Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ


Team Udayavani, Sep 16, 2024, 7:20 AM IST

Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ

ಸುಳ್ಯ: ಕಳೆದ ಬೇಸಗೆಯಲ್ಲಿ ಐತಿಹಾಸಿಕ ದಾಖಲೆಯ ಧಾರಣೆಯಿಂದ ಉತ್ತಮ ಆದಾಯ ಪಡೆದಿದ್ದ ಕೊಕ್ಕೋ ಬೆಳೆಗಾರರು ಈ ಬಾರಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಈ ಬಾರಿಯ ವಿಪರೀತ ಮಳೆಗೆ ಕೊಕ್ಕೋ ಕಾಯಿಗಳು ಕರಟು ತ್ತಿರುವುದರಿಂದ ಭಾರೀ ನಷ್ಟವಾಗುತ್ತಿರುವುದೇ ಕಾರಣ.

ಈ ಹಿಂದೆಯೇ ಕೊಕ್ಕೋ ಕೃಷಿ ಯಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಕೊಕ್ಕೋಗೆ ವಿವಿಧ ರೀತಿಯ ರೋಗಗಳು ಬಾಧಿ ಸುತ್ತಲೇ ಇದ್ದವು. ಈ ನಡುವೆ ಸರಿಯಾದ ಧಾರಣೆಯೂ ಇಲ್ಲದೆ ಕರಾವಳಿ ಜಿಲ್ಲೆಗಳಲ್ಲಿ ಕೊಕ್ಕೋ ಬೆಳೆ ಕೆಲವು ವರ್ಷಗಳಿಂದ ಹಿಂಜರಿತ ಕಂಡಿತ್ತು. ಆದರೆ ಕಳೆದ ಬೇಸಗೆಯಲ್ಲಿ ಕೊಕ್ಕೋಗೆ ಐತಿಹಾಸಿಕ ದಾಖಲೆಯ ಧಾರಣೆ ಸಿಕ್ಕಿದ್ದರಿಂದ ಬೆಳೆಗಾರರಲ್ಲಿ ಹೊಸ ಹುರುಪು ಮೂಡಿತ್ತು. ಮೊದಲ ಬಾರಿಗೆ ಹಸಿ ಕೊಕ್ಕೋ ಕೆ.ಜಿ.ಗೆ 100 ರೂಪಾಯಿ ದಾಟಿ ಧಾರಣೆ 320ರ ವರೆಗೂ ಏರಿಕೆ ಕಂಡಿತ್ತು. ಆದರೆ ಆ ಬಳಿಕ ಇಳಿಕೆಯಾಗಿ ಮತ್ತೆ 100 ರೂ.ಗಳ ಆಸುಪಾಸಿನಲ್ಲಿ ಇದೆ.

ಕರಟಿದ ಕೊಕ್ಕೋ ಕಾಯಿಗಳು
ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಕೊಕ್ಕೋ ಬೆಳೆಗಾರರಿಗೆ ಕಂಟಕವಾಗಿದೆ. ಸಾಮಾನ್ಯವಾಗಿ ಉತ್ತಮ ಕೊಕ್ಕೊ ಫಸಲು ಲಭಿಸುತ್ತಿದ್ದ ಆಗಸ್ಟ್‌, ಸೆಪ್ಟಂಬರ್‌ ತಿಂಗಳಲ್ಲಿ ಈ ಬಾರಿ ಫಸಲೇ ಸಿಗದ ಸ್ಥಿತಿ ಬಂದಿದೆ. ಕೃಷಿಕರಿಗೆ ದಿನ ನಿತ್ಯ ಆದಾಯ ಕೊಡುವ ಮುಖ್ಯ ಮಿಶ್ರ ಬೆಳೆ ಕೊಕ್ಕೋಗೆ ವಿಪರೀತ ಮಳೆಯೇ ಹಿನ್ನಡೆ ತಂದಿದೆ.

