Prajwal Revanna ವಿರುದ್ಧ 3ನೇ ದೋಷಾರೋಪ ಪಟ್ಟಿ

ಬಂದೂಕು ತೋರಿಸಿ ಜಿ.ಪಂ. ಮಾಜಿ ಸದಸ್ಯೆ ಮೇಲೆ ಅತ್ಯಾಚಾರ

Team Udayavani, Sep 14, 2024, 7:10 AM IST

Prajwal Revanna ವಿರುದ್ಧ 3ನೇ ದೋಷಾರೋಪ ಪಟ್ಟಿ

ಬೆಂಗಳೂರು: ರಾಜ್ಯಾದ್ಯಂತ ಭಾರೀ ವಿವಾದಕ್ಕೀಡಾಗಿದ್ದ ಹಾಸನದ ಅಶ್ಲೀಲ ವೀಡಿಯೋ ವೈರಲ್‌ ಪ್ರಕರಣದ ಸಂಬಂಧ ಜಿ.ಪಂ. ಮಾಜಿ ಸದಸ್ಯೆಯೊಬ್ಬರ ಮೇಲೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ)ವು ಜನಪ್ರತಿನಿಧಿಗಳ ವಿಶೇಷ ನ್ಯಾಯಾ ಲಯಕ್ಕೆ ಶುಕ್ರವಾರ 1,691 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ.

ದೋಷಾರೋಪ ಪಟ್ಟಿಯಲ್ಲಿ 120 ಸಾಕ್ಷಿ ಗಳನ್ನು ಉಲ್ಲೇಖೀಸಲಾಗಿದೆ. ಸಿಐಡಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಈ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಜ್ವಲ್‌ ವಿರುದ್ಧದ 2 ಪ್ರಕರಣಗಳಲ್ಲಿ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಈಗ 3ನೇ ಪ್ರಕರಣದಲ್ಲೂ ದೋಷಾರೋಪ ಪಟ್ಟಿ ಸಲ್ಲಿಸಿದಂತಾಗಿದೆ.

ದೋಷಾರೋಪ ಪಟ್ಟಿಯಲ್ಲಿ ಏನಿದೆ ?
ಪ್ರಜ್ವಲ್‌ 2019-2024ನೇ ಸಾಲಿನಲ್ಲಿ ಹಾಸನ ಸಂಸದರಾಗಿದ್ದ ವೇಳೆ ಹಾಸನ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಹಂಚಿಕೆಯಾಗಿದ್ದ ಹಾಸನದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಎಂ.ಪಿ. ಕ್ವಾರ್ಟರ್ಸ್‌ ಅನ್ನು ತನ್ನ ಗೃಹ ಕಚೇರಿಯಾಗಿ ಬಳಸುತ್ತಿದ್ದರು. ಆ ವೇಳೆ ದೂರುದಾರ ಸಂತ್ರಸ್ತೆಯು ಹಾಸನದ ಕ್ಷೇತ್ರವೊಂದರ ಜಿ.ಪಂ. ಸದಸ್ಯೆಯಾಗಿದ್ದರು. 2020ರ ಜನವರಿ-ಫೆಬ್ರವರಿ ಸಮಯದಲ್ಲಿ ಒಂದು ದಿನ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಸೀಟು ಕೊಡಿಸುವ ವಿಷಯಕ್ಕೆ ಪ್ರಜ್ವಲ್‌ ಅವರನ್ನು ಭೇಟಿ ಮಾಡಲು ಎಂ.ಪಿ. ಕ್ವಾರ್ಟರ್ಸ್‌ಗೆ ಸಂತ್ರಸ್ತೆ ಹೋಗಿದ್ದರು. ಅಲ್ಲಿದ್ದ ಇತರರು ಹೊರಟ ಬಳಿಕ ಪ್ರಜ್ವಲ್‌ ಸಂತ್ರಸ್ತೆಯ ಕೈ ಹಿಡಿದು ಎಳೆದು ಮೊದಲನೇ ಮಹಡಿಯ ಕೊಠಡಿಗೆ ಕರೆದೊಯ್ದಿದ್ದರು.

