluru University; ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ಗೆ ಗೌರವ ಡಾಕ್ಟರೆಟ್ ಪ್ರದಾನ
Team Udayavani, Sep 11, 2024, 11:10 PM IST
ಬೆಂಗಳೂರು: ಕಲೆ, ಸಂಗೀತ ಕ್ಷೇತ್ರದ ಸಾಧನೆಗಾಗಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯವು ಮಂಗಳವಾರ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.
ವಿ.ವಿ.ಯ 59ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಅವರು ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಿದರು.
ಬಳಿಕ ಡಾ| ಗುರುಕಿರಣ್ ಮಾಧ್ಯಮಗಳ ಜತೆಗೆ ಮಾತನಾಡಿ, ಪ್ರತಿಷ್ಠಿತ ಬೆಂಗಳೂರು ವಿ.ವಿ. ಡಾಕ್ಟರೆಟ್ ಸಿಕ್ಕಿರುವುದು ಖುಷಿಯಾಗಿದೆ. ನನ್ನ ಅಪ್ಪ-ಅಮ್ಮನಿಗೆ ನಾನು ಡಾಕ್ಟರ್ ಆಗಬೇಕು ಎಂಬ ಕನಸಿತ್ತು. ಆದರೆ ಈ ಸಂಗೀತದ ಹುಚ್ಚಿನಿಂದ ಎಂಬಿಬಿಎಸ್ ಮಾಡಲು ಆಗಲಿಲ್ಲ. ಕಾಕತಾಳೀಯ ಎಂಬಂತೆ ಇಂದು ಸಂಗೀತ ಕ್ಷೇತ್ರದಲ್ಲಿ ಡಾಕ್ಟರೆಟ್ ಪದವಿ ಸಿಕ್ಕಿದೆ ಎಂದರು.
ಗಾಯಕನಾಗಬೇಕೆಂದು ಚಿತ್ರ ರಂಗಕ್ಕೆ ಬಂದೆ. ಅಲ್ಲಿ ಆಗ ವಿ. ಮನೋಹರ್ ನನಗೆ ಧೈರ್ಯ ತುಂಬಿದ್ದರು. ಉಪೇಂದ್ರ ಸಿನೆಮಾ ಕ್ಷೇತ್ರಕ್ಕೆ ಪರಿಚಯಿಸಿದ್ದರು. ಕೆಲಸ ಮಾಡುತ್ತಾ ಹೋದಾಗ ಆ ಕೆಲಸದಲ್ಲಿ ಖುಷಿ ಇತ್ತು. ಚಿಕ್ಕಂದಿನಿಂದ ನೋಡಿದ ಥಿಯೇಟರ್ನಲ್ಲಿ ಕ್ಯೂನಲ್ಲಿ ನಿಂತುಸಿನೆಮಾ ನೋಡಿದವನಿಗೆ ಸಿನೆಮಾದ ಲ್ಲಿದ್ದವರ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಈ ಕ್ಷೇತ್ರದಲ್ಲಿ ಖುಷಿ ಯಲ್ಲಿ ಇದ್ದೇನೆ. ಈ ಗೌರವ ದಿಂದ ಜವಾಬ್ದಾರಿ ಹೆಚ್ಚಾಗಿದೆ ಎಂದರು.
500 ಕೋಟಿ ರೂ. ವೆಚ್ಚದಲ್ಲಿ
ಎಂಜಿನಿಯರಿಂಗ್ ಕಾಲೇಜು
ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಮಾತನಾಡಿ, ವಿಶ್ವೇಶ್ವರಯ್ಯ ಕಾಲೇಜು ವಿ.ವಿ.ಯನ್ನು ಐಐಟಿ ಮಾದರಿಯಲ್ಲಿ ದೇಶದಲ್ಲಿಯೇ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜು ಮಾಡಲು ಸರಕಾರವು ಆಸಕ್ತಿವಹಿಸಿದೆ. ಜ್ಞಾನಭಾರತಿ ಆವರಣದ 50 ಎಕರೆಗಳಲ್ಲಿ 500 ಕೋ.ರೂ. ವೆಚ್ಚದಲ್ಲಿ ಈ ವಿ.ವಿ.ಯನ್ನು ಅಭಿವೃದ್ಧಿಪಡಿ ಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.