Port Blair ಹೆಸರು ಇನ್ಮುಂದೆ ಶ್ರೀವಿಜಯಪುರಂ-ಪೋರ್ಟ್ ಬ್ಲೇರ್ ಹೆಸರು ಬಂದದ್ದು ಹೇಗೆ?
ಪೋರ್ಟ್ ಬ್ಲೇರ್ ವಸಾಹತುಶಾಹಿ ಪಳೆಯುಳಿಕೆಯ ಹೆಸರಾಗಿದೆ.
Team Udayavani, Sep 13, 2024, 5:52 PM IST
ಅಂಡಮಾನ್/ನಿಕೋಬಾರ್: ಅಂಡಮಾನ್ ನಿಕೋಬಾರ್ (Andaman and Nicobar)ನ ರಾಜಧಾನಿ ಪೋರ್ಟ್ ಬ್ಲೇರ್ (Port Blair) ಹೆಸರು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಪೋರ್ಟ್ ಬ್ಲೇರ್ ಹೆಸರು ಇನ್ಮುಂದೆ ಶ್ರೀವಿಜಯಪುರಂ ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಜೀ ಅವರ ದೂರದೃಷ್ಟಿಯಂತೆ ಬ್ರಿಟಿಷ್ ವಸಾಹತುಶಾಹಿ ಹೆಸರುಗಳಿಂದ ದೇಶವನ್ನು ಮುಕ್ತಗೊಳಿಸಬೇಕೆಂಬ ಆಶಯದ ಹಿನ್ನೆಲೆಯಲ್ಲಿ ಪೋರ್ಟ್ ಬ್ಲೇರ್ (Port Blair) ಹೆಸರನ್ನು ಶ್ರೀವಿಜಯಪುರಂ ಎಂದು ಪುನರ್ ನಾಮಕರಣ ಮಾಡಲು ಶುಕ್ರವಾರ (ಸೆ.13) ನಿರ್ಧರಿಸಿರುವುದಾಗಿ ಶಾ ತಿಳಿಸಿದ್ದಾರೆ.
ಪೋರ್ಟ್ ಬ್ಲೇರ್ ವಸಾಹತುಶಾಹಿ ಪಳೆಯುಳಿಕೆಯ ಹೆಸರಾಗಿದೆ. ಶ್ರೀವಿಜಯಪುರಂ ನಮ್ಮ ಸ್ವಾತಂತ್ರ್ಯ ಹೋರಾಟದ ವಿಜಯದ ಸಂಕೇತದ ಹೆಸರಾಗಿದೆ. ಅದೇ ರೀತಿ ಅಂಡಮಾನ್ -ನಿಕೋಬಾರ್ ದ್ವೀಪದ ಪಾತ್ರವು ವಿಶಿಷ್ಟವಾಗಿದೆ ಎಂದು ಶಾ ತಿಳಿಸಿದ್ದಾರೆ.
ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಮೊತ್ತ ಮೊದಲ ಬಾರಿಗೆ ತಿರಂಗಾ ಹಾರಿಸಿದ ಸ್ಥಳ ಇದಾಗಿದೆ. ಅಷ್ಟೇ ಅಲ್ಲ ದೇಶದ ಸ್ವಾತಂತ್ರ್ಯಕ್ಕಾಗಿ ವೀರ ಸಾವರ್ಕರ್ ಜೀ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲ್ಪಟ್ಟಿದ್ದ ಸೆಲ್ಯುಲರ್ ಜೈಲು ಕೂಡಾ ಈ ನೆಲದಲ್ಲಿದೆ ಎಂದು ಶಾ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಪೋರ್ಟ್ ಬ್ಲೇರ್ ಹೆಸರು ಹೇಗೆ ಬಂತು?
1789ರಲ್ಲಿ ಬಂಗಾಳ ಸರ್ಕಾರವು ಗ್ರೇಟ್ ಅಂಡಮಾನ್ ನ ಆಗ್ನೇಯ ಕೊಲ್ಲಿಯಲ್ಲಿರುವ ಚಾಥಾಮ್ ದ್ವೀಪದಲ್ಲಿ ದಂಡನೆಯ ವಸಾಹತು (Penal colony) ಸ್ಥಾಪಿಸಿತ್ತು. ಇದಕ್ಕೆ ಈಸ್ಟ್ ಇಂಡಿಯಾ ಕಂಪನಿ(East India Company)ಯ ಆರ್ಚಿಬಾಲ್ಡ್ ಬ್ಲೇರ್ ಗೌರವಾರ್ಥವಾಗಿ ಪೋರ್ಟ್ ಬ್ಲೇರ್ ಎಂಬ ಹೆಸರನ್ನು ಇಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ
Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ
Chamarajanagara: ಲಂಚ ಪಡೆಯುತ್ತಿದ್ದ ಡಿಆರ್ಎಫ್ಒ ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.