ರೂಂ ಬಾಗಿಲ ಚಿಲಕ ಹಾಕಿ ಬಲವಂತಪಡಿಸಿದ್ದರು. ಸಂತ್ರಸ್ತೆ ನಿರಾಕರಿಸಿದಾಗ “ನನ್ನ ಬಳಿ ಬಂದೂಕು ಇದೆ. ನಾನು ಹೇಳಿದಂತೆ ಕೇಳದಿದ್ದರೆ ನಿನ್ನ ಪತಿಯನ್ನು ಮುಗಿಸಿ ಬಿಡುತ್ತೇನೆ’ ಎಂದು ಕೊಲೆ ಬೆದರಿಕೆ ಹಾಕಿ ತಾನು ಹೇಳಿದಂತೆ ನಡೆದುಕೊಳ್ಳಬೇಕು ಎಂದಿದ್ದರು. ಸಂತ್ರಸ್ತೆ ಬೇಡವೆಂದು ಹೇಳಿ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೆ ತಮ್ಮ ಮೊಬೈಲ್‌ನಿಂದ ವೀಡಿಯೋ ಮಾಡಿದ್ದರು. ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿ ಅದನ್ನು ವೀಡಿಯೋ ರೆಕಾರ್ಡ್‌ ಮಾಡಿದ್ದರು.

ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್
ಅದಾದ 2 ದಿನಗಳ ಅನಂತರ ಸಂಜೆ ಸುಮಾರು 7.30ಕ್ಕೆ ಸಂತ್ರಸ್ತೆಗೆ ಕರೆ ಮಾಡಿದ ಪ್ರಜ್ವಲ್‌, ಎರಡು ದಿನದ ಹಿಂದೆ ಮಾಡಿದ್ದ ವೀಡಿಯೋ ಡಿಲೀಟ್‌ ಆಗಿರುವುದಿಲ್ಲ. ಈಗ ನೀನು ಎಂಪಿ ಕ್ವಾರ್ಟರ್ಸ್‌ಗೆ ಬರದೆ ಇದ್ದರೆ ವೀಡಿಯೋವನ್ನು ಬಹಿರಂಗ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಸಂತ್ರಸ್ತೆ ಹೆದರಿ ಕ್ವಾರ್ಟರ್ಸ್‌ಗೆ ಹೋದಾಗ ಮತ್ತೆ ಪ್ರಜ್ವಲ್‌ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. “ನಾನು ನಿನಗೆ ವಾಟ್ಸ್‌ಆ್ಯಪ್‌ ವೀಡಿಯೋ ಕರೆ ಮಾಡಿದಾಗೆಲ್ಲ ಕರೆ ಸ್ವೀಕರಿಸು, ನಾನು ಹೇಳಿದಂತೆ ವೀಡಿಯೋ ಕಾಲ್‌ನಲ್ಲಿ ನಡೆದುಕೊಳ್ಳಬೇಕು. ನನ್ನ ಮಾತನ್ನು ಕೇಳದೆ ಇದ್ದರೆ ನಿನ್ನ ಪತಿಗೆ ತೊಂದರೆ ಮಾಡುತ್ತೇನೆ’ ಎಂದು ಬೆದರಿಸಿದ್ದರು ಎಂದೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.

ದಸರಾ ದಿನವೂ ಅತ್ಯಾಚಾರ
2020ರ ಜೂನ್‌ನಲ್ಲಿ ಹೊಳೆನರಸೀಪುರದಲ್ಲಿರುವ ತನ್ನ ಮನೆಗೆ ಸಂತ್ರಸ್ತೆಯನ್ನು ಕರೆಸಿಕೊಂಡು ಮತ್ತೆ ಬಲಾತ್ಕಾರ ಮಾಡಿ ಮೊಬೈಲ್‌ನಲ್ಲಿ ಆ ದೃಶ್ಯ ಸೆರೆಹಿಡಿದಿದ್ದರು. ಸಂತ್ರಸ್ತೆ ಮನೆಗೆ ಬಂದಿರುವುದನ್ನು ಪ್ರಜ್ವಲ್‌ ಕಾರಿನ ಚಾಲಕ ಗಮನಿಸಿದ್ದ. ಈ ವಿಚಾರ ಯಾರಿಗಾದರೂ ಹೇಳಿದರೆ ವೀಡಿಯೋ ಬಹಿರಂಗಪಡಿಸಿ ತೊಂದರೆ ಕೊಡುವುದಾಗಿ ಪುನಃ ಬೆದರಿಸಿದ್ದರು. 2022ರ ಅ. 3ರಂದು ಬೇಲೂರಿನಲ್ಲಿ ನಡೆದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಪ್ರಜ್ವಲ್‌ ಭಾಗಿಯಾಗಿದ್ದರು. ಅಲ್ಲಿಂದ ಹೊರಟ ಬಳಿಕ ರಾತ್ರಿ ಸಂತ್ರಸ್ತೆಗೆ ಕರೆ ಮಾಡಿ ಕ್ವಾರ್ಟರ್ಸ್‌ಗೆ ಕರೆಸಿ ಅತ್ಯಾಚಾರ ಎಸಗಿದ್ದರು. 2020ರ ಜನವರಿ-ಫೆಬ್ರವರಿಯಿಂದ 2023ರ ಡಿಸೆಂಬರ್‌ವರೆಗೆ ಹಲವಾರು ಬಾರಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಎಲ್ಲ ಅಂಶಗಳೂ ಸಾಕ್ಷ್ಯಾಧಾರಗಳಿಂದ ಕಂಡುಬಂದಿದೆ ಎಂದು ಎಸ್‌ಐಟಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖೀಸಿದೆ.

