Nagamangala case; ಬಂಧಿತರಲ್ಲಿ ಅಮಾಯಕರಿದ್ದರೆ ಚಾರ್ಜ್ಶೀಟ್ನಿಂದ ಹೊರಕ್ಕೆ
ಗಲಭೆ ಹಿಂದೆ ಎಚ್ಡಿಕೆ ಕೈವಾಡ ಎಂದ ಡಿ.ಕೆ.ಸುರೇಶ್
Team Udayavani, Sep 15, 2024, 6:30 AM IST
ಮಂಡ್ಯ: ನಾಗಮಂಗಲ ಗಲಾಟೆಯಲ್ಲಿ ಬಂಧನಕ್ಕೆ ಒಳಗಾದವರು ಅಮಾಯಕರೆಂದು ಖಚಿತವಾದರೆ ಚಾರ್ಜ್ಶೀಟ್ ವೇಳೆ ಹೆಸರು ಕೈಬಿಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿ, ಗುಂಪು ಘರ್ಷಣೆಗಳಾದಾಗ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ನೋಡಿಯೋ ಗುಂಪಲ್ಲಿದ್ದರು ಎಂಬ ಕಾರಣಕ್ಕೋ ಬಂ ಧಿಸಿರುತ್ತಾರೆ. ಅಮಾಯಕರಿದ್ದರೆ ಖಂಡಿತವಾಗಿ ಚಾರ್ಜ್ಶೀಟ್ ವೇಳೆ ಕೈಬಿಡಲಾಗುವುದು ಎಂದರು. ಸೋಮವಾರ ಮುಸ್ಲಿಮರ ಹಬ್ಬವಿರುವುದರಿಂದ ಗಣಪತಿ ವಿಸರ್ಜನೆ ಬೇಡ ಎಂದಿದ್ದೇವೆ ಎಂದರು. ನಾಗಮಂಗಲ ಬಹುತೇಕ ಶಾಂತವಾಗಿದ್ದು, ಶನಿವಾರ ಶೇ. 80ರಷ್ಟು ಅಂಗಡಿ-ಮುಂಗಟ್ಟುಗಳು ತೆರೆದಿವೆ. ಜನ ಜೀವನ ಸಹಜ ಸ್ಥಿತಿಗೆ ಮರಳಿತ್ತು.
ಗಲಭೆ ಹಿಂದೆ ಎಚ್ಡಿಕೆ ಕೈವಾಡ: ಡಿ.ಕೆ.ಸುರೇಶ್
ಬೆಂಗಳೂರು: ನಾಗಮಂಗಲ ಗಲಭೆ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಕೈವಾಡವೂ ಇರಬಹುದು. ವಾರಕ್ಕೊಮ್ಮೆ ಬಂದು ಏನೇನೋ ಸಂದೇಶ ಕೊಟ್ಟು ಹೋಗುತ್ತಿರುತ್ತಾರೆ. ಅವರೂ ಕಾರಣ ಇರಬಹುದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವರಿಗೆ ಡಿ.ಕೆ. ಬ್ರದರ್ಸ್ ನೆನಪು ಮಾಡಿಕೊಳ್ಳದಿದ್ದರೆ ಒಂದೂ ಆಗುವುದಿಲ್ಲ, ಎರಡೂ ಆಗುವುದಿಲ್ಲ. ಮೂರನೇಯದಂತೂ ವರ್ಕ್ ಆಗುವುದೇ ಇಲ್ಲ ಎಂದು ಟೀಕಿಸಿದರು.
ಡಿಕೆ ಬ್ರದರ್ಗಳ ಹಿನ್ನೆಲೆ ಜಗತ್ತಿಗೆ ಗೊತ್ತಿದೆ: ಎಚ್ಡಿಕೆ
ಬೆಂಗಳೂರು: ಡಿಕೆ ಬ್ರದರ್ಗಳ ಹಿನ್ನೆಲೆ ಏನು ಎಂಬುದು ಇಡೀ ಜಗತ್ತಿಗೇ ಗೊತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳುವ ಮೂಲಕ ನಾಗಮಂಗಲ ಗಲಭೆ ಹಿಂದೆ ಎಚ್ಡಿಕೆ ಇದ್ದಾರೆ ಎಂಬ ಡಿ.ಕೆ. ಸುರೇಶ್ ಆರೋಪಕ್ಕೆ ತಿರುಗೇಟು ನೀಡಿದರು.
ವರದಿಗಾರರ ಜತೆ ಮಾತನಾಡಿದ ಅವರು, ಡಿ.ಕೆ. ಸುರೇಶ್ ಹಿನ್ನೆಲೆ ಏನು ಎಂದು ಗೊತ್ತಿಲ್ಲವೇ? ಅಣ್ಣ – ತಮ್ಮಂದಿರು ಯಾವ ಮಾರ್ಗದಲ್ಲಿ ಬಂದಿದ್ದಾರೆ. ಯಾರಿಗೆ ಹೇಗೆಲ್ಲ ಬೆದರಿಕೆ ಹಾಕಿದ್ದಾರೆ. ಯಾರ ಯಾರ ಆಸ್ತಿಗಳನ್ನು ಲಪಟಾಯಿಸಿ ಲೂಟಿವೂಡಿದ್ದಾರೆ ಎಂಬುದೆಲ್ಲ ಜನರಿಗೆ ಗೊತ್ತಿದೆ. ಅಂತವರ ಬಗ್ಗೆ ನಾನು ಹೇಳಿಕೆ ಕೊಡಬೇಕಾ? ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು
Raichur ಡಿ.ರಾಂಪುರದಲ್ಲಿ ಭಾರೀ ಗಾತ್ರದ ಮೊಸಳೆ ಸೆರೆ
Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ
Chikkamagaluru: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ
Shahapur; 10ನೇ ತರಗತಿ ವಿದ್ಯಾರ್ಥಿ ಹಠಾತ್ ಕುಸಿದು ಬಿದ್ದು ಸಾ*ವು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.