ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಮರುನಾಮಕರಣ ಹಿಂದೆ ಕಾರಣಗಳು ಹಲವು..

Team Udayavani, Sep 16, 2024, 7:45 AM IST

ಮರುನಾಮಕರಣ ರಾಜಕಾರಣ! ಪ್ರಮುಖ ಸ್ಥಳಗಳು, ನಗರಗಳ ಹೆಸರು ಬದಲಾವಣೆ ಈಚೆಗಿನ ಟ್ರೆಂಡ್‌

ಭಾರತದಲ್ಲಿ ಹೆಸರು ಬದಲಾವಣೆ ಎಂಬುದು ರಾಜಕೀಕರಣಗೊಂಡಿದೆ. ಸರಕಾರ‌ಗಳು ಬದಲಾದ ಕೂಡಲೇ ನಗರಗಳ, ಕಾನೂನುಗಳ, ಯೋಜನೆಗಳ ಹೆಸರನ್ನು ಬದಲು ಮಾಡುತ್ತಲೇ ಇವೆ. ಇತ್ತೀಚೆಗಷ್ಟೇ ಅಂಡಮಾನ್‌ನ ರಾಜಧಾನಿ ಫೋರ್ಟ್‌ ಬ್ಲೇರ್‌ ಹೆಸರನ್ನು ಶ್ರೀವಿಜಯಪುರಂ ಎಂದು ಕೇಂದ್ರ ಸರಕಾರ‌ ಬದಲಿಸಿದೆ. ಇದಕ್ಕೂ ಮೊದಲು ಕರ್ನಾಟಕದ ಜಿಲ್ಲೆಯಾದ ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲು ಮಾಡಲು ಸರಕಾರ‌ ಮುಂದಾಗಿತ್ತು. ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿರುವ ಅಶೋಕ ಹಾಲ್‌ ಮತ್ತು ದರ್ಬಾರ್‌ ಹಾಲ್‌ಗ‌ಳ ಹೆಸರನ್ನು ಬದಲಾವಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿನ ಹೆಸರು ಬದಲಾವಣೆ ಪರ್ವದ ಒಂದಷ್ಟು ವಿವರಣೆ ಇಲ್ಲಿದೆ.

ಸ್ವಾತಂತ್ರ್ಯ ಸಿಕ್ಕಿದಾಗಿನಿಂದಲೇ ಬದಲಾವಣೆ ಶುರು!
ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿ ಹೊರಟಾಗಿನಿಂದಲೇ ಭಾರತದಲ್ಲಿ ಹೆಸರು ಬದಲಾವಣೆಯ ಪರ್ವ ಆರಂಭವಾ­ಯಿತು. ಮೊದಲೆಲ್ಲ ಇದಕ್ಕೆ ನಿರ್ದಿಷ್ಟ ಕಾರಣಗಳಿದ್ದರೆ, ಈಗ ಇದು ರಾಜಕೀಕರಣ­ಗೊಂಡಿದೆ. ಒಂದಷ್ಟು ಬದಲಾವಣೆಗಳು ವಿವಾದಕ್ಕೆ ಕಾರಣ ವಾದರೆ, ಒಂದಷ್ಟು ಬದಲಾವ­ಣೆಗಳು ಸ್ವಾಗತ ಪಡೆದು­ಕೊಂಡವು. ಸ್ವಾತಂತ್ರ್ಯ ಸಿಕ್ಕಿದ ಕೂಡಲೇ, ಟ್ರಾವಂಕೂರನ್ನು ಕೇರಳ (1956), ಮಧ್ಯಭಾರತ­ವನ್ನು ಮಧ್ಯಪ್ರದೇಶ (1959), ಮದ್ರಾಸ್‌ ಸ್ಟೇಟ್‌ ಅನ್ನು ತಮಿಳುನಾಡು (1969), ಮೈಸೂರು ರಾಜ್ಯವನ್ನು ಕರ್ನಾಟಕ (1973) ಎಂದು ಬದಲಾಯಿಸಲಾಯಿತು. ಇದಾದ ಬಳಿಕವೂ 2024ರ ವರೆಗೂ ನೂರಾರು ಹೆಸರನ್ನು ಬದಲಾವಣೆ ಮಾಡಲಾಗಿದೆ.

