MODI ಇಂದು 75ನೇ ವಸಂತಕ್ಕೆ ಕಾಲಿಟ್ಟ ಮೋದಿ: ಎಲ್ಲೆಡೆ ಹುಟ್ಟುಹಬ್ಬ ಆಚರಣೆ
ರಕ್ತದಾನ, ದಾಸೋಹ: ಪ್ರಧಾನಿ ಮೋದಿ ಜನ್ಮದಿನಕ್ಕೆ ಎಲ್ಲೆಡೆ ಸಂಭ್ರಮ
Team Udayavani, Sep 17, 2024, 6:58 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 75ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಆಟೋ ಪ್ರಯಾಣ ಉಚಿತ
ಪ್ರಧಾನಿ ತವರೂರು ಗುಜರಾತ್ನ ಸೂರತ್ನಲ್ಲಿ ಆಟೋ ರಿಕ್ಷಾ ಚಾಲಕರು ಪ್ರಯಾಣ ದರದಲ್ಲಿ ಶೇ.10 ರಿಂದ ಶೇ.100ರ ವರೆಗೆ ರಿಯಾಯಿತಿ ಘೋಷಿಸಿದ್ದಾರೆ. ಆ.16ರಂದು ಸೂರತ್ನ ಆಟೋ ಚಾಲಕರ ಸಂಘವು ಪ್ರಯಾಣಿಕರಿಗೆ ಉಚಿತ ಪ್ರಯಾಣ ಒದಗಿಸಿದೆ.
ಉದ್ಯಮಿಗಳಿಂದ ರಿಯಾಯಿತಿ
ಸೂರತ್ನ ವಿವಿಧ ಕ್ಷೇತ್ರಗಳ 2,500ಕ್ಕೂ ಅಧಿಕ ಉದ್ಯಮಿಗಳು ಗ್ರಾಹಕರಿಗೆ ರಿಯಾಯಿತಿ ನೀಡುವ ಮೂಲಕ ಮೋದಿ ಅವರಿಗೆ ಗೌರವ ತೋರಲು ಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಟೇಲ್, ತರಕಾರಿ ಮಾರುಕಟ್ಟೆ, ಖಾಸಗಿ ಆಸ್ಪತ್ರೆ, ಬೇಕರಿಗಳು ಸೇರಿ ಹಲವು ಕ್ಷೇತ್ರಗಳಲ್ಲಿ ಗ್ರಾಹಕರು ಖರೀದಿಸುವ ವಸ್ತು, ತಿನಿಸುಗಳಿಗೆ ರಿಯಾಯಿತಿ ಸಿಗಲಿದೆ.
ಅಜ್ಮೇರ್ ದರ್ಗಾದಲ್ಲಿ ಸಸ್ಯಾಹಾರ
ಅಜ್ಮೇರ್ ಶರೀಫ್ ದರ್ಗಾದಲ್ಲಿ 4 ಕೆ.ಜಿ. ಸಸ್ಯಾಹಾರವನ್ನು ತಯಾರಿಸಿ ಬಡವರು, ನಿರ್ಗತಿಕರು, ನಿರಾಶ್ರಿತರಿಗೆ ವಿತರಿಸಲು ಯೋಜಿಸಲಾಗಿದೆ.
ರಕ್ತದಾನ ಶಿಬಿರ
ಚಂಡೀಗಢದ ಕಿಸಾನ್ ಭವನದ ಸೆಕ್ಟರ್ 22-ಡಿ ಮತ್ತು ಸೆಕ್ಟರ್ 24-ಸಿನಲ್ಲಿ ಬಿಜೆಪಿ ಮೆಡಿಕಲ್ ಸೆಲ್ ವತಿಯಿಂದ ರಕ್ತದಾನ ಶಿಬಿರಗಳನ್ನು ಆಯೋಜಿ ಸಲಾಗಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರ ವರೆಗೆ ಶಿಬಿರ ನಡೆಯಲಿದೆ.