ವಿಪರೀತ ಮಳೆಯಿಂದ ಕೊಕ್ಕೋ ಕಾಯಿಗಳು ಕಪ್ಪು ಬಣ್ಣಕ್ಕೆ ತಿರುಗಿ ಕರಟುತ್ತಿವೆ ಹಾಗೂ ಕೊಳೆತು ಉದುರುತ್ತಿವೆ. ಹೂವಾಗಿ ಕಾಯಿ ಕಟ್ಟುತ್ತಿರುವಾಗಲೇ ಕರಟುತ್ತಿದ್ದು, ಬೆಳೆಯನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಹುತೇಕ ಗಿಡಗಳಲ್ಲಿ ಕರಟಿದ ಕಾಯಿಗಳೇ ಕಂಡುಬರುತ್ತಿದ್ದು, ಶೇ. 60ಕ್ಕೂ ಅಧಿಕ ಪ್ರಮಾಣದಲ್ಲಿ ಕೊಕ್ಕೋ ಕರಟಿದ ಸ್ಥಿತಿಯಲ್ಲಿದೆ ಎನ್ನುತ್ತಾರೆ ಬೆಳೆಗಾರರು. ಪ್ರತೀ ಮಳೆಗಾಲದಲ್ಲೂ ಈ ರೀತಿಯಲ್ಲಿ ಕಾಯಿ ಕರಟುತ್ತಿದ್ದರೂ ಈ ಬಾರಿ ವ್ಯಾಪಕವಾಗಿದೆ ಎನ್ನುವುದು ಬೆಳೆಗಾರರ ಅಭಿಪ್ರಾಯ. ಇದು ಕಪ್ಪು ಕಾಯಿ ಕೊಳೆರೋಗದ ಲಕ್ಷಣದಂತಿದೆ. ಕೊಕ್ಕೋದಲ್ಲಿ ಕಪ್ಪುಕಾಯಿ ಕೊಳೆರೋಗ ಫೈಟೋಫ¤ರಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ.

ಲಕ್ಷಣಗಳು: ಕಾಯಿಯ ಮೇಲೆ ಕಂದು ಬಣ್ಣದ ಅಥವಾ ಚಾಕಲೇಟ್‌ ಬಣ್ಣದ ಚುಕ್ಕಿ ಕಾಣಿಸಿಕೊಳ್ಳುತ್ತದೆ. ಕಾಲಕ್ರಮೇಣ ಅದು ಇಡೀ ಕಾಯಿಯನ್ನು ಆವರಿಸುತ್ತದೆ. ಕಾಯಿಯ ಹೊರ ಮೈಮೇಲೆ ಬಿಳಿ ಬಣ್ಣದ ದಾರದ ರೂಪದಲ್ಲಿ ಈ ಶೀಲಿಂಧ್ರವು ಬೆಳೆದಿರುತ್ತದೆ. ಕಾಯಿಯ ಒಳಭಾಗದಲ್ಲಿರುವ ಬೀಜವು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಹತೋಟಿ ಕ್ರಮಗಳು: ಬಿದ್ದಿರುವಂ ಎಲೆಗಳು ಹಾಗೂ ರೋಗ ಪೀಡಿತ ಕಾಯಿಗಳನ್ನು ಹೆಕ್ಕಿ ಸುಟ್ಟು ಹಾಕಬೇಕು. ಸಮಯಕ್ಕೆ ಸರಿಯಾಗಿ ಗಿಡಗಳನ್ನು ಸವರುತ್ತಿರಬೇಕು. ಗಿಡ ಸವರುವುದರಿಂದ ಸೂರ್ಯನ ಬೆಳಕು ಮತ್ತು ಗಾಳಿಯಾಡಲು ಸಹಾಯಕವಾಗುತ್ತದೆ. ಮಲೆಗಾಲದಲ್ಲಿ ಶೇ. 1 ಬೋರ್ಡೋ ಮಿಶ್ರಣವನ್ನು ಸಿಂಪಡಿಸಬೇಕಾಗುತ್ತದೆ.

