UV Fusion: ಶಿಕ್ಷಕರೊಂದಿಗಿನ ನೆನಪುಗಳು


Team Udayavani, Sep 15, 2024, 5:15 PM IST

19-uv-fusion

ಶಿಕ್ಷಕರೊಂದಿಗಿನ ಜೀವನವನ್ನು ನೆನಪಿಸಿಕೊಂಡಾಗ ಯಾರಿಗೆ ತಾನೆ ಖುಷಿಯಾಗುವುದಿಲ್ಲ ಹೇಳಿ.ಪ್ರತಿಯೊಬ್ಬರು ಸಹ ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡಾಗ ನಾವೆಲ್ಲರೂ ಕೆಲ ಸಮಯವಾದರೂ ಆ ದಿನಗಳಲ್ಲೇ ಕಳೆದು ಹೋಗುವುದು ಖಚಿತ.ನಮ್ಮ ಜೀವನವನ್ನು ಶಿಕ್ಷಕರೊಂದಿಗೆ ಕಳೆದ ಕ್ಷಣಗಳನ್ನು ಒಮ್ಮೆ ಮೆಲುಕು ಹಾಕಿದಾಗ ಎಷ್ಟೊಂದು ಸುಮಧುರ ಎಂದು ಈಗ ಅನಿಸುತಿದೆ ಅಲ್ಲವೇ? ಅಂದಿನ ತುಂಟಾಟಗಳನ್ನು ಹೆತ್ತವರಿಂದ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಆಟದ ಕಡೆಗೆ ವಾಲುತ್ತಿದ್ದ ನಮ್ಮ ಮನಸ್ಸನ್ನು ಪಾಠದ ಕಡೆಗೆ ವಾಲಿಸಲು ಶಿಕ್ಷಕರು ಪಡುತ್ತಿದ್ದ ಶ್ರಮ ಅಷ್ಟಿಷ್ಟಲ್ಲ.

ಪ್ರತಿಯೊಬ್ಬರು ತನ್ನ ಜೀವನದಲ್ಲಿ ಕಲಿಸಿಕೊಟ್ಟಂತಹ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ.ಚಿಕ್ಕ ವಯಸ್ಸಿನಲ್ಲಿ ಹಲವು ಬಣ್ಣದ ಚೌಕಟ್ಟಿನ ಪಾಟಿಯೊಂದಿಗೆ ಗುರುಗಳ ಮಡಿಲಿನಲ್ಲಿ ಕುಳಿತು ಕಲಿತ ಆ ದಿನಗಳು ಅವಿಸ್ಮರಣೀಯ. ಯಾವುದನ್ನೂ ಮರೆತರೂ ಕಂಠಪಾಠ ಮಾಡಿಸಿ ಕನ್ನಡದ ಮಗ್ಗಿಗಳನ್ನು ಕೇಳುವಂತಹ ತುಂಬಾ ಆತ್ಮೀಯರಾದ ಗುರುಗಳನ್ನು ಖಂಡಿತವಾಗಿಯೂ ಜೀವನದ ಕೊನೆಯವರಿಗೂ ಮರೆಯಬಹುದೆ? ಯಾಕೆ ಪ್ರಶ್ನೆಯಾಗಿದೆ ಎಂದರೆ ಈ ಮಗ್ಗಿಗಳು ಎಂದಾಗ ಎಲ್ಲರು ತಪ್ಪು ಮಾಡಿರುತ್ತೇವೆ. ಹಲವು ಸಲ ಪುಸ್ತಕದಲ್ಲಿ ಐದು ಬಾರಿಯೋ ಹತ್ತು ಬಾರಿಯೋ ಶಿಕ್ಷೆಯೆಂದು ಬರೆಯಲು ಕೊಟ್ಟ ಗುರುಗಳು ಸದಾ ಮನಸ್ಸಿನಲ್ಲಿ ಉಳಿಯುತ್ತಾರೆ. ಆ ಏಟಿಗೆ ಕಲಿತಂತಹ ಸನ್ನಿವೇಶಗಳನ್ನು ಒಮ್ಮೆ ಯೋಚಿಸಿದಾಗ ಮೈಮನಗಳೆಲ್ಲ ಪುಳಕಗೊಂಡು ಅಂದಿನ ಭಯದ ಚಿತ್ರಣ ಇಂದಿನ ಸುಂದರ ನೆನಪುಗಳಾಗಿ ನುಗ್ಗಿ ಬರುತ್ತವೆ.

