Raghu Ramappa; ದೇಶದಲ್ಲಿ ಬರೀ ಮೂವರು ನೈಸರ್ಗಿಕ ದೇಹದಾರ್ಢ್ಯ ಪಟುಗಳು: ರಘು ರಾಮಪ್ಪ


Team Udayavani, Sep 12, 2024, 5:59 PM IST

ದೇಶದಲ್ಲಿ ಬರೀ ಮೂವರು ನೈಸರ್ಗಿಕ ದೇಹದಾರ್ಡ್ಯ ಪಟುಗಳು: ರಘು ರಾಮಪ್ಪ

ಬೆಂಗಳೂರು: ಈ ದಿನಗಳಲ್ಲಿ ಉದ್ದೀಪನಾ ಮದ್ದಿಲ್ಲದ ಕ್ರೀಡೆಯನ್ನು ಊಹಿಸಿಕೊಳ್ಳುವುದು ಕಷ್ಟ. ಅಂಥದ್ದರಲ್ಲಿ ರಘು ರಾಮಪ್ಪ ನೈಸರ್ಗಿಕ ದೇಹದಾರ್ಢ್ಯ ಪಟುವಾಗಿ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಆರ್ಥಿಕ ಸಮಸ್ಯೆಯ ಜೊತೆಗೆ ಹತ್ತಾರು ಸವಾಲುಗಳಿದ್ದರೂ ಅವನ್ನೆಲ್ಲಾ ದಾಟಿ ಅವರು ನ್ಯಾಚುರಲ್‌ ಬಾಡಿ ಬಿಲ್ಡಿರ್‌ ಆಗಿ ಸಾಧಿಸಿರುವುದು ವಿಶೇಷ. ನೈಸರ್ಗಿಕ ದೇಹದಾರ್ಢ್ಯ ಹಾಗೂ ಅದಕ್ಕಿರುವ ಸವಾಲುಗಳ ಬಗ್ಗೆ ಉದಯವಾಣಿ ಜೊತೆಗೆ ಮಾತನಾಡಿರುವ ಅವರು, ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ಸೇವಿಸುವ ಪ್ರತೀ ಪದಾರ್ಥದ ಮೇಲೂ ಎಚ್ಚರಿಕೆ ಅಗತ್ಯ: ದೇಹದಾರ್ಢ್ಯ ಪಟುಗಳು ತಾವು ಸೇವಿಸುವ ಪ್ರತಿಯೊಂದು ಪದಾರ್ಥವೂ ಅಂ.ರಾ. ಉದ್ದೀಪನ ನಿಗ್ರಹ ಘಟಕ (ವಾಡಾ) ಪಟ್ಟಿ ಮಾಡಿರುವ ನಿಷೇಧಿತ ಅಂಶಗಳನ್ನು ಒಳಗೊಂಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇದು ದೊಡ್ಡ ಸವಾಲು.

ದೇಶದಲ್ಲಿ ಬರೀ 3 ನೈಸರ್ಗಿಕ ಪಟುಗಳು: ನೈಸರ್ಗಿಕ ದೇಹದಾರ್ಢ್ಯ ಪಟುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪರ ಸದ್ಯ ಸ್ಪರ್ಧೆ ಮಾಡುತ್ತಿರುವುದು ಕೇವಲ ಮೂರು ಮಂದಿ ಮಾತ್ರ. ಅವರೆಂದರೆ ರಘು, ಶೋಧನ್‌ ಜತೆಗೆ ಮಣಿಪುರದ ರೋಷನ್‌ ನೆಪ್ರಾಮ್‌.

ಡೋಪಿಂಗ್‌ ಪತ್ತೆಯಾದರೆ ಆಜೀವ ನಿಷೇಧ: ಯಾವುದೇ ಬಾಡಿಬಿಲ್ಡರ್‌ ನಿಷೇಧಿತ ಪದಾರ್ಥ ಸೇವಿಸಿರುವುದು ದೃಢಪಟ್ಟರೆ ಆತನ ಫೋಟೋ ಸಮೇತ ಸಂಪೂರ್ಣ ವಿವರಗಳನ್ನು ಐಎನ್‌ಬಿಎ ವೆಬ್‌ಸೈಟ್‌ನಲ್ಲಿರುವ “ಹಾಲ್‌ ಆಫ್ ಶೇಮ್‌’ಗೆ ಸೇರಿಸಲಾಗುತ್ತದೆ. ಆತ ಆಜೀವ ನಿಷೇಧಕ್ಕೊಳಗಾಗುತ್ತಾನೆ ಎಂದು ರಘು ವಿವರಿಸಿದ್ದಾರೆ.

ಭಾರತದಲ್ಲಿಲ್ಲ ಡೋಪ್‌ ಪರೀಕ್ಷಾ ಕೇಂದ್ರ!: ನೈಸರ್ಗಿಕ ದೇಹದಾರ್ಢ್ಯ ಪಟುವಿನ ಡೋಪ್‌ ಪರೀಕ್ಷೆ ಮಾಡಬೇಕಿದ್ದಲ್ಲಿ ಅದು ಅಮೆರಿಕದ ಕೇಂದ್ರಕ್ಕೆ ಕಳುಹಿಸಬೇಕಾದ ಅನಿವಾರ್ಯತೆ ಇದೆ. ಭಾರತದಲ್ಲಿ ಯಾವುದೇ ಡೋಪ್‌ ಪರೀಕ್ಷಾ ಕೇಂದ್ರ ಇಲ್ಲ. ಇದು ಸಹ ಸ್ಪರ್ಧಿಗಳಿಗೆ ಒಂದು ಅನನುಕೂಲ.