ಹೆಸರು ಬದಲಾವಣೆ ಏಕೆ?
ಸುಮಾರು 400 ವರ್ಷಗಳ ಭಾರತವನ್ನು ಆಳಿದ ಬ್ರಿಟಿಷರು ಹಾಗೂ ಅದಕ್ಕೂ ಮೊದಲು ಈ ದೇಶವನ್ನಾಳಿದ ಮೊಘಲ್‌ ದೊರೆ ಗಳು ಭಾರತದ ಹೆಸರುಗಳನ್ನು ಉಚ್ಚಾರಣೆ ಮಾಡಲಾಗದೇ ಅವು ಗಳನ್ನು ಅಪಭ್ರಂಶಗೊಳಿ­ಸಿದ್ದರು. ಅಲ್ಲದೇ ತಮಗೆ ಅನುಕೂಲವಾಗು­ವಂತಹ ಹೆಸರುಗಳನ್ನು ಇಟ್ಟಿದ್ದರು. ಭಾರತ ಸ್ವತಂತ್ರಗೊಂಡ ಬಳಿಕ ರಾಷ್ಟ್ರೀ­ಯ­ತೆಯ ಭಾವ ಹೆಚ್ಚಾಗತೊ­ಡ­ಗಿದಂತೆ ಭಾರತದ ಪ್ರಾಚೀನ ಭವ್ಯತೆಯನ್ನು ಮತ್ತೆ ಎತ್ತಿ ಹಿಡಿಯಬೇಕು ಎಂಬ ಕೂಗು ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಮೊಘಲರು ನೀಡಿದ ಹೆಸರುಗಳು ಮತ್ತು ವಸಾಹತುಶಾಹಿತ್ವವನ್ನು ಬಿಂಬಿಸುವ ಹೆಸರುಗಳನ್ನು ಬದಲಾವಣೆ ಮಾಡುವ ಕೆಲಸಗಳು ಆರಂಭವಾದವು.

ಭಾರತ ಇಂಡಿಯಾ: ವಿವಾದ
ಇಂಡಿಯಾ ಎನ್ನುವ ಹೆಸರನ್ನು ಬದಲಾವಣೆ ಮಾಡಿ ಭಾರತ ಎಂದಷ್ಟೇ ಹೆಸರಿಡಬೇಕು ಎಂದು ಹಲವು ಬಾರಿ ಕೂಗುಗಳು ಕೇಳಿಬಂದಿದ್ದವು. ಅಲ್ಲದೇ ಹಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಹ ಸಲ್ಲಿಕೆ ಮಾಡಿದ್ದರು. 2004ರಲ್ಲಿ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ­ಕೋರ್ಟ್‌ ಭಾರತ ಮತ್ತು ಇಂಡಿಯಾ ಎಂಬುದು ಎರಡನ್ನೂ ಸಂವಿಧಾನದಲ್ಲಿ ನಮೂದಿಸಲಾಗಿದೆ. ಹೀಗಾಗಿ ಬದಲಾವಣೆ ಮಾಡಬೇಕು ಎಂಬುದು ಸರಿಯಲ್ಲ ಎಂದು ಹೇಳಿತ್ತು. ಸಂವಿಧಾನದಲ್ಲೇ ಹೆಸರಿಗೆ ಬದಲಾವಣೆ ತರಬೇಕು ಎಂದು ಉತ್ತರ ಪ್ರದೇಶ ಸರಕಾರ‌ ತನ್ನ ವಿಧಾನಸಭೆಯಲ್ಲಿ ಗೊತ್ತುವಳಿಯನ್ನೂ ಅಂಗೀಕರಿಸಿತ್ತು. ಭಾರತ ಅಥವಾ ಇಂಡಿಯಾ ಹೆಸರನ್ನು ನಮ್ಮದೇ ಎಂದು ಒಪ್ಪಿಕೊಂಡಿದ್ದರೂ ಸಹ ಇದರ ಬದಲಾವಣೆಗೆ ಸಾಕಷ್ಟು ರಾಜಕೀಯ ನಡೆಯುತ್ತಲೇ ಇದೆ.

