Asian Champions Trophy ಹಾಕಿ: ಸತತ ನಾಲ್ಕನೇ ಪಂದ್ಯ ಗೆದ್ದ ಭಾರತ
ಕೊರಿಯಾ ವಿರುದ್ಧ 3-1 ಗೆಲುವು... ಹರ್ಮನ್ಪ್ರೀತ್ ಅವಳಿ ಗೋಲು
Team Udayavani, Sep 12, 2024, 11:50 PM IST
ಹುಲುನ್ಬಿಯುರ್ (ಚೀನ): “ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ’ ಹಾಕಿ ಪಂದ್ಯಾವಳಿಯಲ್ಲಿ ಭಾರತ ಸತತ 4ನೇ ಜಯದೊಂದಿಗೆ ಮುನ್ನುಗ್ಗಿದೆ. ಈಗಾಗಲೇ ಸೆಮಿಫೈ ನಲ್ಗೆ ಲಗ್ಗೆ ಹಾಕಿರುವ ಹರ್ಮನ್ಪ್ರೀತ್ ಸಿಂಗ್ ಪಡೆ, ಗುರುವಾರದ ಮುಖಾಮುಖಿಯಲ್ಲಿ ಕೊರಿಯಾವನ್ನು 3-1 ಗೋಲುಗಳಿಂದ ಮಣಿಸಿತು. ಇದರಿಂದ ಶನಿವಾರದ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲು ಹೆಚ್ಚಿನ ಆತ್ಮವಿಶ್ವಾಸ ಗಳಿಸಿತು.
ಅಮೋಘ ಫಾರ್ಮ್ನಲ್ಲಿರುವ ಭಾರತ, ಕೊರಿಯಾ ವಿರುದ್ಧ ಮೊದಲ ಕ್ವಾರ್ಟರ್ನಲ್ಲೇ 2 ಗೋಲು ಬಾರಿಸಿ ಮೇಲುಗೈ ಸಾಧಿಸಿತು. ಅರೈಜೀತ್ ಸಿಂಗ್ 8ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಮರು ನಿಮಿಷದಲ್ಲೇ ಡ್ರ್ಯಾಗ್ಫ್ಲಿಕರ್ ಹರ್ಮನ್ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಒಂದನ್ನು ಗೋಲಾಗಿ ಪರಿವರ್ತಿಸಿದರು. 43ನೇ ನಿಮಿಷದಲ್ಲಿ ಇನ್ನೊಂದು ಪೆನಾಲ್ಟಿ ಕಾರ್ನರನ್ನೂ ಗೋಲಾಗಿಸಿದರು. ಕೊರಿಯಾದ ಏಕೈಕ ಗೋಲು 30ನೇ ನಿಮಿಷದಲ್ಲಿ ಜಿಹುನ್ ಯಾಂಗ್ ಅವರಿಂದ ದಾಖಲಾಯಿತು.
ಗೋಲ್ ಕೀಪರ್ ಸೂರಜ್ ಕರ್ಕೆರಾ ಎದುರಾಳಿಯ ಕೆಲವು ಹೊಡೆತಗಳನ್ನು ಅಮೋಘ ರೀತಿಯಲ್ಲಿ ತಡೆದು ಭಾರತದ ಗೆಲುವಿನಲ್ಲಿ ತಮ್ಮ ಪಾತ್ರವನ್ನೂ ತೆರೆದಿಟ್ಟರು. ಭಾರತದ ರಕ್ಷಣಾ ವಿಭಾಗ ಕೂಡ ಬಲಿಷ್ಠವಾಗಿ ಗೋಚರಿಸಿತು. 35ನೇ ನಿಮಿಷದಲ್ಲಿ ಕೊರಿಯಾ ಬೆನ್ನು ಬೆನ್ನಿಗೆ ಪೆನಾಲ್ಟಿ ಕಾರ್ನರ್ ಪಡೆದ ವೇಳೆ ಎರಡನ್ನೂ ತಡೆಯುವಲ್ಲಿ ಯಶಸ್ವಿಯಾಯಿತು. ಭಾರತ ಇದಕ್ಕೂ ಮುನ್ನ ಚೀನ ವಿರುದ್ಧ 3-0, ಜಪಾನ್ ವಿರುದ್ಧ 5-0 ಹಾಗೂ ಮಲೇಷ್ಯಾ ವಿರುದ್ಧ 8-1 ಅಂತರದ ಜಯ ಸಾಧಿಸಿತ್ತು.
ಸರಪಂಚ್ ಕಾ ಪಂಚ್!
ಇಂದು ಗಳಿಸಿದ ಪೆನಾಲ್ಟಿ ಕಾರ್ನರ್ಗಳ ನೆರವಿನೊಂದಿಗೆ, ನಾಯಕ ಹರ್ಮನ್ಪ್ರೀತ್ ಸಿಂಗ್ ತಮ್ಮ ದ್ವಿಶತಕ ಗೋಲುಗಳನ್ನು ಪೂರ್ಣಗೊಳಿಸಿದರು(201).ಈ ಗೋಲ್ ಸ್ಕೋರಿಂಗ್ ಫಾರ್ಮ್ ಮುಂದುವರಿಯಲಿ ಮತ್ತು ಟೀಮ್ ಇಂಡಿಯಾಕ್ಕೆ ಹೆಚ್ಚಿನ ಪ್ರಶಸ್ತಿಗಳನ್ನು ತರಲಿ” ಎಂದು ಹಾಕಿ ಇಂಡಿಯಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಶುಭ ಹಾರೈಸಿದೆ.
Sarpanch ka Punch! 💪🏻
With a brace of penalty corners scored today, Captain Harmanpreet Singh completed his double century of goals today.
May this goal-scoring form continue and he brings more laurels to team India!#HarmanpreetSingh #GoalMachine #HockeyIndia #IndiaKaGame
.
.… pic.twitter.com/yfWET94JjF— Hockey India (@TheHockeyIndia) September 12, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.