Hockey; ಪಾಕ್ ವಿರುದ್ದ ಪ್ರಾಬಲ್ಯ ಮೆರೆದ ಭಾರತ; 2 ಗೋಲು ಬಾರಿಸಿದ ನಾಯಕ ಹರ್ಮನ್
Team Udayavani, Sep 14, 2024, 4:47 PM IST
ಹುಲುನ್ಬುಯರ್: ಹಾಕಿ ಕ್ರೀಡೆಯಲ್ಲೂ ಪಾಕಿಸ್ತಾನ ವಿರುದ್ದ ಭಾರತದ ಪ್ರಾಬಲ್ಯ ಮುಂದುವರಿದಿದೆ. ಶನಿವಾರ (ಸೆ.14) ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (Asian Champions Trophy) ಗುಂಪು ಹಂತದ ಪಂದ್ಯದಲ್ಲಿ ಭಾರತವು ಪಾಕ್ ವಿರುದ್ದ 2-1 ಅಂತರದಿಂದ ಗೆಲುವು ಸಾಧಿಸಿದೆ.
ಕೂಟದಲ್ಲಿ ಅಜೇಯರಾಗಿರುವ ಭಾರತವು ಮತ್ತೊಂದು ಗೆಲುವಿನೊಂದಿಗೆ ಗುಂಪು ಹಂತ ಯಶಸ್ವಿಯಾಗಿ ಮುಗಿಸಿದೆ.
ಪಂದ್ಯ ಗೆಲ್ಲುವ ಫೇವರೆಟ್ ಆಗಿ ಕಣಕ್ಕಿಳಿದಿದ್ದ ಹಾಲಿ ಚಾಂಪಿಯನ್ ಹರ್ಮನ್ ಪ್ರೀತ್ ಬಳಗಕ್ಕೆ ಪಾಕಿಸ್ತಾನವು ಶಾಕ್ ನೀಡಿತು. ಮೊದಲ ಅವಧಿಯ ಆಟದಲ್ಲಿಯೇ ಪಾಕಿಸ್ತಾನದ ಅಹಮದ್ ನದೀಂ ಮೊದಲ ಗೋಲು ಬಾರಿಸಿ ಮುನ್ನಡೆ ಒದಗಿಸಿದರು.
ಭಾರತದ ಡಿಫೆನ್ಸ್ ಕೈಕೊಟ್ಟರೂ ಕೂಡಲೇ ಎಚ್ಚೆತ್ತ ಆಟಗಾರರು ಪ್ರತಿ ದಾಳಿ ನಡೆಸಿದರು. ಸ್ವಲ್ಪ ಸಮಯದ ನಂತರ, ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಾಗ ನಾಯಕ ಹರ್ಮನ್ ಪ್ರೀತ್ ಸಿಂಗ್ (Harmanpreet Singh) ಡ್ರ್ಯಾಗ್-ಫ್ಲಿಕ್ ನೊಂದಿಗೆ ಭಾರತಕ್ಕೆ ಮೊದಲ ಗೋಲು ಬಾರಿಸಿ ಪಂದ್ಯವನ್ನು ಹತೋಟಿಗೆ ತಂದರು. ಎರಡನೇ ಕ್ವಾರ್ಟರ್ ಆರಂಭವಾಗುತ್ತಿದ್ದಂತೆ, ಭಾರತವು ತನ್ನ ಆಕ್ರಮಣಕಾರಿ ಪ್ರಯತ್ನಗಳನ್ನು ತೀವ್ರಗೊಳಿಸಿತು. ಹರ್ಮನ್ಪ್ರೀತ್ ಪೆನಾಲ್ಟಿ ಸ್ಪಾಟ್ನಿಂದ ಗೋಲು ಹೊಡೆದು ಭಾರತದ ಮುನ್ನಡೆಯನ್ನು ಹೆಚ್ಚಿಸಿದರು.
ಪಾಕಿಸ್ತಾನದ ಅಹಮದ್ ನದೀಂ ಮತ್ತು ಅಜಾಝ್ ಅಹಮದ್ ಗೋಲು ಗಳಿಸಲು ಹಲವು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಭಾರತದ ಗೋಲು ಕೀಪರ್ ಕೃಷ್ಣನ್ ಕುಮಾರ್ ಸಾರ್ಥಕ್ (Krishan Kumar Pathak) ಅವರು ಅತ್ಯದ್ಭುತ ಆಟವಾಡಿ ಎರಡು ನಿರ್ಣಾಯಕ ಗೋಲು ತಡೆದರು. ಅಂತಿಮವಾಗಿ ಭಾರತವು 2-1 ಅಂತರದಿಂದ ಗೆಲುವು ಸಾಧಿಸಿತು.
Full Time:
INDIA WINS!
Team India get another win under their belt in the tournament this time it is against Pakistan.
Captain Harmanpreet Singh scores 2 penalty corners to stamp his authority on the game.
India 🇮🇳 2 – 1 🇵🇰Pakistan#IndVsPak #MenInBlue #PrideOfIndia…
— Hockey India (@TheHockeyIndia) September 14, 2024
ಅಂತಿಮ ಅವಧಿಯಲ್ಲಿ ವಹೀದ್ ಅಶ್ರಫ್ ರಾಣಾ ಮತ್ತು ಸುಖ್ಜೀತ್ ಸಿಂಗ್ ಗೆ ನಡುವೆ ಜಗಳವೂ ನಡೆಯಿತು. ಪಾಕಿಸ್ತಾನದ ಆಟಗಾರ ವಹೀದ್ ಅವರಿಗೆ ಹಳದಿ ಕಾರ್ಡ್ ನೀಡಲಾಯಿತು. ಅವರನ್ನು 10 ನಿಮಿಷಗಳ ಕಾಲ ಪಂದ್ಯದಿಂದ ಅಮಾನತು ಮಾಡಲಾಯಿತು. ಕೊನೆಯ ಕ್ಷಣಗಳಲ್ಲಿ ಭಾರತದ ಮನ್ಪ್ರೀತ್ ಸಿಂಗ್ ಅವರನ್ನು ಐದು ನಿಮಿಷಗಳ ಅಮಾನತು ಮಾಡಲಾಯಿತು.
ಈ ಪಂದ್ಯದೊಂದಿಗೆ ಭಾರತವು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
Contractors Association ಅಧ್ಯಕ್ಷ ಕೆಂಪಣ್ಣ ವಿಧಿವಶ; ಗಣ್ಯರ ಸಂತಾಪ
Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Sep.20: ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಕಾಲೇಜು ಘಟಿಕೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.