Basroor: ಜಲ್ಲಿ ಕಲ್ಲುಗಳನ್ನು ಸುರಿದರೂ ಪ್ರಯೋಜನ ಶೂನ್ಯ
ಕೋಣಿ-ಬಸ್ರೂರು ಹೆದ್ದಾರಿಯುದ್ದಕ್ಕೂ ಗುಂಡಿಗಳ ಸಾಲು
Team Udayavani, Sep 12, 2024, 1:09 PM IST
ಬಸ್ರೂರು: ಕುಂದಾಪುರದಿಂದ ಬಸ್ರೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಕೋಣಿ, ಸಟ್ವಾಡಿ ಮತ್ತಿತರ ಹಲವೆಡೆಗಳಲ್ಲಿ ಮತ್ತೆ ಬೃಹದಾಕಾರವಾದ ಹೊಂಡ- ಗುಂಡಿಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ಪ್ರಯಾಸಪಟ್ಟು ಸಂಚರಿಸುವಂತಾಗಿದೆ.
ಬಸ್ರೂರಿನಿಂದ ಕುಂದಾಪುರಕ್ಕೆ ಸಾಗುವ ರಸ್ತೆಯ ಸಟ್ವಾಡಿಯ ಸರ್ಕಲ್ನ ಸುತ್ತ, ಮುಂದೆ ಕೋಣಿಯ ಎಚ್ಎಂಟಿ ರಸ್ತೆಯ ತಿರುವಿನವರೆಗೆ ರಸ್ತೆಯುದ್ದಕ್ಕೂ ಹೊಂಡ ಬಿದ್ದಿದೆ. ಈ ಹೊಂಡದಿಂದಾಗಿ ಇಲ್ಲಿ ಸಂಚರಿಸುವ ವಾಹನಗಳು ಸಂಕಷ್ಟ ಅನುಭವಿಸುತ್ತಿವೆ. ಹಲವು ದ್ವಿಚಕ್ರ ವಾಹನಗಳು ಇಲ್ಲಿ ರಾತ್ರಿ ವೇಳೆ ಪಲ್ಟಿಯಾಗಿವೆ.
ಈ ಹಿಂದೆ ಭಾರೀ ಮಳೆ ಬರುತ್ತಿರುವಾಗಲೇ ಒಂದು ಲಾರಿ ಜಲ್ಲಿ ಕಲ್ಲುಗಳನ್ನು ಹಾಕಲಾಗಿತ್ತು. ಹಲವು ಸಮಯದಿಂದ ಹೊಂಡ ಬಿದ್ದ ಈ ರಸ್ತೆಯ ಹೊಂಡಗಳಿಗೆ ಮತ್ತೆ ಎರಡನೇ ಬಾರಿಗೆ ಸುಮಾರು ಹದಿನೈದು ಬುಟ್ಟಿಗಳಷ್ಟು ಜಲ್ಲಿಕಲ್ಲುಗಳನ್ನು ಹಾಕಲಾಗಿತ್ತು. ಹೊಂಡಕ್ಕೆ ಜಲ್ಲಿಕಲ್ಲುಗಳನ್ನು ತಂದು ಹಾಕುವುದರಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಈ ಹೊಂಡಗಳಿಗೆ ಜಲ್ಲಿ ಕಲ್ಲುಗಳನ್ನು ಹಾಕಿ ಮುಚ್ಚಿ ಮೇಲೆ ಕಾಕ್ರೀಟ್ ಅಥವಾ ಡಾಮರು ಹಾಕಿ ತೇಪೆ ಕಾರ್ಯ ಮಾಡಬೇಕಾಗಿದೆ. ಇಲ್ಲವೇ ಇಡೀ ರಸ್ತೆಯನ್ನೇ ಪುನರ್ ನಿರ್ಮಾಣ ಮಾಡಿ ಸರಿಪಡಿಸಬೇಕಾಗಿದೆ ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಾಗಲೇ ಹಲವು ವಾಹನಗಳು ಪಲ್ಟಿಯಾದ ಈ ಹೊಂಡಗಳಿಗೆ ಶಾಶ್ವತ ಪರಿಹಾರವನ್ನು ತತ್ಕ್ಷಣ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.