ವಿಪರೀತ ದುಬಾರಿ, ಬೆಂಬಲದ ಕೊರತೆ: ನೈಸರ್ಗಿಕ ದೇಹದಾರ್ಢ್ಯ ಪಟುವಾಗಿ ಸಾಧಿಸಲು ಬಯಸುವವರಿಗೆ ಸರಿಯಾದ ಬೆಂಬಲ ಸಿಗುತ್ತಿಲ್ಲ. ಪ್ರತಿ ವರ್ಷ ಜೂನ್‌ನಿಂದ ನವೆಂಬರ್‌ವರೆಗೂ 5-6 ಪ್ರತಿಷ್ಠಿತ ಅಂತಾರಾಷ್ಟ್ರೀಯ ಕೂಟಗಳು ನಡೆಯುತ್ತವೆ. ಯಾವುದೇ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಬೇಕಿದ್ದರೂ ವಿಮಾನದ ಟಿಕೆಟ್‌, ಹೋಟೆಲ್‌ ರೂಂ ಬಾಡಿಗೆ, ಸ್ಪರ್ಧೆಗೆ ಕಟ್ಟಬೇಕಿರುವ ಶುಲ್ಕ, ಊಟ ಇತ್ಯಾದಿ ಸೇರಿ ಏನಿಲ್ಲವೆಂದರೂ 4ರಿಂದ 5 ಲಕ್ಷ ರೂ. ಖರ್ಚಾಗುತ್ತದೆ ಎಂದು ರಘು ತಮಗೆದುರಾಗುವ ಆರ್ಥಿಕ ಸಮಸ್ಯೆಯನ್ನು ತೆರೆದಿಟ್ಟರು.

ಸ್ಟಿರಾಯ್ಡ್ಸ್ ಬಳಕೆಯಿಂದ ಗಂಭೀರ ಅನಾರೋಗ್ಯ: ಸ್ಟಿರಾಯ್ಡ್ಸ್ ಉಪಯೋಗಿಸುವುದರಿಂದ ತಕ್ಷಣಕ್ಕೆ ನೀವು ಸದೃಢ ದೇಹವನ್ನು ಹೊಂದುತ್ತಿರುವಂತೆ ಭಾಸವಾದರೂ ನಂತರ ಅಡ್ಡ ಪರಿಣಾಮಗಳೇ ಜಾಸ್ತಿ. ಉದಾಹರಣೆಗೆ ಚರ್ಮದ ಕಾಂತಿಯಲ್ಲಿ ಬದಲಾವಣೆ, ಮೊಡವೆಗಳು, ನಿದ್ರೆ ಬಾರದಿರುವುದು, ರಕ್ತದ ಒತ್ತಡ ಹೆಚ್ಚಾಗುವಿಕೆ, ಹಸಿವು ಹಾಗೂ ತೂಕ ಜಾಸ್ತಿಯಾಗುವಿಕೆ, ಕೈಕಾಲು ಬಾತುಕೊಳ್ಳುವಿಕೆ, ರೋಗ ನಿರೋಧಕ ಶಕ್ತಿ ಕುಗ್ಗುವುದು ಸೇರಿ ಬೇರೆ ಬೇರೆ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಉದ್ದೀಪನ ಮದ್ದಿನ ಕರಾಳ ಮುಖವನ್ನು ರಘು ಬಿಚ್ಚಿಟ್ಟರು.

ವಿಶ್ವಚಾಂಪಿಯನ್‌ಶಿಪ್‌: ರಘು ರಾಮಪ್ಪಗೆ 2 ಚಿನ್ನ

ಮೇ ತಿಂಗಳಲ್ಲಿ ಸಿಂಗಪೂರ್‌ನಲ್ಲಿ ಏಷ್ಯಾ ಮಟ್ಟದ ನೈಸರ್ಗಿಕ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗಿಯಾದ ರಘು, ಅಲ್ಲಿ ಗೆಲುವು ಪಡೆದು ವಿಶ್ವ ಚಾಂಪಿಯನ್‌ಶಿಪ್‌ ಗೆ ಅಡಿಯಿಟ್ಟರು. 30-35 ರಾಷ್ಟಗಳ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದ ಈ ಕೂಟದಲ್ಲಿ ಭಾರತದಿಂದ ಕೇವಲ ಇಬ್ಬರು ಕನ್ನಡಿಗರಾದ ರಘುರಾಮಪ್ಪ, ಶೋಧನ್‌ ರೈ ಪಾಲ್ಗೊಂಡಿದ್ದರು. ಇತ್ತೀಚೆಗೆ ಆಗಸ್ಟ್‌ನಲ್ಲಿ ನ್ಯೂಜಿಲೆಂಡ್‌ ನಲ್ಲಿ ಆಯೋಜಿಸಿದ್ದ ವಿಶ್ವಚಾಂಪಿಯನ್‌ಶಿಪ್‌ ನಲ್ಲಿ ರಘು 2 ಚಿನ್ನ ಗೆದ್ದಿದ್ದಾರೆ.

ತೇಜಸ್ವಿನಿ ಸಿ ಶಾಸ್ತ್ರಿ

ಟಾಪ್ ನ್ಯೂಸ್

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

China Open 2024: ಒಲಿಂಪಿಕ್‌ ವಿಜೇತೆಗೆ ಮಾಳವಿಕಾ ಆಘಾತ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.