Nagamangala ಗಲಭೆಗೆ ಕೇರಳ ಲಿಂಕ್: ಮಾಹಿತಿ ಸಂಗ್ರಹಕ್ಕೆ ಮುಂದಾದ ಪೊಲೀಸರು
ಬಂಧಿತ ಇಬ್ಬರು ಆರೋಪಿಗಳ ಪೂರ್ವಾಪರ ಪರಿಶೀಲನೆ; ಪ್ರಕರಣದ 44, 61ನೇ ಆರೋಪಿ ಮೇಲೆ ಕಣ್ಣು
Team Udayavani, Sep 15, 2024, 11:29 PM IST
ಮಂಡ್ಯ: ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಲ್ಲಿ ಇಬ್ಬರು ಕೇರಳದ ಮೂಲದವರೆಂಬುದು ತಿಳಿದುಬಂದಿದ್ದು, ಕೋಮುಗಲಭೆಗೆ ಕೇರಳದ ಸಂಪರ್ಕ ಇದೆಯಾ ಎಂದು ಬಗ್ಗೆ ತಿಳಿದುಕೊಳ್ಳಲು ಇಬ್ಬರು ಆರೋಪಿಗಳ ಹಿನ್ನೆಲೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈಗಾಗಲೇ 150 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, 55 ಮಂದಿಯನ್ನು ಬಂ ಧಿಸಲಾಗಿದೆ. ಪ್ರಕರಣದ 44ನೇ ಆರೋಪಿ ಯೂಸುಫ್, 61ನೇ ಆರೋಪಿ ನಾಸೀರ್ ಮೂಲ ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆನ್ನಲಾಗಿದೆ.
ಇಂಟರ್ನಲ್ ಸೆಕ್ಯೂರಿಟಿಗೆ ಮಾಹಿತಿ ಕಳುಹಿಸಿರುವ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಇಬ್ಬರು ನಿಷೇ ಧಿತ ಪಿಎಫ್ಐ ಸಂಘಟನೆಯವರಾ? ಅಥವಾ ಅವರ ಮೇಲೆ ಈ ಹಿಂದೆ ಯಾವುದಾದರೂ ಪ್ರಕರಣಗಳು ದಾಖಲಾಗಿವೆಯಾ?, ಯಾವುದಾದರೂ ಗಲಾಟೆಯಲ್ಲಿ ಭಾಗವಹಿಸಿದ್ದಾರಾ? ಎಂಬ ಸಂಪೂರ್ಣ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ವಿಹಿಂಪ ಆರೋಪ
ಬಂಧಿತರಿಬ್ಬರು ನಿಷೇಧಿತ ಪಿಎಫ್ಐ ಸಂಘಟನೆಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಗಲಭೆಯೂ ಪೂರ್ವ ನಿಯೋಜಿತವಾಗಿದ್ದು, ಗಲಭೆಗೂ ಮುನ್ನ ಮೆಡಿಕಲ್ ಸ್ಟೋರ್ನಲ್ಲಿ 200 ಮಾಸ್ಕ್ಗಳನ್ನು ಖರೀದಿಸಿದ್ದಾರೆಂದು ಆರೋಪಿಸಿತ್ತು. ಆರೋಪಿಗಳ ಮೂಲ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.