800 ಕೆ.ಜಿ. ಸಿರಿ ಧಾನ್ಯದಿಂದ ಪ್ರಧಾನಿ ಮೋದಿ ಕಲಾಕೃತಿ
ಮೋದಿ ಹುಟ್ಟುಹಬ್ಬದ ಪ್ರಯುಕ್ತ 13 ವರ್ಷದ ಚೆನ್ನೈನ ಬಾಲಕಿ 800ಕೆ.ಜಿ. ಸಿರಿಧಾನ್ಯಗಳನ್ನು ಬಳಸಿ ಮೋದಿ ಭಾವಚಿತ್ರ ಮೂಡಿಸಿದ್ದು, ಈ ಮೂಲಕ ವಿಶ್ವದ ಅತೀದೊಡ್ಡ ಸಿರಿಧಾನ್ಯ ಕಲಾಕೃತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಚೆನ್ನೈಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿ ಪ್ರಸ್ಲಿ ಶೆಕೀನಾ ಸತತ 12 ಗಂಟೆಗಳ ಪರಿಶ್ರಮದೊಂದಿಗೆ 600 ಚ.ಅ. ಸ್ಥಳದಲ್ಲಿ ಮೋದಿ ಕಲಾಕೃತಿ ರಚಿಸಿದರು. ಈ ಮೂಲಕ ವಿದ್ಯಾರ್ಥಿ ಸಾಧಕ ವಿಭಾಗದಲ್ಲಿ ಯೂನಿಕೋ ವಿಶ್ವ ದಾಖಲೆ ಸ್ಥಾಪಿಸಿದರು.
ಸೇವಾ ಪರಮೋಧರ್ಮ
ರಾಜಸ್ಥಾನದ ಬಿಜೆಪಿ ಘಟಕವು ಸೇವಾ ಪರಮೋ ಧರ್ಮ ಎಂಬ ಧ್ಯೇಯದಲ್ಲಿ ಸೆ.17ರಿಂದ ಅ.2ರವರೆಗೆ ಸೇವಾ ಪಕ್ವಾಡಾ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಇದರ ಅನ್ವಯ ದಿನಂಪ್ರತಿ ರಕ್ತದಾನ ಶಿಬಿರ, ಸ್ವಚ್ಚತಾ ಅಭಿಯಾನ, ಸಸಿ ನೆಡುವ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ನಡೆಸುವುದಾಗಿ ಹೇಳಿದೆ.
ಒಡಿಶಾಗೆ ಮೋದಿ: ಇಂದು ಸುಭದ್ರಾ ಯೋಜನೆಗೆ ಚಾಲನೆ
ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನದಂದೇ ಒಡಿಶಾದ ಮಹಿಳೆಯರಿಗೆ “ಸುಭದ್ರಾ ಯೋಜನೆ’ಯ ಫಲ ದೊರೆಯಲಿದೆ. ರಾಜ್ಯದ ಮಹಿಳೆಯರಿಗೆ 5 ವರ್ಷದಲ್ಲಿ 50,000ರೂ. ನೀಡಲು ಉದ್ದೇಶಿಸಿರುವ ಬಿಜೆಪಿ ಸರಕಾರದ “ಸುಭದ್ರಾ ಯೋಜನೆ’ಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಯೋಜನೆಯ ಮೊದಲ ಕಂತಿನ ಭಾಗವಾಗಿ ರಾಜ್ಯದ 1.30 ಕೋಟಿ ಮಹಿಳೆಯರಿಗೆ ತಲಾ 5,000ರೂ. ಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಒಡಿಶಾದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕಂತುಗಳಂತೆ ಒಟ್ಟು 5 ವರ್ಷದಲ್ಲಿ 10 ಕಂತಿನಲ್ಲಿ ರಾಜ್ಯದ ಮಹಿಳೆಯರಿಗೆ 50,000 ರೂ.ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.