Hindu ಎಂದರೆ ಧಾರ್ಮಿಕ ನಂಬಿಕೆ, ಜಾತಿ ಲೆಕ್ಕಿಸದೆ ಉದಾರತೆ, ಸದ್ಭಾವನೆ ಇರುವವರು
5 ಪ್ರಮುಖ ತತ್ವಗಳನ್ನು ಸಾಕಾರಗೊಳಿಸಲು ಆರ್ಎಸ್ಎಸ್ ಸ್ವಯಂಸೇವಕರಿಗೆ ಭಾಗವತ್ ಕರೆ
Team Udayavani, Sep 15, 2024, 7:36 PM IST
ಜೈಪುರ: ”ಹಿಂದೂ ಆಗಿರುವುದು ಎಂದರೆ ಧಾರ್ಮಿಕ ನಂಬಿಕೆಗಳು, ಜಾತಿ ಅಥವಾ ಆಹಾರ ಪದ್ಧತಿಗಳನ್ನು ಲೆಕ್ಕಿಸದೆ ಎಲ್ಲರಿಗೂ ಉದಾರತೆ ಮತ್ತು ಸದ್ಭಾವನೆಯನ್ನು ತೋರಿಸುವುದಾಗಿದೆ” ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ(ಸೆ15) ಹೇಳಿದ್ದಾರೆ.
“ಈ ರಾಷ್ಟ್ರದಲ್ಲಿ ಏನಾದರೂ ತಪ್ಪಾದರೆ, ಅದು ಹಿಂದೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಅದು ರಾಷ್ಟ್ರದ ಕರ್ತೃ- ಧಾರ್ತೃವಾಗಿದೆ ಆದರೆ ದೇಶದಲ್ಲಿ ಏನಾದರೂ ಒಳ್ಳೆಯದು ನಡೆದರೆ ಅದು ಹಿಂದೂಗಳ ಕೀರ್ತಿಯನ್ನು ಹೆಚ್ಚಿಸುತ್ತದೆ” ಎಂದರು.
ಸಾಮಾನ್ಯವಾಗಿ ಹಿಂದೂ ಧರ್ಮ ಎಂದು ಉಲ್ಲೇಖಿಸಲ್ಪಡುವುದು ಮೂಲಭೂತವಾಗಿ, ಸಾರ್ವತ್ರಿಕ ಮಾನವ ಧರ್ಮವಾಗಿದೆ. ಅದು ಪ್ರತಿಯೊಬ್ಬರ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಿದ ಜಾಗತಿಕ ನೀತಿಯನ್ನು ಒಳಗೊಂಡಿರುತ್ತದೆ. ಹಿಂದೂ ಆಗಬೇಕೆಂದರೆ ಜಗತ್ತಿನಲ್ಲೇ ಅತ್ಯಂತ ಉದಾರ ವ್ಯಕ್ತಿಯಾಗಬೇಕು, ಎಲ್ಲರನ್ನೂ ಒಳಗೊಳ್ಳುವವನು, ಎಲ್ಲರ ಬಗ್ಗೆ ಸದ್ಭಾವನೆಯನ್ನು ತೋರಿಸುವವನು ಮತ್ತು ಉದಾತ್ತ ಪೂರ್ವಜರಿಂದ ಬಂದವನು. ಅಂತಹ ವ್ಯಕ್ತಿಯು ಶಿಕ್ಷಣವನ್ನು ಅಪಶ್ರುತಿಯನ್ನು ಬಿತ್ತಲು ಬಳಸುವುದಿಲ್ಲ. ಬುದ್ಧಿವಂತಿಕೆಯನ್ನು ಹಂಚಿಕೊಳ್ಳುತ್ತಾನೆ, ಸಂಪತ್ತನ್ನು ಭೋಗಕ್ಕಾಗಿ ಬಳಸುವುದಿಲ್ಲ ಬದಲಾಗಿ ದಾನಕ್ಕಾಗಿ ಬಳಸುತ್ತಾನೆ. ದುರ್ಬಲರನ್ನು ರಕ್ಷಿಸಲು ಶಕ್ತಿಯನ್ನು ಬಳಸಿಕೊಳ್ಳುತ್ತಾನೆ” ಎಂದು ಭಾಗವತ್ ಹೇಳಿದ್ದಾರೆ.
ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕೌಟುಂಬಿಕ ಮೌಲ್ಯಗಳು, ಸ್ವಯಂ ಅರಿವು ಮತ್ತು ನಾಗರಿಕ ಶಿಸ್ತು ಎಂಬ ಐದು ಪ್ರಮುಖ ತತ್ವಗಳನ್ನು ಸಾಕಾರಗೊಳಿಸಲು ಮತ್ತು ಉತ್ತೇಜಿಸಲು ಆರ್ಎಸ್ಎಸ್ ಸ್ವಯಂಸೇವಕರಿಗೆ ಭಾಗವತ್ ಕರೆ ನೀಡಿದರು.
”ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರಲು ಸಾಮಾಜಿಕ ಜಾಲತಾಣಗಳ ದುರ್ಬಳಕೆಯೇ ಕಾರಣ ಎಂದು ಆರೋಪಿಸಿದರು.ಅದು ಯುವ ಪೀಳಿಗೆಯು ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ತ್ವರಿತವಾಗಿ ಸಂಪರ್ಕವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ” ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.