![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 16, 2024, 12:51 PM IST
ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯ ಹಲವೆಡೆಗಳಲ್ಲಿ ರಸ್ತೆಗಳ ಡಾಮರು ಕಿತ್ತು ಹೋಗಿ ವಾಹನಗಳು ಸಂಚರಿಸುವುದೇ ಕಷ್ಟವಾಗಿದೆ. ದೊಡ್ಡ ದೊಡ್ಡ ಗುಂಡಿಗಳು ಬಾಯೆ¤ರೆದು ಕೂತಿದ್ದು, ವಾಹನ ಸವಾರರಿಗೆ ಹೊಂಡ ತಪ್ಪಿಸಿ ಸಾಗುವುದು ಸವಾಲಾಗಿದೆ.
ಮಳೆಗಾಲ ಆರಂಭದ ಪೂರ್ವದಲ್ಲಿ ನಗರದೊಳಗಿನ ರಸ್ತೆಗಳು ಹಲವು ಕಡೆಗಳಲ್ಲಿ ಸಂಪೂರ್ಣ ಹದಗೆಟ್ಟಿತ್ತು. ವಾಹನ ಸವಾರರು, ನಾಗರಿಕರ ಆಕ್ರೋಶ ಮುಗಿಲು ಮುಟ್ಟಿತ್ತು. ಕೊನೆಗೂ ಎಚ್ಚೆತ್ತು ಕೊಂಡ ಪುರಸಭೆ ಹದಗೆಟ್ಟ ರಸ್ತೆಗಳ ದುರಸ್ತಿಗೆ ಮುಂದಾಗಿತ್ತು. ಹೊಂಡ ಗುಂಡಿಯ ರಸ್ತೆಗಳು ಮುಚ್ಚಿಕೊಂಡು ಸಂಚಾರ ಸುಗಮವಾಗಿತ್ತು. ಆದರೆ ಬಳಿಕ ಮಳೆ ಧಾರಾಕಾರ ಸುರಿದ ಪರಿಣಾಮ ರಸ್ತೆಯ ಡಾಮರು ಕಿತ್ತು ಹೋಗಿದೆ.
ಈಗ ಮಳೆ ಕಡಿಮೆಯಾಗಿದೆ. ಆದರೆ, ಹೊಂಡ ಮುಚ್ಚುವ ಕೆಲಸ ಇನ್ನೂ ಶುರುವಾಗಿಲ್ಲ. ಇನ್ನು ದುರಸ್ತಿಗೆ ಎಷ್ಟು ಸಮಯ ಕಾಯಬೇಕು ಎನ್ನುವ ಪ್ರಶ್ನೆ ನಗರದ ವಾಹನ ಸವಾರದ್ದಾಗಿದೆ.
ಕಾರ್ಕಳ ನಗರದ ಪ್ರಮುಖ ರಸ್ತೆಗಳಷ್ಟೆ ಅಲ್ಲ ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳ ಹಲವೆಡೆಗಳ ಸಂಪರ್ಕ ರಸ್ತೆ ಗಳು ಹದಗೆಟ್ಟಿವೆ. ಈ ರಸ್ತೆಗಳಲ್ಲಿ ಸಂಚಾರ ಕೂಡ ತ್ರಾಸದಾಯಕವಾಗಿದೆ. ಈ ಬಗ್ಗೆಯೂ ವಾರ್ಡ್ಗಳಿಂದ ದೂರುಗಳು ಕೇಳಿ ಬರುತ್ತಿವೆ.
ಯಾವ್ಯಾವ ರಸ್ತೆಗಳಿಗೆ ಹಾನಿ?
ಕಾರ್ಕಳ ನಗರದಿಂದ ಉಡುಪಿ ಭಾಗಕ್ಕೆ ತೆರಳುವ ಹೆದ್ದಾರಿ ಶ್ರೀ ವೆಂಕಟರಮಣ ದೇವಸ್ಥಾನದಿಂದ ಸಾಲ್ಮರದ ವರೆಗೆ ಕಾಬೆಟ್ಟು ಭಾಗಕ್ಕೆ ತಿರುವಲ್ಲಿ ತನಕ ಅಲ್ಲಲ್ಲಿ ಡಾಮರು ಕಿತ್ತು ಹೋಗಿ ಗುಂಡಿಗಳು ಬಿದ್ದಿವೆ.
ತಾಲೂಕು ಕಚೇರಿ ಜಂಕ್ಷನ್ನಿಂದ ಉಡುಪಿ ಭಾಗಕ್ಕೆ ಸಂಚರಿಸುವ ರಸ್ತೆಯ ಬಂಗ್ಲೆಗುಡ್ಡೆ ಮುಖ್ಯ ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ.
ತಾಲೂಕು ಕಚೇರಿ ಮುಂಭಾಗದ ಅರಣ್ಯ ಇಲಾಖೆ ವಸತಿಗೃಹಗಳ ಪಕ್ಕದಲ್ಲೆ ಸರ್ವಜ್ಞವೃತ್ತದ ಕಡೆಗೆ ತೆರುವ ರಸ್ತೆಯೂ ಹಾನಿಗೊಳಗಾಗಿದೆ.
