UV Fusion: ಗಿಡಮೂಲಿಕೆಗಳ ಗುಣ ಮರೆಯದಿರೋಣ


Team Udayavani, Sep 13, 2024, 12:40 PM IST

13-uv-fusion

ನಮ್ಮ ಸುತ್ತ ಮುತ್ತ ನಾವು ಹಲವಾರು ರೀತಿಯ ಔಷಧಿಯ ಸಸ್ಯಗಳನ್ನು ಕಾಣುತ್ತೇವೆ. ಅಂತಹ ಸಸ್ಯಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಎಕ್ಕದ ಗಿಡವು ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ. ಇದರ ಎಲೆ, ಬೇರು, ಹೂವು ಅದ್ಭುತವಾದ ಔಷಧಿಯ ಗುಣವನ್ನು ಹೊಂದಿದೆ. ಇದರಲ್ಲಿ ಎರಡು ರೀತಿಯ ವಿಧಗಳನ್ನು ಕಾಣಬಹುದು.

ಒಂದು ಬಿಳಿ ಎಕ್ಕದ ಗಿಡ ಹಾಗೂ ನೀಲಿ ಬಣ್ಣದ ಎಕ್ಕದ ಗಿಡ. ಎಕ್ಕದ ಗಿಡ, ಎಕ್ಕೆ ಗಿಡ, ಬಿಳಿ ಎಕ್ಕ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಗಿಡವು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯವಾಗಿ ನಾವು ಕಾಣಬಹುದು. ಬಿಳಿ ಎಕ್ಕ ಹಲವಾರು ರೀತಿಯ ಅರೋಗ್ಯದ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡ, ಅದರ ಹೂವು ಮತ್ತು ಹೂವಿನ ಹಾರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಧಾರ್ಮಿಕವಾಗಿ ಇದನ್ನು ಗಣಪತಿ ಹಾಗೂ ಆಂಜನೇಯ ದೇವರಿಗೆ ಒಂದು ಅಥವಾ ಎರಡು ಹೂವು ಆದರೂ ಇಡುವುದು ಆಚಾರ. ಅದೇ ರೀತಿ ಆರೋಗ್ಯದ ವಿಚಾರಕ್ಕೆ ಬಂದಾಗ ಎಕ್ಕದ ಗಿಡ ಶ್ರೀಮಂತವಾಗಿದೆ ಎಕ್ಕದ ಗಿಡದ ಎಲೆಯು ಡಯಬಿಟಿಸ್‌ ಅನ್ನು ಕಡಿಮೆ ಮಾಡುತ್ತದೆ.

ಇದರ ಎಲೆಯನ್ನು ಉಲ್ಟಾ ಮಾಡಿ ಪಾದದ ಮೇಲಿಟ್ಟು ಅದರ ಮೇಲೆ ಸಾಕ್ಸ್‌ ಹಾಕಿ ಬೆಳಗ್ಗಿನಿಂದ ಸಂಜೆಯ ವರೆಗೂ ಇಟ್ಟು ಅನಂತರ ಅದನ್ನ ತೆಗೆದಾಗ ಅದು ಮನುಷ್ಯನ ದೇಹದಲ್ಲಿರುವ ಸಕ್ಕರೆ ಪ್ರಮಾಣ ವನ್ನು ನಿಯಂತ್ರಿಸುವುದಕ್ಕೆ ಸಹಕರಿಯಾಗುತ್ತದೆ.

ಹೀಗೆ 3-4 ತಿಂಗಳು ಮಾಡಿದರೆ ಡಯಾಬಿಟೀಸ್‌ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಇದರ ಬೇರಿನ ರಸವನ್ನು ವಿಷ ಜಂತುಗಳು ಕಚ್ಚಿದಾಗ ಅರಿಶಿನ ದೊಂದಿಗೆ ಸ್ವಲ್ಪ ನೀರನ್ನು ಸೇರಿಸಿ ಹಚ್ಚಿದಾಗ ವಿಷದ ಪ್ರಮಾಣ ಕಡಿಮೆಯಾಗುತ್ತದೆ. ಮಂಡಿನೋವು, ಕಾಲುನೋವು ಇರುವವರು ಈ ಎಕ್ಕದ ಗಿಡದ ಎಲೆಯನ್ನು ಕೆಂಡದ ಮೇಲೆ ಸುಟ್ಟು ಅದನ್ನು ನೋವಿರುವ ಜಾಗಕ್ಕೆ ಕಟ್ಟಿದರೆ ಶೀಘ್ರವಾಗಿ ನೋವು ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೆ ಈ ಗಿಡ ಇರುವ ಜಾಗದಲ್ಲಿ ನೀರು ಇರುತ್ತದೆ ಎಂಬುವುದು ಕೂಡ ನಿಜ. ಹೀಗೆ ಎಲ್ಲ ತರದಲ್ಲೂ ಉಪಯೋಗಕ್ಕೆ ಬರುವ ಈ ಎಕ್ಕೆಯ ಗಿಡವು ಎಲ್ಲರ ಮನೆಯಲ್ಲಿ ಬೆಳೆಸುವುದು ಅಗತ್ಯ. ಹಲವಾರು ಗಿಡಮೂಲಿಕೆಗಳು ನಮಗೆ ಪ್ರಕೃತಿದತ್ತವಾಗಿ ದೊರಕ್ಕುತ್ತದೆ. ಎಕ್ಕ ಮಾತ್ರವಲ್ಲದೆ ಎಲ್ಲಾ ಗಿಡಮೂಲಿಕೆ ಗಳು ತನ್ನದೇ ಆದ ಔಷಧಿಯ ಗುಣ ಹೊಂದಿದ್ದು ಅವೆಲ್ಲದರ ಮಹತ್ವವನ್ನು ಅರಿಯಬೇಕು.

-ದಿವ್ಯಾ

ಎಂ. ಪಿ. ಎಂ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

8-chikkamagaluru

ಗಣಪತಿ ವಿಸರ್ಜನೆ ವೇಳೆ ಕುಣಿಯುವ ವಿಚಾರಕ್ಕೆ ಗಲಾಟೆ; ಯುವಕನಿಗೆ ಬ್ಲೇಡ್ ನಿಂದ ಹಲ್ಲೆ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.