ಮೊಬೈಲ್‌ ಕಣ್ಮರೆ
ಸಂತ್ರಸ್ತೆಯ ವೀಡಿಯೋ ಹಾಗೂ ಫೋಟೋಗಳು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳ್ಳಲು ಆರೋಪಿ ಪ್ರಜ್ವಲ್‌ ಕಾರಣರಾಗಿರುವುದು ತನಿಖೆಯ ಕಾಲದಲ್ಲಿ ಸಂಗ್ರಹಿಸಿದ ತಾಂತ್ರಿಕ ವರದಿಗಳು, ತಜ್ಞರ ಪರೀûಾ ವರದಿಗಳಿಂದ ಪತ್ತೆಯಾಗಿದೆ. ಸಂತ್ರಸ್ತೆಯ ಅಶ್ಲೀಲ ಫೋಟೋ, ವೀಡಿಯೋ ಸೆರೆಹಿಡಿದಿದ್ದ ಮುಖ್ಯ ಸಾಕ್ಷ್ಯವಾದ ಸ್ಮಾರ್ಟ್‌ ಮೊಬೈಲ್‌ ಫೋನ್‌ ಬಗ್ಗೆ ಪ್ರಜ್ವಲ್‌ ರೇವಣ್ಣ ತನಿಖೆ ವೇಳೆ ಯಾವುದೇ ಮಾಹಿತಿ ನೀಡದೆ ಮರೆಮಾಚಿದ್ದರು.

ಪೀಡಿಸುತ್ತಿದ್ದ ಪ್ರಜ್ವಲ್‌!
ಪ್ರಜ್ವಲ್‌ ತನ್ನ ಸೋಷಿಯಲ್‌ ಮೀಡಿಯಾ ನಿರ್ವಹಿಸುತ್ತಿದ್ದ ಮಂಜು ನಾಥ್‌, ಭವ್ಯಶ್ರೀ ಹಾಗೂ ಸಂತೋಷ್‌ ಹೆಸರಿನಲ್ಲಿ ಬಳಸುತ್ತಿದ್ದ ಮೊಬೈಲ್‌ ನಂಬರ್‌ಗಳಿಂದ ಪದೇ ಪದೆ ಸಂತ್ರಸ್ತೆಗೆ ವಾಟ್ಸ್‌ಆ್ಯಪ್‌ ವೀಡಿಯೋ ಕರೆಗಳನ್ನು ಮಾಡುತ್ತಿದ್ದರು. ಆಕೆ ಒಬ್ಬರೇ ಇರುವುದನ್ನು ಖಾತ್ರಿಪಡಿಸಿಕೊಂಡು ಅಶ್ಲೀಲವಾಗಿ ಮಾತನಾಡುತ್ತಿದ್ದರು. ಸಂತ್ರಸ್ತೆ ಆತಂಕದಿಂದ ಆರೋಪಿ ಹೇಳಿದಂತೆ ನಡೆದುಕೊಂಡಿದ್ದರು. ಆ ವೇಳೆ ಸಂತ್ರಸ್ತೆಗೆ ತಿಳಿಯದಂತೆ ಆಕೆಯ ಅಶ್ಲೀಲ ಫೋಟೋಗಳ ಸ್ಕ್ರೀನ್‌ ಶಾಟ್‌ ಗಳನ್ನು ತೆಗೆದುಕೊಂಡಿದ್ದರು. ಪ್ರಜ್ವಲ್‌ ಆ ವೇಳೆ ತನ್ನ ಗುರುತನ್ನು ಮರೆಮಾಚುವ ಉದ್ದೇಶದಿಂದ ತನ್ನ ಪೂರ್ಣ ಮುಖ ಕಾಣಿಸದಂತೆ ಗುರುತು ಮರೆಮಾಚಿ ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವುದನ್ನು ಚಾಳಿ ಮಾಡಿಕೊಂಡಿದ್ದರು. ತಾನು ಕರೆ ಮಾಡುವ ಯಾವ ನಂಬರ್‌ಗಳನ್ನೂ ಸೇವ್‌ ಮಾಡಬಾರದು ಎಂದು ಬೆದರಿಸಿ ದ್ದರು ಎಂದು ಆರೋಪಿಸಲಾಗಿದೆ.

 

ಟಾಪ್ ನ್ಯೂಸ್

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

9-thekkatte

Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ

Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ

Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

dandeli

Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್

Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

10-sagara

Sagara: ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡನೆ; ಪ್ರತಿಭಟನೆ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.