Kollywood: ಹಿಟ್ ಲವ್ ಸ್ಟೋರಿ ʼ96ʼ ಸೀಕ್ವೆಲ್ ಕನ್ಫರ್ಮ್; ನಿರ್ದೇಶಕರು ಹೇಳಿದ್ದೇನು?
Team Udayavani, Sep 12, 2024, 4:28 PM IST
ಚೆನ್ನೈ: 2018ರಲ್ಲಿ ಕಾಲಿವುಡ್ನಲ್ಲಿ ʼ96ʼ (96 Movie) ಮೋಡಿ ಮಾಡಿತ್ತು. ವಿಜಯ್ ಸೇತುಪತಿ(Vijay Sethupathi) – ತ್ರಿಷಾ ಕೃಷ್ಣನ್(Trisha Krishnan) ಅವರ ಅಭಿನಯಕ್ಕೆ ಕಾಲಿವುಡ್ ಫಿದಾ ಆಗಿತ್ತು.
ಸಿ ಪ್ರೇಮ್ ಕುಮಾರ್( C Prem Kumar) ನಿರ್ದೇಶನದಲ್ಲಿ ಬಂದಿದ್ದ ʼ96ʼ ಕನ್ನಡ, ತೆಲುಗಿನಲ್ಲೂ ರಿಮೇಕ್ ಆಗಿ ಸದ್ದು ಮಾಡಿತ್ತು. ಇದೀಗ 6 ವರ್ಷದ ಬಳಿಕ ʼ96ʼ ಸಿನಿಮಾದ ಸೀಕ್ವೆಲ್ ಬಗ್ಗೆ ನಿರ್ದೇಶಕ ಪ್ರೇಮ್ ಕುಮಾರ್ ಮಾತನಾಡಿದ್ದಾರೆ.
ತಮಿಳು ಯೂಟ್ಯೂಬ್ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “96 ಭಾಗ- 2 ನಲ್ಲಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ಆರಂಭದಲ್ಲಿ, ನಾನು ’96’ ನ ಸೀಕ್ವೆಲ್ ಮಾಡಲು ಉತ್ಸುಕನಾಗಿರಲಿಲ್ಲ. ಆದರೆ ಯೋಚನೆಗಳು ಬದಲಾಗುತ್ತವೆ. ’96 ಪಾರ್ಟ್ – 2′ ಸ್ಕ್ರಿಪ್ಟ್ ಈಗಾಗಲೇ ಬರೆದು ಮುಗಿಸಿದ್ದೇನೆ. ಕೆಲವೇ ಕೆಲ ಭಾಗಗಳು ಮಾತ್ರ ಉಳಿದಿವೆ” ಎಂದು ಅವರು ಹೇಳಿದ್ದಾರೆ.
“ನಾನು ವಿಜಯ್ ಸೇತುಪತಿ ಅವರ ಪತ್ನಿಯೊಂದಿಗೆ ಕಥೆಯನ್ನು ಹಂಚಿಕೊಂಡಿದ್ದೇನೆ. ಅವರು ಅದನ್ನು ಇಷ್ಟಪಟ್ಟಿದ್ದಾರೆ. ಸೇತುಪತಿ ಮತ್ತು ತ್ರಿಶಾ ತಮ್ಮ ಡೇಟ್ಗಳನ್ನು ನಿಗದಿಪಡಿಸುತ್ತಾರೆಯೇ ಎಂದು ನಾನು ನೋಡಬೇಕು” ಎಂದು ಪ್ರೇಮ್ ಕುಮಾರ್ ಹೇಳಿದ್ದಾರೆ.
ʼ96ʼನಲ್ಲಿ ಸೇತುಪತಿ ರಾಮ್ ಆಗಿ ನಟಿಸಿದ್ದು, ತ್ರಿಷಾ ಜಾನು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 22 ವರ್ಷಗಳ ಬಳಿಕ ಇಬ್ಬರು ಸ್ಕೂಲ್ ಮೇಟ್ ಗಳು ಭೇಟಿ ಆಗುವ ಕ್ಷಣ ಹಾಗೂ ಹಿನ್ನೆಲೆಯ ಕಥೆಯನ್ನು ಚಿತ್ರ ಒಳಗೊಂಡಿದೆ.
ಸದ್ಯ ವಿಜಯ್ ಸೇತುಪತಿ ʼಬಿಗ್ ಬಾಸ್ ತಮಿಳು -8ʼ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದು, ಇದಾದ ಬಳಿಕ ‘ಗಾಂಧಿ ಟಾಕ್ಸ್ʼ, ‘ವಿಧುತಲೈ -2’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತ ತ್ರಿಷಾ ‘ವಿದಾ ಮುಯಾರ್ಚಿ’, ‘ವಿಶ್ವಂಭರ’, ‘ಐಡೆಂಟಿಟಿ’, ‘ರಾಮ್’, ಮತ್ತು ‘ಥಗ್ ಲೈಫ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನ
Kanguva Movie: ಸೂರ್ಯ ಪ್ಯಾನ್ ಇಂಡಿಯಾ ʼಕಂಗುವʼ ಹೊಸ ರಿಲೀಸ್ ಡೇಟ್ ಔಟ್
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
Actress Sakunthala: ಹೃದಯಾಘಾತದಿಂದ ಬಹುಭಾಷಾ ನಟಿ ʼಸಿ.ಐ.ಡಿ. ಶಕುಂತಲಾʼ ನಿಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Bajpe ಬಸ್ ನಿಲ್ದಾಣ ಕಟ್ಟಡ ಪೂರ್ಣ; 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.