ಮೂರು,ನಾಲ್ಕು ಗೆರೆಗಳ ಕಾಪಿಯನ್ನು ಕೆಲವೊಮ್ಮೆ ಬರೆಯದೆ,ಹಲವು ಸಲ ಬರೆದರೂ ನೂರಾರು ತಪ್ಪುಗಳನ್ನು ತಿದ್ದುವ ಪ್ರೀತಿಯ ಬೈಗುಳ ಇಂದಿನ ಸಂಗೀತದ ಸ್ವರಗಳಾಗಿವೆ. ಪ್ರತಿಭಾಕಾರಂಜಿಯೂ, ಸ್ವಾತಂತ್ರ್ಯ ದಿನಾಚರಣೆಗೂ ಅಥವಾ ಇನ್ನಿತರ ಕಾರ್ಯಕ್ರಮಗೂ ಮಕ್ಕಳೊಟ್ಟಿಗೆ ಮಗುವಾಗಿ ಕುಣಿದಂತಹ ಶಿಕ್ಷಕರು ಅಚ್ಚುಮೆಚ್ಚು ಅಲ್ಲವೇ…? ಬಾಲ್ಯ ಕಳೆದು ದೊಡ್ಡ ತರಗತಿಗಳಿಗೆ ಹೆಜ್ಜೆ ಇಟ್ಟಂತೆ ಓದು-ಬರವಣಿಗೆ,ಪರೀಕ್ಷೆಗಳು,ಅಂಕಗಳು. ಆದರೆ ನಡೆದು ಬಂದ ಗುರುತುಗಳು ಅಚ್ಚುಗಳಾಗಿವೆ. ಆ ತರಗತಿಗಳನ್ನು ಒಮ್ಮೆ ಯೋಚಿಸಿದಾಗ ಗೇಮ್ಸ್‌ ಕ್ಲಾಸ್‌ ಪಕ್ಕ ನೆನಪಾಗುತ್ತಲ್ಲವೇ…ಅನೇಕ ಬಾರಿ ಆ ಸಮುದಾಯಕ್ಕೆ ಕ್ಲಾಸಿನಲ್ಲಿ ಕುಳ್ಳಿರಿಸಿ ಪಾಠ ಮಾಡುತ್ತಿದ್ದಂತಹ ಗುರುವನ್ನು ಖಂಡಿತವಾಗಿಯೂ ಇಂದಿಗೂ ನೆನಪಿಸುವಂತಹದು. ಜೀವನವು ವಿಸ್ತಾರಗೊಂಡತೆ ಬೆತ್ತಗಳು ಮಾಯಗೊಂಡು, ಬೈಗುಳಗಳು ಕಡಿಮೆಯಾಗಿ ವೈಚಾರಿಕತೆ,ಹಲವಾರು ಕ್ಯಾಂಪYಳು,ಒಂದಿಷ್ಟು ಲ್ಯಾಬ್‌ ಗಳಲ್ಲಿ ಪರದಾಟ,ಪರೀಕ್ಷೆಗಳು ಹೀಗೆ ಹಲವಾರು ಚಟುವಟಿಕೆಗಳಲ್ಲಿ ಸ್ನೇಹಿತರಂತೆಯೆ ಬೆರೆಯುವ ಗುರುಗಳು ಕಾಲೇಜುಗಳಲ್ಲಿ ಸಿಕ್ಕಂತಹ ಆ ಅದ್ಭುತ ಕ್ಷಣಗಳು ಕೂಡ ಜೀವನಕ್ಕೆ ಮತ್ತೂಂದು ಮರೆಯಲಾಗದ ಕ್ಷಣವೆಂದರೆ ತಪ್ಪಾಗದು.ಅದಕ್ಕೆ ಹೇಳುವಂತಹದು ನಿಜವಲ್ಲವೇ ಈ ಮಾತು…ಒಮ್ಮೆ ನೆನಪಿಸಿ ಸ್ನೇಹಿತರೆ…

ವಿದ್ಯಾರ್ಥಿ ಜೀವನದಲ್ಲಿ ಯಾವುದನ್ನೂ ಬೇಕಾದರೂ ಮರೆಯಬಹುದು ಆದರೆ ಪ್ರೀತಿ ಕೊಟ್ಟು ತಿದ್ದಿದಂತಹ ಮತ್ತು ಬೆತ್ತ ಹಿಡಿದು ಏಟು ಕೊಟ್ಟು ತಿದ್ದಿದಂತಹ ಗುರುಗಳನ್ನು ಎಲ್ಲಿ ಹೋದರೂ,ಯಾವುದೇ ಹುದ್ದೆಗಳಲ್ಲಿ ಇದ್ದರೂ ಸದಾ ಅಚ್ಚಳಿಯದ ಭಾವನೆಗಳು.ಬೆತ್ತದಲ್ಲಿ ಕೊಟ್ಟಂತಹ ಆ ಪೆಟ್ಟು ಧೈರ್ಯ,ಛಲಕ್ಕೆ ಸ್ಫೂರ್ತಿ.ಕಪ್ಪು ಹಲಗೆಯಲ್ಲಿ ಬರೆದು ಎಲ್ಲರಿಗೂ ಬರೆಯಲು ಕಲಿಸಿದಂತಹ ಆ ಕೈಗಳು ಜೀವನದಲ್ಲಿ ರಂಗು ತುಂಬುವಂತಹುಗಳು.ಕಲಿಯುವಂತಹ ಹೊತ್ತಿನಲ್ಲಿ ಹೊತ್ತಿಗೆ ಹಿಡಿಸಿ ಬರೆಯಲು ಕಲಿಸಿದ ಗುರುಗಳನ್ನು ಶಿಕ್ಷಕರ ದಿನದಂದು ಮತ್ತೂಮ್ಮೆ ನೆನಪಿಸುವಂತಹ ಸುದಿನವೆಂದೇ ಹೇಳಬಹುದು.

-ಸಂಧ್ಯಾ ಎನ್‌.

ಮಣಿನಾಲ್ಕೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.