ಬದಲಾವಣೆಗೆ ಕಾನೂನು ಏನು ಹೇಳುತ್ತದೆ?
ರಾಜ್ಯಗಳು ಮತ್ತು ನಗರಗಳ ಹೆಸರು ಬದಲಾವಣೆಯಾಗಬೇಕಿದ್ದರೆ ಅದನ್ನು ಕೇಂದ್ರ ಸರಕಾರ‌ ಅನುಮೋದಿಸಬೇಕು. ರಾಜ್ಯಗಳು ತಮ್ಮಲ್ಲಿರುವ ನಗರಗಳ ಅಥವಾ ಸ್ಥಳಗಳ ಹೆಸರು ಬದಲಾವಣೆಗೆ ನಿರ್ಧರಿಸಿದರೆ ಅದರ ಪ್ರಸ್ತಾಪವನ್ನು ಕೇಂದ್ರ ಸರಕಾರ‌ಕ್ಕೆ ಕಳುಹಿಸಿಕೊಡಬೇಕು. ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದರೆ ಹೆಸರು ಬದಲಾವಣೆ ಮಾಡಲಾಗುತ್ತದೆ. ಬಳಿಕ ಇಂಗ್ಲಿಷ್‌ ಹಾಗೂ ಸ್ಥಳೀಯ ಭಾಷೆಗಳಲ್ಲಿ ಹೊಸ ಹೆಸರನ್ನು ಮುದ್ರಿಸಲಾಗುತ್ತದೆ. ಸರಕಾರಿ ದಾಖಲೆಗಳು, ಕಡತಗಳಲ್ಲಿ ಹೊಸ ಹೆಸರನ್ನು ಸೇರಿಸಲಾಗುತ್ತದೆ. ಆಯಾ ಸ್ಥಳಗಳಲ್ಲಿ ಹೆಸರು ಬದಲಾವಣೆಯ ಫ‌ಲಕಗಳನ್ನು ಅಳವಡಿಸಲಾಗುತ್ತದೆ.

ಅಧಿಕಾರ ಸಿಕ್ಕಿದ ಕೂಡಲೇ ಹೆಸರು ಬದಲು ರಾಜಕಾರಣ!
ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದಲ್ಲಿಅಧಿಕಾರಕ್ಕೇರು­ತ್ತಲೇ ಹೆಸರು ಬದಲಾವಣೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಹೆಸರು ಬದಲಾವಣೆ ಮಾಡುವ ಭರವಸೆಯನ್ನೇ ನೀಡಿ ಅವರು ಅಧಿಕಾರಕ್ಕೇರಿದ್ದರು. ಇದೇ ಮಾದರಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಹ ಅನುಸರಿಸಿದ್ದು, ಮೊಘಲ್‌ ಹೆಸರುಗಳನ್ನು ಹೊಂದಿರುವ ನಗರಗಳ ಹೆಸರನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವ ಭರವಸೆಯನ್ನು ನೀಡಿದ್ದಾರೆ.