ಧಾರಣೆಯೂ ಕುಸಿತ: ಕಳೆದ ಬೇಸಗೆಯಲ್ಲಿ ಕೊಕ್ಕೋ ಧಾರಣೆಯಲ್ಲಿ ಏರಿಕೆ ಕಂಡು ಮೇ ತಿಂಗಳಿನ ವೇಳೆ 320 ರೂ.ವರೆಗೆ ಏರಿಕೆ ಕಂಡಿದ್ದ ಕೊಕ್ಕೋ ಧಾರಣೆ ಬೆಳೆಗಾರರಿಗೆ ಉತ್ತಮ ಆದಾಯ ನೀಡಿತ್ತು. ಪ್ರಸ್ತುತ 100 ರೂ. ಆಸುಪಾಸಿನಲ್ಲಿ ಇದ್ದರೂ ಇದೇ ಧಾರಣೆ ಸ್ಥಿರವಾಗಿದ್ದರೆ ಬೆಳೆಗಾರರಿಗೆ ಅನುಕೂಲಕರ. ಈಗ ಮಳೆಗಾಲದಲ್ಲಿ ಕೊಕ್ಕೋ ಗುಣಮಟ್ಟದಿಂದಾಗಿ ಬೆಲೆ ಇಳಿಕೆ ಮಾಡಲಾಗುತ್ತಿದ್ದು, ಇದರ ಜತೆಗೆ ರೋಗಬಾಧೆಯೂ ಎದುರಾಗಿದೆ.

ಮಳೆಗಾಲದಲ್ಲಿ ಕೊಕ್ಕೋ ಬೆಳೆಯಲ್ಲಿ ಕೊಳೆ ರೋಗ, ಕಪ್ಪು ಕಾಯಿ ರೋಗ ಕಾಣಿಸಿಕೊಳ್ಳುತ್ತದೆ. ವಿಪರೀತ ಮಳೆಗೆ ಹಾಗೂ ಶಿಲೀಂಧ್ರಗಳಿಂದ ಕೊಕ್ಕೋ ಕಾಯಿಗಳು ಕಪ್ಪಾಗಿ ಕರಟುತ್ತವೆ. ಇದರ ನಿಯಂತ್ರಣ ಸಾಧ್ಯವಿದ್ದು, ಕೊಕ್ಕೋ ಹೂವು ಬಿಟ್ಟು ಕಾಯಿ ಇರುವ ಸಂದರ್ಭದಲ್ಲೇ ಬೋರ್ಡೋ ದ್ರಾವಣ ಅಥವಾ ತಜ್ಞರಿಂದ ಪರಿಶೀಲಿಸಿ ಸಂಬಂಧಿಸಿದ ಔಷಧ ಸಿಂಪಡಿಸಬೇಕು.
-ಡಾ| ವಿನಾಯಕ ಹೆಗಡೆ,
ವಿಜ್ಞಾನಿ, ಸಿಪಿಸಿಆರ್‌ಐ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Puttur: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು

1

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

Ninthikallu-ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಹೊಂಡ-ಗುಂಡಿಗಳದ್ದೇ ಸಾಮ್ರಾಜ್ಯ

Ninthikallu-ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಹೊಂಡ-ಗುಂಡಿಗಳದ್ದೇ ಸಾಮ್ರಾಜ್ಯ

High Court ನಿರ್ದೇಶನ: ಕೊಂಬಾರಿನ ರಸ್ತೆ, ಬಿರ್ಮೆರೆಗುಂಡಿ ಸೇತುವೆಗೆ 1.31 ಕೋಟಿ ರೂ.

High Court ನಿರ್ದೇಶನ: ಕೊಂಬಾರಿನ ರಸ್ತೆ, ಬಿರ್ಮೆರೆಗುಂಡಿ ಸೇತುವೆಗೆ 1.31 ಕೋಟಿ ರೂ.

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Suspend

Nagamangala ಗಲಭೆ: ಡಿವೈಎಸ್ಪಿ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.