Bengaluru: ನಮ್ಮಲ್ಲೇ ಔಷಧ ಖರೀದಿಸಿ ಎಂದು ಡಿಸಿಪಿಗೆ ಧಮ್ಕಿ; ಸಿಬ್ಬಂದಿ ವಿರುದ್ಧ ಕೇಸ್
Team Udayavani, Sep 12, 2024, 10:36 AM IST
ಬೆಂಗಳೂರು: ತಮ್ಮ ವೈದ್ಯರು ಬರೆದಿರುವ ಔಷಧಿಯನ್ನು ತಮ್ಮ ಮೆಡಿಕಲ್ ಸ್ಟೋರ್ನಲ್ಲೇ ಖರೀದಿಸಬೇಕು ಎಂದು ಡಿಸಿಪಿಗೆ ಬೆದರಿಕೆ ಹಾಕಿದ ಖಾಸಗಿ ಆಸ್ಪತ್ರೆಯ ಮೆಡಿಕಲ್ ಸ್ಟೋರ್ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸಿಪಿ ಪರವಾಗಿ ವಿವಿಐಪಿ ಭದ್ರತೆ ವಿಭಾಗದ ಆರ್ಎಸ್ಐ ಭೈರಯ್ಯ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.
ಸೆ. 6 ರಂದು ಆಸ್ಪತ್ರೆ ಒಳರೋಗಿಯಾಗಿ ವಿವಿಐಪಿ ಭದ್ರತೆ ಡಿಸಿಪಿ ಮಂಜುನಾಥ್ ದಾಖಲಾಗಿದ್ದರು. ಈ ವೇಳೆ ಅಲ್ಲಿನ ವೈದ್ಯರು ಸಲಹಾ ಚೀಟಿ (ಪ್ರಿಸ್ಕ್ರಿಪ್ಷನ್)ಯಲ್ಲಿ 3 ರೀತಿಯ ಮಾತ್ರೆಗಳನ್ನು ಬಿಡಿ ಬಿಡಿಯಾಗಿ ತೆಗೆದುಕೊಳ್ಳುವಂತೆ ಬರೆದಿದ್ದರು. ಅದನ್ನು ಆಸ್ಪತ್ರೆ ಮೆಡಿಕಲ್ ಸ್ಟೋರ್ನಲ್ಲಿ ಡಿಸಿಪಿ ಅವರು ಕೇಳಿದ್ದು, ಈ ವೇಳೆ ಪೂರ್ತಿ ಮಾತ್ರೆಯ ಶೀಟ್ ಕೊಳ್ಳಲು ಅಲ್ಲಿನ ಸಿಬ್ಬಂದಿ ನಾಗರಾಜ್ ತಿಳಿಸಿದ್ದ. ಆಗ ಪೂರ್ತಿ ಶೀಟ್ ಕೊಳ್ಳಲು ಡಿಸಿಪಿ ನಿರಾಕರಿಸಿದಾಗ ನಮ್ಮ ವೈದ್ಯರು ಬರೆದಿರುವ ಮಾತ್ರೆ ಬೇರೆಡೆ ಸಿಗುವುದಿಲ್ಲ. ನೀವು ಇಲ್ಲೇ ಬಂದು ಖರೀದಿಸಬೇಕಾಗುತ್ತದೆ ಎಂದು ಹೆದರಿಸಿ, ನಾನು ಕೊಟ್ಟಷ್ಟು ಮಾತ್ರೆಗಳನ್ನು ತೆಗೆದುಕೊಂಡು ಹೋಗಬೇಕೆಂದಿದ್ದಾನೆ. ಅಲ್ಲದೇ ಇದು ನಮ್ಮ ಆಸ್ಪತ್ರೆಯ ರೂಲ್ಸ್ ಎಂದು ಧಮ್ಕಿ ಹಾಕಿದ್ದ.
ವೈದ್ಯರು ಸೂಚಿಸಿದ ಸಂಖ್ಯೆಯ ಮಾತ್ರೆಗಳನ್ನು ನೀಡದೇ ಪೂರ್ತಿ ಶೀಟ್ ಮಾತ್ರೆಗಳನ್ನು ತೆಗೆದುಕೊಂಡು ಹೋಗ ಬೇಕೆಂದು ಲಾಭ ಗಳಿಸುವ ಉದ್ದೇಶ ದಿಂದ ರೋಗಿಗಳಿಗೆ ಮೋಸ ಮಾಡಿರುವ ಮೆಡಿಕಲ್ ಸಿಬ್ಬಂದಿ ನಾಗರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖೀಸಲಾಗಿದ್ದು, ದೂರಿನನ್ವಯ ಮೆಡಿಕಲ್ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಈತ ಈ ಹಿಂದೆಯೂ ಹಲವು ಪೊಲೀಸ್ ಸಿಬ್ಬಂದಿಗೆ ಪೂರ್ತಿ ಶೀಟ್ನ ಮಾತ್ರೆಗಳನ್ನು ತೆಗೆದುಕೊಂಡು ಹೋಗಬೇಕೆಂದು ಸೂಚಿಸಿ ಮೋಸ ಮಾಡಿದ್ದಾನೆ ಎಂದು ಹೇಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!
Bengaluru: ಮೆಜೆಸ್ಟಿಕ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು
Bengaluru: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 9 ಮೊಬೈಲ್ ಫೋನ್ಗಳು ಪತ್ತೆ!
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Anekal: ಶಾಲಾ ಬಸ್ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.