![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 13, 2024, 6:31 AM IST
ಅನಂತಪುರ: ಇಶಾನ್ ಕಿಶನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಪುನರಾಗಮನವನ್ನು ಪ್ರಚಂಡ ಸೆಂಚುರಿಯೊಂದಿಗೆ ಸಂಭ್ರಮಿ ಸಿದ್ದಾರೆ. ದುಲೀಪ್ ಟ್ರೋಫಿ ಕ್ರಿಕೆಟ್ನಲ್ಲಿ ಇಂಡಿಯಾ ಸಿ ಪರ ಆಡುತ್ತಿರುವ ಅವರು ಇಂಡಿಯಾ ಬಿ ವಿರುದ್ಧ 111 ರನ್ ಬಾರಿಸಿ ಮಿಂಚಿದರು. ಇವರ ಸಾಹಸದಿಂದ ಮೊದಲ ದಿನದಾಟದಲ್ಲಿ ಇಂಡಿಯಾ ಸಿ 5 ವಿಕೆಟಿಗೆ 357 ರನ್ ಪೇರಿಸಿದೆ.
ಇಶಾನ್ ಕಿಶನ್ ಮೊದಲ ಸುತ್ತಿನ ಪಂದ್ಯದ ವೇಳೆ ಇಂಡಿಯಾ ಡಿ ತಂಡದಲ್ಲಿದ್ದರು. ಆದರೆ ಕಡೇ ಗಳಿಗೆಯಲ್ಲಿ ತೊಡೆಯ ನೋವಿನಿಂದ ಹೊರಗುಳಿಯಬೇಕಾಯಿತು. ಈ ಬ್ಯಾಟಿಂಗ್ ಸಾಹಸದೊಂದಿಗೆ ಅವರ ಫಿಟ್ನೆಸ್ ಕೂಡ ಸಾಬೀತಾದಂತಾಯಿತು. ಇಶಾನ್ ಕಿಶನ್ ಅವರ 111 ರನ್ 126 ಎಸೆತಗಳಲ್ಲಿ ಬಂತು. ಸಿಡಿಸಿದ್ದು 14 ಬೌಂಡರಿ ಹಾಗೂ 3 ಸಿಕ್ಸರ್. ಅವರು 4ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಇಶಾನ್ ಕಿಶನ್ “ಬುಚ್ಚಿ ಬಾಬು’ ಕ್ರಿಕೆಟ್ ಕೂಟದ ಮೊದಲ ಪಂದ್ಯದಲ್ಲೂ ಶತಕ ಹೊಡೆದಿದ್ದರು.
78 ರನ್ ಮಾಡಿದ ಬಾಬಾ ಇಂದ್ರಜಿತ್ ಮತ್ತೋರ್ವ ಪ್ರಮುಖ ಸ್ಕೋರರ್. ಇವರಿಬ್ಬರ ಜತೆಯಾಟದಲ್ಲಿ 189 ರನ್ ಹರಿದು ಬಂತು. ಕೇವಲ 2 ಎಸೆತ ಎದುರಿಸಿದೊಡನೆ ಗಾಯಾಳಾದ ನಾಯಕ ಋತುರಾಜ್ ಗಾಯಕ್ವಾಡ್ ಮರಳಿ ಕ್ರೀಸ್ ಇಳಿದಿದ್ದು, 46 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸಾಯಿ ಸುದರ್ಶನ್ 43, ರಜತ್ ಪಾಟೀದಾರ್ 40 ರನ್ ಮಾಡಿದರು.
ಮುಲಾನಿ-ತುಷಾರ್ ಆಸರೆ
ಇಂಡಿಯಾ ಡಿ ಎದುರಿನ ಇನ್ನೊಂದು ಪಂದ್ಯದಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿದ ಇಂಡಿಯಾ ಎ ತಂಡಕ್ಕೆ ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ಆಧಾರವಾಗಿದ್ದಾರೆ. 93 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ಇಂಡಿಯಾ ಎ, ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 288 ರನ್ ಪೇರಿಸಿದೆ.
ಶಮ್ಸ್ ಮುಲಾನಿ 88 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ (174 ಎಸೆತ, 8 ಬೌಂಡರಿ, 3 ಸಿಕ್ಸರ್). ತನುಷ್ 53 ರನ್ ಮಾಡಿದರು. ಹರ್ಷಿತ್ ರಾಣಾ, ವಿದ್ವತ್ ಕಾವೇರಪ್ಪ ಮತ್ತು ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಉರುಳಿಸಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.