ನಗರದ ಮೂರು ಮಾರ್ಗದಿಂದ ಆನೆಕೆರೆ ಭಾಗಕ್ಕೆ ತೆರಳುವ ರಸ್ತೆಯ ಡಾಮರು ಕಿತ್ತು ಹೋಗಿದೆ.
ಅನಂತಶಯನದಿಂದ ರಾಘವೇಂದ್ರ ಮಠದ ಕಡೆಗೆ ಹಾದು ಹೋದ ರಸ್ತೆಯೂ ಹೊಂಡಮಯ.
ಮಾರುಕಟ್ಟೆ ಮಾರ್ಗವಾಗಿ ಕಲ್ಲೊಟ್ಟೆ ಸಂಪರ್ಕಿಸಿ ಬಂಡಿಮಠ ಸಂಪರ್ಕಿಸುವ ರಸ್ತೆಯೂ ಕೆಟ್ಟಿದೆ.
ರಸ್ತೆ ಕೆಟ್ಟರೆ ಎಲ್ಲರಿಗೂ ತೊಂದರೆ
ರಸ್ತೆಗಳು ಹದಗೆಟ್ಟಿರುವುದರಿಂದ ವಾಹನ ಸವಾರರಿಗೆ ಮಾತ್ರವಲ್ಲ, ಪಾದಚಾರಿಗಳಿಗೆ ಮತ್ತು ಅಂಗಡಿಗಳಿಗೂ ತೊಂದರೆಯಾಗಿದೆ.
ಪುರಸಭೆ ಸಹಿತ ಸರಕಾರಿ ಕಚೇರಿಗಳು ಇರುವ ರಸ್ತೆಗಳೂ ಹಾಳೆದ್ದು ಹೋಗಿವೆ. ಹೀಗಾಗಿ ಇಲ್ಲಿಗೆ ಬರುವ ಸಾವಿರಾರು ಮಂದಿಗೆ ಕಿರಿಕಿರಿಯಾಗುತ್ತಿದೆ.
ಮೂರು ಮಾರ್ಗದಿಂದ ಮಾರುಕಟ್ಟೆ ಸಂಪರ್ಕ ರಸ್ತೆ ಕಿರಿದಾಗಿದ್ದು, ಲಘು ವಾಹನಗಳು ಗುಂಡಿ ತಪ್ಪಿಸಿ ಓಡಾಡುವುದು, ನರೂ ಅವುಗಳಿಂದ ತಪ್ಪಿಸಿಕೊಳ್ಳಬೇಕಾದ ಪ್ರಮೇಯ ಬಂದಿದೆ.
ಹೊಸ ಅಧ್ಯಕ್ಷ, ಉಪಾಧ್ಯಕ್ಷರಿಗೆ ಎದುರಾದ ಮೊದಲ ಸವಾಲು
ಕಾರ್ಕಳ ಪುರಸಭೆಗೆ ನೂತನವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ರಸ್ತೆ ಸಮಸ್ಯೆ ನಿರ್ವಹಣೆಯೇ ಮೊದಲ ಸವಾಲಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟು ಸಾರ್ವನಿಕರ ಆಕ್ರೋಶಕ್ಕೆ ತುತ್ತಾಗುವ ಮುಂಚಿತವೇ ರಸ್ತೆ ಕಿತ್ತು ಹೋದ ಡಾಮರು ದುರಸ್ತಿಗೆ ಕ್ರಮ ವಹಿಸಬೇಕಾಗಿದೆ.
ಕ್ರಿಯಾಯೋನೆ ಸಿದ್ಧಪಡಿಸಿದ್ದೇವೆ
ನಗರ ಹದಗೆಟ್ಟ ರಸ್ತೆಗಳ ತುರ್ತು ದುರಸ್ತಿಗೆ ಕ್ರಿಯಾ ಯೋನೆ ಸಿದ್ಧಪಡಿಸಿದ್ದೇವೆ. ತಾತ್ಕಾಲಿಕವಾಗಿ ದುರಸ್ತಿಗೊಳಿಸಲಿದ್ದೇವೆ. ನಗರೊಳಗಿನ ರಸ್ತೆಗಳಷ್ಟೆ ಅಲ್ಲ 23 ವಾರ್ಡ್ಗಳಲ್ಲಿ ಹದಗೆಟ್ಟ ರಸ್ತೆಗಳನ್ನೂ ರಿಪೇರಿ ಮಾಡುತ್ತೇವೆ.
-ಯೋಗೀಶ್ ದೇವಾಡಿಗ, ಅಧ್ಯಕ್ಷರು, ಕಾರ್ಕಳ ಪುರಸಭೆ
-ಬಾಲಕೃಷ್ಣ ಭೀಮಗುಳಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.