Duleep Trophy:ಇಂಡಿಯಾ ‘ಎ’ಗೆ ಮುನ್ನಡೆ
Team Udayavani, Sep 13, 2024, 11:05 PM IST
ಅನಂತಪುರ: ಇಂಡಿಯಾ ಡಿ ವಿರುದ್ಧದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ಎ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದೆ. 2ನೇ ದಿನದಾಟದ ಅಂತ್ಯಕ್ಕೆ 222 ರನ್ ಲೀಡ್ ಗಳಿಸಿದ್ದು, 9 ವಿಕೆಟ್ಗಳನ್ನು ಕೈಲಿರಿಸಿಕೊಂಡಿದೆ.
ಮಾಯಾಂಕ್ ಅಗರ್ವಾಲ್ ನಾಯಕತ್ವದ ಇಂಡಿಯಾ ಎ ಮೊದಲ ಇನ್ನಿಂಗ್ಸ್ನಲ್ಲಿ 290 ರನ್ ಮಾಡಿತ್ತು. ಜವಾಬಿತ್ತ ಇಂಡಿಯಾ ಡಿ 183ಕ್ಕೆ ಕುಸಿಯಿತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಇಂಡಿಯಾ ಎ ಒಂದು ವಿಕೆಟಿಗೆ 115 ರನ್ ಗಳಿಸಿದೆ.
ಇಂಡಿಯಾ ಡಿ ಪರ ದೇವದತ್ ಪಡಿಕ್ಕಲ್ ಏಕಾಂಗಿಯಾಗಿ ಹೋರಾಡಿ 92 ರನ್ ಬಾರಿಸಿದರು. 31 ರನ್ ಮಾಡಿದ ಹರ್ಷಿತ್ ರಾಣಾ ಅವರದು ಅನಂತರದ ಹೆಚ್ಚಿನ ಗಳಿಕೆ. “ಎ’ ಪರ ಖಲೀದ್ ಅಹ್ಮದ್ ಮತ್ತು ಆಖೀಬ್ ಖಾನ್ ತಲಾ 3 ವಿಕೆಟ್ ಉರುಳಿಸಿದರು.
ದ್ವಿತೀಯ ಸರದಿಯಲ್ಲಿ 56 ರನ್ ಮಾಡಿದ ಮಾಯಾಂಕ್ ಅಗರ್ವಾಲ್ ಪೆವಿಲಿಯನ್ ಸೇರಿಕೊಂಡಿದ್ದು, 59 ರನ್ ಗಳಿಸಿರುವ ಪ್ರಥಮ್ ಸಿಂಗ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಂಡಿಯಾ ಸಿ ಬೃಹತ್ ಸ್ಕೋರ್
ಇಂಡಿಯಾ ಬಿ ಎದುರಿನ ಇನ್ನೊಂದು ಪಂದ್ಯದಲ್ಲಿ ಇಂಡಿಯಾ ಸಿ 525 ರನ್ ಪೇರಿಸಿದೆ. ದಿಟ್ಟ ಜವಾಬು ನೀಡಲಾರಂಭಿಸಿದ ಇಂಡಿಯಾ ಬಿ ವಿಕೆಟ್ ನಷ್ಟವಿಲ್ಲದೆ 124 ರನ್ ಗಳಿಸಿದೆ. ನಾಯಕ ಅಭಿಮನ್ಯು ಈಶ್ವರನ್ 51 ಮತ್ತು ಎನ್. ಜಗದೀಶನ್ 67 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ಇಂಡಿಯಾ ಸಿ ತಂಡದ ಇಶಾನ್ ಕಿಶನ್ 111 ರನ್ ಬಾರಿಸಿದ್ದರು. ನಾಯಕ ಋತುರಾಜ್ ಗಾಯಕ್ವಾಡ್ 58, ಮಾನವ್ ಸುಥಾರ್ 82 ರನ್ ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್ ಆಫ್ ಯುಕೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ
Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.