Kuwait: ಕೆಲಸಕ್ಕೆ ತೆರಳಿದ್ದ ಆಂಧ್ರ ಮಹಿಳೆಗೆ ಕುವೈಟ್ ನಲ್ಲಿ ಚಿತ್ರಹಿಂಸೆ…ನನ್ನ ರಕ್ಷಿಸಿ..
ಕುವೈಟ್ ಗೆ ಕೆಲಸಕ್ಕಾಗಿ ಬಂದಿದ್ದು, ನನಗಿಲ್ಲಿ ದಾರಿ ಕಾಣದಂತಾಗಿದೆ
Team Udayavani, Sep 13, 2024, 4:24 PM IST
ಕುವೈಟ್: ಜೀವನಕ್ಕಾಗಿ ಕೆಲಸಕ್ಕೆಂದು ಕುವೈಟ್ ಗೆ ತೆರಳಿದ್ದ ಆಂಧ್ರಪ್ರದೇಶದ ಮಹಿಳೆಯೊಬ್ಬಳನ್ನು ಉದ್ಯೋಗ ನೀಡಿದ ವ್ಯಕ್ತಿ ಆಕೆಯನ್ನು ಕೂಡಿ ಹಾಕಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿರುವ ವಿಡಿಯೋ ಇದೀಗ ಹರಿದಾಡುತ್ತಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕವಿತಾ ಎಂಬಾಕೆ, ಆಂಧ್ರಪ್ರದೇಶ ಸಚಿವ ರಾಮ್ ಪ್ರಸಾದ್ ರೆಡ್ಡಿ ಅವರಲ್ಲಿ ನನ್ನನ್ನು ಈ ಕಿರುಕುಳದಿಂದ ರಕ್ಷಿಸಿ…ದಯವಿಟ್ಟು ನನ್ನ ರಕ್ಷಿಸಿ ಸರ್ ಎಂದು ವಿಡಿಯೋದಲ್ಲಿ ವಿನಂತಿಸಿಕೊಂಡಿದ್ದಾರೆ.
“ನನಗೆ ಇಲ್ಲಿ ಚಿತ್ರಹಿಂಸೆ ನೀಡಲಾಗುತ್ತಿದೆ. ನನಗೆ ಇಬ್ಬರು ಮಕ್ಕಳು, ವಿಕಲಚೇತನ ಪತಿ ಊರಲ್ಲಿದ್ದಾರೆ. ಇವರನ್ನು ಸಾಕುವ ಹೊಣೆಯಿಂದ ಕುವೈಟ್ ಗೆ ಕೆಲಸಕ್ಕಾಗಿ ಬಂದಿದ್ದು, ನನಗಿಲ್ಲಿ ದಾರಿ ಕಾಣದಂತಾಗಿದೆ” ಎಂದು ವಿಡಿಯೋದಲ್ಲಿ ಅಲವತ್ತುಕೊಂಡಿದ್ದಾರೆ.
ಕುವೈಟ್ ನಲ್ಲಿ ಉದ್ಯೋಗ ನೀಡಿದ ವ್ಯಕ್ತಿ ಕವಿತಾಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದು, ಊಟೋಪಚಾರವನ್ನು ನೀಡುತ್ತಿಲ್ಲ. ತನ್ನನ್ನು ಆತ ಗೃಹಬಂಧನದಲ್ಲಿ ಇಟ್ಟಿರುವುದಾಗಿ ಕವಿತಾ ದೂರಿದ್ದು, ಆಕೆಯ ಟ್ರಾವೆಲ್ ಏಜೆಂಟ್, ಆಕೆಗೆ ಬೆದರಿಕೆಯೊಡ್ಡಿ, ಫೋನ್ ಅನ್ನು ಬ್ಲಾಕ್ ಮಾಡಿ ಕುಟುಂಬಸ್ಥರು ಸೇರಿದಂತೆ ಯಾರ ಜತೆಗೂ ಮಾತನಾಡದಂತೆ ನಿರ್ಬಂಧಿಸಿ ಇಟ್ಟಿರುವುದಾಗಿ ಆರೋಪಿಸಿದ್ದಾರೆ.
ಕವಿತಾ ಅವರು ವಿಡಿಯೋದಲ್ಲಿ ಮನವಿ ಮಾಡಿದಂತೆ ಸಚಿವ ರೆಡ್ಡಿ, ಕೇಂದ್ರ ಸಚಿವ ಕೊಂಡಪಲ್ಲಿ ಶ್ರೀನಿವಾಸ್ ಅವರಿಗೆ ಪತ್ರ ಬರೆದು, ಕವಿತಾ ಸುರಕ್ಷಿತವಾಗಿ ಕುವೈಟ್ ನಿಂದ ಭಾರತಕ್ಕೆ ಮರಳಲು ನೆರವು ನೀಡಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ. ಕವಿತಾಳ ರೀತಿ ಗಲ್ಫ್ ದೇಶಗಳಲ್ಲಿ ಹೀಗಾಗಿ ನೂರಾರು ಮಂದಿ ಕಿರುಕುಳ ಅನುಭವಿಸುತ್ತಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ
Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ
Chamarajanagara: ಲಂಚ ಪಡೆಯುತ್ತಿದ್ದ ಡಿಆರ್ಎಫ್ಒ ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.