Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
Team Udayavani, Sep 16, 2024, 5:01 PM IST
ಕುಳಗೇರಿ ಕ್ರಾಸ್: ರೈತರು ತಮ್ಮ ಜಮೀನಿನಲ್ಲಿ ಬೆಳೆದ ಉತ್ತಮ ಬೆಳೆಗಳಿಗೆ ಯಾರದೂ ದೃಷ್ಟಿ ಬಿಳಬಾರದೆಂದು ಬೆದರು ಗೊಂಬೆ ತಯಾರಿಸಿ ನಿಲ್ಲಿಸುತ್ತಾರೆ. ಮತ್ತೆ ಏನೆಲ್ಲ ಕಸರತ್ತು ನಡೆಸಿ ತಮ್ಮ ಬೆಳೆಗಳನ್ನ ರಕ್ಷಿಸುವ ಕೆಲಸ ಮಾಡುತ್ತಾರೆ. ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ಉತ್ತಮ ಬೆಳೆಗಳು ಒಣಗುತ್ತಿರುವುದನ್ನ(ಸಿಡಿರೋಗ) ಗಮನಿಸಿ ಮಮಟಗೇರಿ ರೈತನೊಬ್ಬ ತನ್ನ ಬೆಳೆಗೆ ಜನರ ದೃಷ್ಟಿ ಬಿಳಬಾರದೆಂದು ಸಿನಿ ತಾರೆಯರ ಭಾವಚಿತ್ರಗಳ ಕಟೌಟ್ ನಿಲ್ಲಿಸಿದ್ದಾರೆ.
ಮಮಟಗೇರಿ ಗ್ರಾಮದ ರೈತ ಮಹಾಂತೇಶ ತಿಮ್ಮನಾಯ್ಕರ್ ತಮ್ಮ ಎರಡು ಎಕರೆ ಜಮೀನಿನಲ್ಲಿ ಬದನೆಕಾಯಿ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳನ್ನ ಬೆಳೆದಿದ್ದಾರೆ.
ಉತ್ತಮ ಬೆಳೆಗೆ ಸಿಡಿರೋಗ ಬಂದು ನಾಟಿ ಮಾಡಿದ ಗಿಡಗಳು ಒಂದೊಂದಾಗಿ ಒಣಗುತ್ತಿದ್ದವಂತೆ. ತಮ್ಮ ಬೆಳೆಗೆ ಜನರ ದೃಷ್ಟಿ ಬಿಳ್ಳುತ್ತಿದೆ ಎಂದರಿತ ರೈತ ಮಹಾಂತೇಶ ಬೆಳೆಗಳ ಮಧ್ಯೆ ನಟಿಯರ ಫ್ಲೆಕ್ಸ್ ಪ್ರಯೋಗಿಸಿದ್ದಾರಂತೆ.
ಕನ್ನಡದ ಖ್ಯಾತ ಸಿನಿಮಾ ನಟಿಯರಾದ ಅಮೂಲ್ಯ ರಚಿತಾ ರಾಮ್ ಹಾಗೂ ರಾಧಿಕಾ ಪಂಡಿತ್ ಅವರ ಭಾವಚಿತ್ರಗಳನ್ನ ತಮ್ಮ ಜಮೀನಿನಲ್ಲಿ ನಿಲ್ಲಿಸಿದ್ದಾರೆ.
ಹೆದ್ದಾರಿ ಮೇಲೆ ಸಂಚರಿಸುವ ಜನ ಹೀಗೇಕೆ ಚಿತ್ರನಟಿಯರ ಭಾವಚಿತ್ರ ಅಂಟಿಸಿದ್ದಾರೆ ಎಂದು ಅಚ್ಚರಿಗೊಳ್ಳುತ್ತಿದ್ದಾರೆ. ಸ್ವಲ್ಪ ಹೊತ್ತು ನಿಂತು ಮುಂದೆ ಸಾಗುತ್ತಿದ್ದಾರೆ.
ಹುಬ್ಬಳ್ಳಿ – ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಜಮೀನು ಇರುವುದರಿಂದ ಮೇಲಿಂದಮೇಲೆ ಜನರ ದೃಷ್ಟಿ ಬೆಳೆಯ ಮೇಲೆ ಬಿಳ್ಳುತ್ತಿತ್ತು. ಈಗ ಜನರ ದೃಷ್ಟಿ ನೇರವಾಗಿ ಅಮೂಲ್ಯ, ರಾಧಿಕಾ, ರಚಿತಾ ರಾಮ್ ಅವರ ಚಿತ್ರದ ಕಡೆಗೆ ಹೋಗುತ್ತಿದ್ದು ನಮ್ಮ ಬೆಳೆಗೆ ರಕ್ಷಣೆ ಸಿಕ್ಕಂತಾಗಿದೆ. ಸದ್ಯ ಉತ್ತಮ ಲಾಭದ ಜೊತೆಗೆ ಇಳುವರಿ ಸಹ ಕೊಡುತ್ತಿದೆ ಎನ್ನುತ್ತಾರೆ ರೈತ ಮಹಾಂತೇಶ.
ರೈತರು ತಮ್ಮ ಬೆಳೆ ರಕ್ಷಣೆಗಾಗಿ ಬೇರೆ ಬೇರೆ ಪ್ರಯೋಗ ಮಾಡಿ ತಮ್ಮ ಬೆಳೆಗಳನ್ನ ರಕ್ಷಿಸಿದರೆ. ಇತ್ತ ಮಮಟಗೇರಿ ಗ್ರಾಮದ ಮಹಾಂತೇಶ ಸಿನಿಮಾ ತಾರೆಯರಿಗೆ ಮೊರೆ ಹೋಗಿದ್ದು ನಿಜಕ್ಕೂ ಅಚ್ಚರಿ ತರುವಂತಹದ್ದು.
-ಮಹಾಂತಯ್ಯ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ… ರಾತ್ರಿಯಿಡಿ ಸಾಗುವ ರಥೋತ್ಸವ
Pak flag ಹಾರಾಡುವ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ
Mudhol: ಆರ್ಎಸ್ಎಸ್ನಿಂದ ದೇಶಕ್ಕೆ ಕಂಟಕ: ಆರ್.ಬಿ.ತಿಮ್ಮಾಪುರ
Bagalkote: ಆನ್ಲೈನ್ ಮಾಯಾಜಾಲ; ಹಣ ಮಂಗಮಾಯ; ವಾರದಲ್ಲಿ ಮೂವರಿಗೆ 93 ಲಕ್ಷ ರೂ.ವಂಚನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.