![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 14, 2024, 6:40 AM IST
ಢಾಕಾ: ಪ್ರಧಾನಿ ನರೇಂದ್ರ ಮೋದಿ ಆಡಳಿ ತದಿಂದ ಪಶ್ವಿಮ ಬಂಗಾಲಕ್ಕೆ ಸ್ವಾತಂತ್ರ್ಯ ಘೋಷಿಸಿ ಎಂದು ಬಾಂಗ್ಲಾದೇಶದ ಉಗ್ರ ಜಶಿಮುದ್ದೀನ್ ರಹ್ಮಾನ್ ಹಾಫಿ ಹೇಳಿದ್ದಾನೆ. ಆತ ಅನ್ಸಾರುಲ್ಲಾ ಬಾಂಗ್ಲಾ ಟೀಂ ಎಂಬ ಸಂಘಟನೆಗೆ ಸೇರಿದ್ದು, ಆ ಸಂಘಟ ನೆಗೆ ಅಲ್ಕಾಯಿದಾದ ನಂಟು ಇದೆ.
ಶೇಖ್ ಹಸೀನಾ ಸರಕಾರದ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ಉಗ್ರ ಹಾಫಿ ಮಾತನಾಡಿರುವ ವೀಡಿಯೋವೊಂದು ವೈರಲ್ ಆಗಿದ್ದು, ಪಶ್ಚಿಮ ಬಂಗಾಲಕ್ಕೆ ಸ್ವಾತಂತ್ರ್ಯ ಘೋಷಿಸಿ ಮತ್ತು ದಿಲ್ಲಿಯಲ್ಲಿ ಇಸ್ಲಾಂ ಧ್ವಜವನ್ನು ಹಾರಿಸಿ ಎಂದು ಮಮತಾ ಬ್ಯಾನರ್ಜಿ ಅವರಿಗೆ ಹೇಳಿದ್ದಾನೆ.
ಹಸೀನಾ ಸರಕಾರ ಪತನಗೊಂಡ ಬಳಿಕ ಈ ವೀಡಿಯೋವನ್ನು ಮಾಡಲಾಗಿದ್ದು, ಆಸ್ಪತ್ರೆಯೊಂದರಲ್ಲಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಬಾಂಗ್ಲಾದ ಫ್ಯಾಕ್ಟ್ ಚೆಕ್ ಸಂಸ್ಥೆಯೊಂದು ತಿಳಿಸಿದೆ. ಹಾಫಿ ಬಿಡುಗಡೆಯಾಗಿರುವುದು ಭಾರತಕ್ಕೆ ಆತಂಕ ತಂದೊಡ್ಡಬಹುದು ಎಂದು ಹಲವು ವರದಿಗಳು ತಿಳಿಸಿದ್ದವು. ಬ್ಲಾಗರ್ ಒಬ್ಬನ ಹತ್ಯೆಗೆ ಸಂಬಂಧಿಸಿದಂತೆ ಹಾಫಿಗೆ 5 ವರ್ಷಗಳ ಕಾಲ ಜೈಲು ಶಿಕ್ಷ ವಿಧಿಸಲಾಗಿತ್ತು. ಆದರೆ ಹಸೀನಾ ಸರಕಾರ ಬಿದ್ದುಹೋದ ಬಳಿಕ ರಚನೆಯಾದ ಮಧ್ಯಾಂತರ ಸರಕಾರ ಹಾಫಿಯನ್ನು ಬಿಡುಗಡೆ ಮಾಡಿತ್ತು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.