Tennis ಡೇವಿಸ್ ಕಪ್: ಸ್ವೀಡನ್ ವಿರುದ್ಧ ಭಾರತಕ್ಕೆ ಮೊದಲ ಜಯದ ನಿರೀಕ್ಷೆ
ಇಂದು, ನಾಳೆ ವರ್ಲ್ಡ್ ಗ್ರೂಪ್ 1 ಮುಖಾಮುಖಿ
Team Udayavani, Sep 14, 2024, 6:30 AM IST
ಸ್ಟಾಕ್ಹೋಮ್ (ಸ್ವೀಡನ್): ವರ್ಲ್ಡ್ ಗ್ರೂಪ್ 1 ಡೇವಿಸ್ ಕಪ್ ಟೆನಿಸ್ ಸ್ಪರ್ಧೆಯಲ್ಲಿ ಭಾರತ-ಸ್ವೀಡನ್ ಮುಖಾಮುಖಿ ಆಗಲಿವೆ. ಶನಿವಾರ ಮತ್ತು ರವಿವಾರ ಸ್ಪರ್ಧೆ ನಡೆಯಲಿದೆ. ಡೇವಿಸ್ ಕಪ್ನಲ್ಲಿ ಈವರೆಗೆ ಸ್ವೀಡನ್ಗೆ ಸೋಲುಣಿಸದ ಭಾರತ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಆದರೆ ಭಾರತ ತನ್ನ ಅತ್ಯುತ್ತಮ ಸಿಂಗಲ್ಸ್ ಹಾಗೂ ಡಬಲ್ಸ್ ಆಟಗಾರರ ಅನುಪಸ್ಥಿತಿಯಲ್ಲಿ ಸ್ಟಾಕ್ಹೋಮ್ಗೆ ಬಂದಿಳಿದಿದೆ. ಸುಮಿತ್ ನಾಗಲ್ ಮತ್ತು ಯೂಕಿ ಭಾಂಬ್ರಿ ಇಲ್ಲಿ ಆಡದಿರುವುದು ಭಾರತಕ್ಕೊಂದು ಹಿನ್ನಡೆ. ಹೀಗಾಗಿ ಡಬಲ್ಸ್ ಆಟಗಾರ ಎನ್. ಶ್ರೀರಾಮ್ ಬಾಲಾಜಿ ಸತತ 2ನೇ ಸಲ ಸಿಂಗಲ್ಸ್ ಹೋರಾಟಕ್ಕೆ ಅಣಿಯಾಗಬೇಕಿದೆ. ಪಾಕಿಸ್ಥಾನ ವಿರುದ್ಧ ಮೊದಲ ಸಲ ಸಿಂಗಲ್ಸ್ ಆಡಿದ್ದ ಬಾಲಾಜಿ, ಶನಿವಾರ ಸ್ವೀಡನ್ನ ನಂ.1 ಆಟಗಾರ ಎಲಿಯಸ್ ವೈಮರ್ ಅವರನ್ನು ಎದುರಿಸಲಿದ್ದಾರೆ.
ಮತ್ತೂಂದು ಸಿಂಗಲ್ಸ್ನಲ್ಲಿ ಭಾರತದ ನಂ.1 ಆಟಗಾರ ರಾಮ್ಕುಮಾರ್ ರಾಮನಾಥನ್ (332ನೇ ರ್ಯಾಂಕ್), ಲೆಜೆಂಡ್ರಿ ಟೆನಿಸಿಗ ಬೊÂàರ್ನ್ ಬೋರ್ಗ್ ಅವರ ಪುತ್ರ ಲಿಯೋ ಬೋರ್ಗ್ (603ನೇ ರ್ಯಾಂಕ್) ವಿರುದ್ಧ ಕಣಕ್ಕಿಳಿಯುವರು. ರಾಮ್ಕುಮಾರ್- ಬಾಲಾಜಿ ರವಿವಾರದ ಡಬಲ್ಸ್ನಲ್ಲೂ ಸೆಣಸಲಿದ್ದಾರೆ. ಫಿಲಿಪ್ ಬಗೇìವಿ- ಆ್ಯಂಡ್ರೆ ಗೊರಾನ್ಸನ್ ಇವರ ಎದುರಾ ಳಿಗಳು. ಅಂದೇ ರಿವರ್ಸ್ ಸಿಂಗಲ್ಸ್ ನಡೆಯಲಿದೆ. ನಿಕ್ಕಿ ಪೂಣಚ್ಚ ಭಾರತದ ಮತ್ತೋರ್ವ ಸಿಂಗಲ್ಸ್ ಆಟಗಾರ.
ಈ ಸಂದರ್ಭದಲ್ಲಿ ಮಾತಾಡಿದ ನಾಯಕ ರೋಹಿತ್ ರಾಜ್ಪಾಲ್, “ಇದೊಂದು 50-50 ಪಂದ್ಯ. ಯಾರು ಒತ್ತಡವನ್ನು ಸಮರ್ಥ ವಾಗಿ ನಿಭಾಯಿಸುವಲ್ಲಿ ಯಶಸ್ವಿಯಾ ಗುತ್ತಾರೋ ಅವರಿಗೆ ಗೆಲುವಿನ ಅವಕಾಶ ಹೆಚ್ಚು’ ಎಂದರು.
ಇಲ್ಲಿ ಗೆದ್ದವರು ಮುಂದಿನ ವರ್ಷದ ಅರ್ಹತಾ ಸುತ್ತನ್ನು ಪ್ರವೇಶಿಸುವರು. ಸೋತವರು ವರ್ಲ್ಡ್ ಗ್ರೂಪ್ 1 ಪ್ಲೇ ಆಫ್ನಲ್ಲಿ ಆಡಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
China Open 2024: ಒಲಿಂಪಿಕ್ ವಿಜೇತೆಗೆ ಮಾಳವಿಕಾ ಆಘಾತ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Sagara: ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡನೆ; ಪ್ರತಿಭಟನೆ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್ ಆಫ್ ಯುಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.