ಇತ್ತೀಚಿನ ಪ್ರಮುಖ ಮರುನಾಮಕರಣಗಳು

ಶ್ರೀವಿಜಯ ಪುರಂ: ಅಂಡ ಮಾನ್‌ ಮತ್ತು ನಿಕೋಬಾರ್‌ ದ್ವೀಪದ ರಾಜಧಾನಿ ಪೋರ್ಟ್‌ಬ್ಲೇರ್‌ ಹೆಸರನ್ನು ಶ್ರೀವಿಜಯಪುರಂ ಎಂದು ಕೇಂದ್ರ ಸರಕಾರ‌ ಬದಲಿಸಿದೆ.
ಅಮೃತ ಉದ್ಯಾನ: ರಾಷ್ಟ್ರಪತಿ ಭವನದ ಮೊಘಲ್‌ ಗಾರ್ಡನ್‌ ಅನ್ನು ಅಮೃತ ಉದ್ಯಾನ ಎಂದು ಬದಲಿಸಲಾಗಿದೆ.
ಛತ್ರಪತಿ ಸಂಭಾಜಿ ನಗರ: ಮಹಾರಾಷ್ಟ್ರ­ದ ಔರಂಗಾಬಾದ್‌, ಒಸ್ಮನಾಬಾದ್‌ಗಳ ಹೆಸರನ್ನು ಛತ್ರಪತಿ ಸಂಭಾಜಿ ನಗರ, ಧಾರಾಶಿವ ಎಂದು ಬದಲಿಸಲಾಗಿದೆ.
ಜೇಟ್ಲಿ ಮೈದಾನ: ಫಿರೋಜ್‌ ಕೋಟ್ಲಾ ಮೈದಾನ ಹೆಸರನ್ನು ಅರುಣ್‌ ಜೇಟ್ಲಿ ಮೈದಾನ ಎಂದು ಬದಲಿಸಲಾಯಿತು.
ಕರ್ತವ್ಯಪಥ: ರಾಜಪಥ ರಸ್ತೆಯನ್ನು “ಕರ್ತವ್ಯಪಥ’ ಎಂದು ಬದಲಿಸಲಾಗಿದೆ. ಪ್ರಯಾಗರಾಜ್‌: ಉತ್ತರಪ್ರದೇಶದ ಅಲಹಾಬಾದ್‌ ಹೆಸರನ್ನು ಪ್ರಯಾಗ ರಾಜ್‌ ಎಂದು ಬದಲಿಸಲಾಗಿದೆ. 2019ರಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಗಣತಂತ್ರ ಮಂಟಪ: ರಾಷ್ಟ್ರಪತಿ ಭವನದ ದರ್ಬಾಲ್‌ ಹಾಲ್‌ ಮತ್ತು ಅಶೋಕ್‌ ಹಾಲ್‌ಗ‌ಳನ್ನು ಗಣತಂತ್ರ ಮಂಟಪ ಮತ್ತು ಅಶೋಕ್‌ ಮಂಟಪಗಳೆಂದು ಕೇಂದ್ರ ಸರಕಾರ‌ವು ಮರು ನಾಮಕರಣ ಮಾಡಿದೆ.

ಸರಕಾರ‌ಗಳ ಮುಂದಿರುವ ಹೆಸರು ಬದಲಾವಣೆ ಪ್ರಸ್ತಾವನೆಗಳು!

1.ಕೇರಳಂ: ಕೇರಳದ ಹೆಸರನ್ನು ಕೇರಳಂ ಎಂದು ಬದಲಿಸುವ ಕುರಿತು ರಾಜ್ಯ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಿದ್ದರೂ ಕೇಂದ್ರ ಸರಕಾರ‌ ಈ ಮನವಿಗೆ ಇನ್ನೂ ಒಪ್ಪಿಗೆ ನೀಡಿಲ್ಲ.

2.ಗಾಜಿಯಾಬಾದ್‌: ಗಾಜಿಯಾಬಾದ್‌ ಹೆಸರನ್ನು ಬದಲಾವಣೆ ಮಾಡಲು ಉತ್ತರ ಪ್ರದೇಶ ಸಿಎಂ ಯೋಗಿ ಪಣತೊಟ್ಟಿದ್ದಾರೆ. ಈಗಾಗಲೇ 3 ಹೆಸರು ಸ್ಥಳೀಯ ಆಡಳಿತ ಫೈನಲ್‌ ಮಾಡಿದ್ದು, ಕೇಂದ್ರ ಸರಕಾರ‌ದ ಒಪ್ಪಿಗೆಯಷ್ಟೇ ಬಾಕಿ ಇದೆ.

