Davis Cup: ಡೇವಿಸ್ ಕಪ್: ಎರಡೂ ಸಿಂಗಲ್ಸ್ ಸೋತ ಭಾರತ
Team Udayavani, Sep 14, 2024, 10:06 PM IST
ಸ್ಟಾಕ್ಹೋಮ್ (ಸ್ವೀಡನ್): ಸ್ವೀಡನ್ ಎದುರಿನ ವಿಶ್ವ ಗ್ರೂಪ್ 1 ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯ ಮೊದಲ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಸೋಲನುಭವಿಸಿದ ಭಾರತ 0-2 ಹಿನ್ನಡೆಗೆ ಸಿಲುಕಿದೆ.
ಮೊದಲ ಸಿಂಗಲ್ಸ್ನಲ್ಲಿ ಡಬಲ್ಸ್ ಸ್ಪೆಷಲಿಸ್ಟ್ ಎನ್. ಶ್ರೀರಾಮ್ ಬಾಲಾಜಿ ಅವರನ್ನು ಸ್ವೀಡನ್ನ ನಂ.1 ಆಟಗಾರ ಎಲಿಯಾಸ್ ವೈಮರ್ 6-4, 6-2 ಅಂತರದಿಂದ ಪರಾಭವಗೊಳಿಸಿರು. ಸುಮಿತ್ ನಾಗಲ್, ಯೂಕಿ ಭಾಂಬ್ರಿ ಗೈರಲ್ಲಿ ಬಾಲಾಜಿ ಅನಿವಾರ್ಯವಾಗಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಬೇಕಾಯಿತು.
ದ್ವಿತೀಯ ಸಿಂಗಲ್ಸ್ನಲ್ಲಿ ರಾಮ್ಕುಮಾರ್ ರಾಮನಾಥನ್ ಅವರನ್ನು ಲಿಯೋ ಬೋರ್ಗ್ 6-3, 6-3 ಅಂತರದಿಂದ ಹಿಮ್ಮೆಟ್ಟಿಸಿದರು. ತನಗಿಂತ ಮೇಲಿನ ಕ್ರಮಾಂಕದ ರಾಮ್ಕುಮಾರ್ ಅವರನ್ನು ಮಣಿಸಿದ ಬೋರ್ಗ್, ವಿಶ್ವ ರ್ಯಾಂಕಿಂಗ್ನಲ್ಲಿ 603ರಷ್ಟು ಕೆಳಗಿನ ಸ್ಥಾನದಲ್ಲಿದ್ದಾರೆ. ಇವರು ಲೆಜೆಂಡ್ರಿ ಟೆನಿಸಿಗ ಬ್ಯೋರ್ನ್ ಬೋರ್ಗ್ ಅವರ ಮಗ. ಈ ಪಂದ್ಯ ಕೇವಲ 58 ನಿಮಿಷಗಳಲ್ಲಿ ಮುಗಿಯಿತು.
ಭಾರತವಿನ್ನು ರವಿವಾರದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ. ರವಿವಾರ ಡಬಲ್ಸ್ ಮತ್ತು ರಿವರ್ಸ್ ಸಿಂಗಲ್ಸ್ ಪಂದ್ಯಗಳನ್ನು ಆಡಲಾಗುವುದು. “ಮಾಡು-ಮಡಿ’ ಡಬಲ್ಸ್ನಲ್ಲಿ ರಾಮ್ಕುಮಾರ್ ರಾಮನಾಥನ್-ಎನ್. ಶ್ರೀರಾಮ್ ಬಾಲಾಜಿ ಕಣಕ್ಕಿಳಿಯಬಹುದು. ಅಥವಾ ಈ ಕಾಂಬಿನೇಶನ್ ಬದಲಾಗಲೂಬಹುದು.
ಭಾರತ ಡೇವಿಸ್ ಕಪ್ ಚರಿತ್ರೆಯಲ್ಲಿ ಕೇವಲ 2 ಸಲ ಮಾತ್ರ 0-2 ಹಿನ್ನಡೆಯ ಬಳಿಕ ಮೇಲುಗೈ ಸಾಧಿಸಿದೆ. 2010ರಲ್ಲಿ ಬ್ರಝಿಲ್ ವಿರುದ್ಧ, 2018ರಲ್ಲಿ ಚೀನ ವಿರುದ್ಧ ಈ ಸಾಧನೆಗೈದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
Contractors Association ಅಧ್ಯಕ್ಷ ಕೆಂಪಣ್ಣ ವಿಧಿವಶ; ಗಣ್ಯರ ಸಂತಾಪ
Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Sep.20: ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಕಾಲೇಜು ಘಟಿಕೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.