Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು
Team Udayavani, Sep 17, 2024, 2:02 AM IST
ದುಬಾೖ: ಐಸಿಸಿ ವರ್ಷದ ತಿಂಗಳ ಪ್ರಶಸ್ತಿಗಳೆರಡೂ ಈ ಬಾರಿ ಶ್ರೀಲಂಕಾ ಪಾಲಾಗಿದೆ. ದುನಿತ್ ವೆಲ್ಲಲಗೆ ಮತ್ತು ಹರ್ಷಿತಾ ಸಮರವಿಕ್ರಮ ಅವರು ಆಗಸ್ಟ್ ತಿಂಗಳ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ತಿಂಗಳ ಕ್ರಿಕೆಟಿಗರ ಪ್ರಶಸ್ತಿ ಇತಿಹಾಸದಲ್ಲಿ ಒಂದೇ ದೇಶದ ಕ್ರಿಕೆಟಿಗರು ಆಯ್ಕೆಯಾದ ಕೇವಲ 2ನೇ ನಿದರ್ಶನ ಇದಾಗಿದೆ. ಅದೂ ಒಂದೇ ವರ್ಷದಲ್ಲಿ. ಕಳೆದ ಜೂನ್ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಸ್ಮತಿ ಮಂಧನಾ ಈ ಗೌರವಕ್ಕೆ ಪಾತ್ರರಾಗಿದ್ದರು.
ದುನಿತ್ ವೆಲ್ಲಲಗೆ ಪ್ರವಾಸಿ ಭಾರತದೆ ದುರಿನ ತವರಿನ ಏಕದಿನ ಸರಣಿಯಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. 2 ಪಂದ್ಯಗಳಲ್ಲಿ ಅಜೇಯ 67 ಮತ್ತು 39 ರನ್ ಜತೆಗೆ 7 ವಿಕೆಟ್ ಕೂಡ ಹಾರಿಸಿದ್ದರು. ಅಂತಿಮ ಪಂದ್ಯದಲ್ಲಿ 27ಕ್ಕೆ 5 ವಿಕೆಟ್ ಉರುಳಿಸಿದ ಸಾಧನೆ ಇವರದಾಗಿತ್ತು. ಪ್ರಶಸ್ತಿ ರೇಸ್ನಲ್ಲಿದ್ದ ಉಳಿದವರೆಂದರೆ ಕೇಶವ್ ಮಹಾರಾಜ್ ಮತ್ತು ಜೇಡನ್ ಸೀಲ್ಸ್.
ಇದರೊಂದಿಗೆ ಪುರುಷರ ವಿಭಾಗ ದಲ್ಲಿ ಶ್ರೀಲಂಕಾದ ಐವರು ಈ ಪ್ರಶಸ್ತಿಗೆ ಭಾಜನರಾದಂತಾಯಿತು. ಉಳಿದವ ರೆಂದರೆ ಏಂಜೆಲೊ ಮ್ಯಾಥ್ಯೂಸ್, ಪ್ರಭಾತ್ ಜಯಸೂರ್ಯ, ವನಿಂದು ಹಸರಂಗ ಮತ್ತು ಕಮಿಂಡು ಮೆಂಡಿಸ್.
ಹರ್ಷಿತಾ ಸಮರವಿಕ್ರಮ ಅವರು ಐರ್ಲೆಂಡ್ ಪ್ರವಾಸದ ವೇಳೆ ಆಡಲಾದ 2 ಟಿ20 ಪಂದ್ಯಗಳಲ್ಲಿ 151 ರನ್, 3 ಏಕದಿನ ಪಂದ್ಯಗಳಲ್ಲಿ 172 ರನ್ ಹೊಡೆದಿದ್ದರು. ದ್ವಿತೀಯ ಏಕದಿನ ಪಂದ್ಯದಲ್ಲಿ 105 ರನ್ ಬಾರಿಸಿದ ಸಾಧನೆ ಇವರದಾಗಿತ್ತು.
ಹರ್ಷಿತಾ ಐಸಿಸಿ ತಿಂಗಳ ಪ್ರಶಸ್ತಿಗೆ ಪಾತ್ರರಾದ ಲಂಕೆಯ ಕೇವಲ 2ನೇ ಆಟಗಾರ್ತಿ. ಚಾಮರಿ ಅತಪಟ್ಟು ಮೊದಲಿಗರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.