3.ಅಕ್ಬರ್‌ಪುರ್‌: ಮೊಘಲ್‌ ದೊರೆ ಅಕ್ಬರ್‌ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಅಕºರ್‌ಪುರದ ಹೆಸರನ್ನು ಬದಲಾವಣೆ ಮಾಡಲು ಯೋಗಿ ನಿರ್ಧರಿಸಿದ್ದಾರೆ. ಈ ಬಗ್ಗೆ ಈಗಾಗಲೇ ಅವರು ಸುಳಿವು ನೀಡಿದ್ದು, ಬದಲಾವಣೆಗೆ ಬೇಕಾದ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

4.ಭಾಗ್ಯನಗರ: ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ನ ಹೆಸರನ್ನು ಭಾಗ್ಯನಗರ ಎಂದು ಬದಲು ಮಾಡುವ ಪ್ರಸ್ತಾವವನ್ನು ಸಲ್ಲಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಬದಲಾವಣೆ ಆರಂಭವಾಗುತ್ತಿದ್ದಂತೆ ದಕ್ಷಿಣದಲ್ಲೂ ಈ ಕೂಗು ಎದ್ದಿದ್ದು, ಸ್ಥಳೀಯ ನಾಯಕರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.

5.ರಾಮನಗರ: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ ಕರ್ನಾಟಕ ಸರಕಾರ‌ದ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಆದರೆ ಜೆಡಿಎಸ್‌ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

6.ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಬಾಗೇಪಲ್ಲಿ ತೆಲುಗು ಹೆಸರಾಗಿದ್ದು, ಕನ್ನಡದ ಸೊಗಡು ಇಲ್ಲ ಎಂಬ ಕಾರಣಕ್ಕೆ ಮರುನಾಮಕರಣಕ್ಕೆ ಒತ್ತಡವಿದೆ.

7.ಮುಂಬಯಿ ಸೆಂಟ್ರಲ್‌ ಸ್ಟೇಷನ್‌: ಮುಂಬಯಿ ಸೆಂಟ್ರಲ್‌ ರೈಲು ನಿಲ್ದಾಣವನ್ನು ನಾನಾ ಜಗನ್ನಾಥ ಶಂಕರ್‌ ಸೇಠ್ ಎಂದು ಬದಲಿಸುವ ಪ್ರಸ್ತಾವವಿದೆ.

8.ಮರೀನ್‌ ಲೈನ್‌: ಮುಂಬಯಿಯ ಪ್ರಮುಖ ರೈಲು ನಿಲ್ದಾಣವಾಗಿರುವ ಮುಂಬಯಿ ಮರೀನ್‌ ಲೈವ್‌ ಅನ್ನು ಮುಂಬಾದೇವಿ ಎಂದು ಬದಲಿಸುವ ಪ್ರಸ್ತಾವವನ್ನು ಮಹಾರಾಷ್ಟ್ರ ಸರಕಾರ‌ ಹೊಂದಿದೆ.

9.ಡ್ರ್ಯಾಗನ್‌ ಫ್ರುಟ್‌: ಗುಜರಾತ್‌ ಮುಖ್ಯಮಂತ್ರಿ ಅವರು ಡ್ರ್ಯಾಗನ್‌ಫ್ರುಟ್‌ಗೆ “ಕಮಲಾಂ’ ಎಂದು ಮರುನಾಮಕರಣ ಮಾಡುವ ಬಗ್ಗೆ ಪ್ರಸ್ತಾವಿಸಿದ್ದರು. ಈ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು.

10.ಕರೀಮ್‌ನಗರ: ತೆಲಂಗಾಣದ ಕರೀಮ್‌ನಗರ ಹೆಸರನ್ನು ಯೆಲಗಂಡುಲಾ ಎಂದು ಮರು ನಾಮಕರಣ ಮಾಡುವ ಬಗ್ಗೆ ಸ್ಥಳೀಯ ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಸರಕಾರ‌ ಮಟ್ಟದಲ್ಲಿ ಪ್ರಸ್ತಾವ ಕೂಡ ಇದೆ.

ಮಾಹಿತಿ: ಗಣೇಶ್‌ ಪ್ರಸಾದ್‌

ಟಾಪ್ ನ್ಯೂಸ್

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

Lokayukta

Kinnigoli: ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ,ಜೂನಿಯರ್‌ ಇಂಜಿನಿಯರ್‌ ಲೋಕಾಯಕ್ತ ಬಲೆಗೆ

1-tirupati-laddu

Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Suspend

Nagamangala ಗಲಭೆ: ಡಿವೈಎಸ್ಪಿ ಅಮಾನತು

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.