B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ
ಕೆಲವು ಮುಸ್ಲಿಂ ಗುಂಡಾಗಳು ಸಂಘರ್ಷವನ್ನುಂಟು ಮಾಡುತ್ತಿದ್ದಾರೆ...
Team Udayavani, Sep 16, 2024, 5:31 PM IST
ಹುಬ್ಬಳ್ಳಿ: ”ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದು, ಮುಸ್ಲಿಂ ಸರ್ಕಾರ ಬಂದಿರುವ ಮನೋಭಾವದಿಂದ ಕೆಲವು ಮುಸ್ಲಿಂ ಗುಂಡಾಗಳು ಸಂಘರ್ಷವನ್ನುಂಟು ಮಾಡುವ ಹೇಳಿಕೆ ನೀಡುತ್ತಿದ್ದು, ಅವರನ್ನು ತತ್ ಕ್ಷಣ ಒದ್ದು ಒಳಗೆ ಹಾಕಬೇಕು” ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ತಾಕತ್ತು ಇದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಗೆ ಬನ್ನಿ ಎಂದು ಅಲ್ಲಿಯ ಮುಸ್ಲಿಂ ಸಂಘಟನೆಯವರು ಸವಾಲು ಹಾಕಿದ್ದಾರೆ. ಬಿ.ಸಿ. ರೋಡ್ ಏನು ಅಫ್ಘಾನಿಸ್ಥಾನ ಇಲ್ಲ ಪಾಕಿಸ್ಥಾನದಲ್ಲಿ ಇದೆಯಾ? ದೇಶ ನಮ್ಮದಿದೆ. ಇಂತಹ ಹೇಳಿಕೆ ನೀಡಿ ಸಂಘರ್ಷಕ್ಕೆ ಕರೆಯುತ್ತಿರುವುದು ಸರಿಯಲ್ಲ. ಅವರನ್ನು ಸರ್ಕಾರ ಜೈಲಿಗೆ ಹಾಕಬೇಕಿತ್ತು. ಇಂತಹ ಪರಿಸ್ಥಿತಿಗೆ ಕಾಂಗ್ರೆಸ್ ಮನಸ್ಥಿತಿ ಕಾರಣ ಎಂದು ಕಿಡಿಕಾರಿದರು.
ಇದನ್ನೂ ಓದಿ: Bantwala: ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ ಶರೀಫ್… ಬಂಟ್ವಾಳದಲ್ಲಿ ಬಿಗುವಿನ ವಾತಾವರಣ
ಬಿ.ಸಿ. ರೋಡ್ ಅಲ್ಲ. ಶ್ರೀನಗರದಲ್ಲಿ ಪಾಕಿಸ್ಥಾನದ ಧ್ವಜ ತೆರವುಗೊಳಿಸಿ, ದೇಶದ ತ್ರಿವರ್ಣ ಧ್ವಜ ಹಾರಿಸಿದ ವೀರ ಸುಪುತ್ರರು ನಾವು. ಬಿ.ಸಿ. ರೋಡ್ ಅಷ್ಟೇ ಅಲ್ಲ ನಿಮ್ಮ ಮನೆಯೊಳಗೆ ಬರುತ್ತೇವೆ. ಈ ರೀತಿ ದರ್ಪ, ಅಹಂಕಾರ ಇನ್ನು ಮುಂದೆ ನಡೆವುದಿಲ್ಲ. ಕಾಂಗ್ರೆಸ್ ಸರ್ಕಾರ ಇದೇ ಎಂಬ ಕಾರಣಕ್ಕೆ ಏನು ಬೇಕಾದ ಹೇಳುವುದು, ಮಾಡುವುದು ನಡೆಯುವುದಿಲ್ಲ. ಹಿಂದೂಗಳು ಜೀವಂತವಾಗಿದ್ದು, ಸರಿಯಾಗಿ ಉತ್ತರ ಕೊಡುತ್ತೇವೆ ಎಂದು ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.