![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Sep 14, 2024, 6:55 AM IST
ಕೋಲ್ಕತಾ: ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ದುರ್ಗಾ ಪೂಜೆ ವೇಳೆ ಅತೀ ಅಪರೂಪದ ಹಿಲ್ಸಾ ಮೀನಿನ ರಫ್ತಿಗೆ ಬಾಂಗ್ಲಾದೇಶದ ನೂತನ ಮಧ್ಯಾಂತರ ಸರಕಾರ ನಿಷೇಧ ಹೇರಿದ್ದು, ಇದರಿಂದ ಈ ಬಾರಿ ಪಶ್ಚಿಮ ಬಂಗಾಲದಲ್ಲಿ ದುರ್ಗಾ ಪೂಜೆಯ ವೇಳೆ ಮೀನಿನ ಖ್ಯಾದ್ಯಕ್ಕೆ ಬರ ಬರಲಿದೆ.
ಅತೀ ಅಪರೂಪದ ಮತ್ತು ದುಬಾರಿ ಬೆಲೆಯ ಹಿಲ್ಸಾ ಮೀನು ಬಾಂಗ್ಲಾದೇಶದಲ್ಲಿ ಹರಿಯುವ ಪದ್ಮಾ ನದಿಯಲ್ಲಿ(ಗಂಗಾ) ಸಿಗುತ್ತದೆ. ಅತೀ ರುಚಿಕರ ಖಾದ್ಯಕ್ಕೆ ಹೆಸರುವಾಸಿಯಾದ ಈ ಮೀನಿಗೆ ದುರ್ಗಾ ಪೂಜೆ ವೇಳೆ ಕೋಲ್ಕತಾದಲ್ಲಿ ಹೆಚ್ಚು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಪ್ರತೀ ವರ್ಷ ಹಿಲ್ಸಾ ಮೀನು ಭಾರತಕ್ಕೆ ರಫ್ತು ಮಾಡಲು ಕಳೆದ 5 ವರ್ಷದಿಂದ ಅವಕಾಶ ನೀಡಿದ್ದರು. ಅದರಂತೆ ಪ್ರತೀ ವರ್ಷವೂ ದುರ್ಗಾ ಪೂಜೆ ವೇಳೆ ಸಾವಿರ ಟನ್ಗೂ ಅಧಿಕ ಹಿಲ್ಸಾ ಮೀನು ಭಾರತಕ್ಕೆ ರಫ್ತಾಗುತ್ತಿತ್ತು. ಆದರೆ ಈ ಬಾರಿ ಅಲ್ಲಿನ ಮಧ್ಯಾಂತರ ಸರಕಾರ, ಮೀನಿನ ಕೊರತೆ ನೆಪವೊಡ್ಡಿ ಭಾರತಕ್ಕೆ ರಫ್ತು ನಿರ್ಬಂಧ ಹೇರಿದೆ. ಈ ಮೂಲಕ ಭಾರತದ ಜತೆ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
You seem to have an Ad Blocker on.
To continue reading, please turn it off or whitelist Udayavani.