Mannagudda: ಹುಲ್ಲು ಬೆಳೆದು ಮುಚ್ಚಿದ ದಾರಿ; ಉದ್ದಕ್ಕೂ ವಾಹನ ಪಾರ್ಕಿಂಗ್
ಜನ, ವಾಹನ ಸಂಚಾರಕ್ಕೆ ಅಯೋಗ್ಯವಾದ ಸ್ಕ್ಯಾವೆಂಜರ್ ಲೇನ್
Team Udayavani, Sep 17, 2024, 2:07 PM IST
ಮಣ್ಣಗುಡ್ಡೆ: ಲೇಡಿಹೀಲ್ ಕಡೆಯಿಂದ ಮಣ್ಣಗುಡ್ಡೆ ಕಡೆಗೆ ಹೋಗುವಲ್ಲಿ ಇರುವ ಸ್ಕ್ಯಾವೆಂಜರ್ ಲೇನ್ ಹೆಸರಿನ ಒಳರಸ್ತೆ ಪಾದಚಾರಿಗಳು, ವಾಹನಗಳ ಸಂಚಾರಕ್ಕೆ ಸಿಗುತ್ತಿಲ್ಲ. ಒಂದೆಡೆ ದಟ್ಟ ಹುಲ್ಲು ಬೆಳೆದು ಈ ಹಾದಿ ಮುಚ್ಚಿದರೆ ಇನ್ನೊಂದೆಡೆ ಕಾರು ವಾಷಿಂಗ್ ಸೆಂಟರ್ವೊಂದರ ಕಾರುಗಳನ್ನು ಇಲ್ಲಿಯೇ ಪಾರ್ಕಿಂಗ್ ಮಾಡಲಾಗುತ್ತಿದೆ.
ಬ್ರಿಟಿಷರ ಕಾಲದಲ್ಲಿ ಸ್ವತ್ಛತಾ ಕಾರ್ಮಿಕರ ಓಡಾಟಕ್ಕೆಂದು ನಿರ್ಮಾಣಗೊಂಡಿದ್ದ ಈ ಕಾಲು ಹಾದಿ ಮಾದರಿಯ ರಸ್ತೆ ಪಾಳು ಬಿದ್ದಿತ್ತು. ತ್ಯಾಜ್ಯರಾಶಿ ಕೂಡ ಇಲ್ಲಿತ್ತು. ಕೆಲವು ವರ್ಷಗಳ ಹಿಂದೆ ಸ್ವತ್ಛಗೊಳಿಸಿ ಇಂಟರ್ಲಾಕ್ ಹಾಕಲಾಗಿತ್ತು. ಇದರಿಂದಾಗಿ ಸ್ಥಳೀಯ ಪಾದಚಾರಿಗಳು ಈ ರಸ್ತೆಯನ್ನು ಬಳಸುತ್ತಿದ್ದರು. ವಾಹನಗಳ ಸಂಚಾರಕ್ಕೂ ಬಳಕೆಯಾಗುತ್ತಿತ್ತು. ಜನರು, ವಾಹನಗಳ ಓಡಾಟ ಕಡಿಮೆ ಯಾಗಿದ್ದರೂ ತುರ್ತು ಸಂದರ್ಭಗಳಲ್ಲಿ ತುಂಬಾ ಪ್ರಯೋಜನಕಾರಿಯಾಗಿತ್ತು. ಆದರೆ ಕೆಲವು ತಿಂಗಳುಗಳಿಂದ ಈ ರಸ್ತೆಯಲ್ಲಿ ದಟ್ಟ ಹುಲ್ಲು ಬೆಳೆದು ನಿಂತಿದೆ. ಕೆಲವು ಗಿಡಗಳು ಕೂಡ ಬೆಳೆದು ಇಂಟರ್ಲಾಕ್ ಕಿತ್ತು ಹೋಗುವಂತಿದೆ. ಇದೇ ರಸ್ತೆಯ ಇನ್ನೊಂದು ಬದಿಯಲ್ಲಿ ಇರುವ ಕಾರ್ ವಾಷ್ ಸೆಂಟರ್ಗೆ ಬಂದಿರುವ ಕಾರುಗಳನ್ನು ಇಲ್ಲಿಯೇ ನಿಲ್ಲಿಸಿಡಲಾಗುತ್ತಿದ್ದು ಪಾದಚಾರಿಗಳು ನಡೆದಾಡುವುದಕ್ಕೂ ಸ್ಥಳವಿಲ್ಲದಂತಾ ಗಿದೆ. ಪಾಲಿಕೆಯಿಂದ ಹಣ ವ್ಯಯಿಸಿ ಸುವ್ಯವಸ್ಥಿತವಾಗಿ ನಿರ್ಮಾಣಗೊಂಡಿದ್ದ ಈ ಒಳರಸ್ತೆ ಈಗ ನಿರ್ಲಕ್ಷ್ಯಕ್ಕೊಳಪಟ್ಟು ದುಸ್ಥಿತಿಗೆ ತಲುಪಿದೆ. ಸಾರ್ವಜನಿಕರ ಉಪಯೋಗಕ್ಕೆ ಸಿಗದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
High Court: ಬಾಂಬ್ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್ ರದ್ದು
15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿನ್ ಸನಿಲ್ ಕುರ್ಕಾಲು
Commonwealth ಚಾಂಪಿಯನ್ಶಿಪ್ : ಅಲ್ಲುರಿ ಅಜಯ್ಗೆ ಬಂಗಾರ
High Court; “ಅರ್ಧ ಪಾಕಿಸ್ಥಾನ’: ಯತ್ನಾಳ್ ಹೇಳಿಕೆಗೆ ಹೈಕೋರ್ಟ್ ಸಿಟ್ಟು
China ಓಪನ್ ಬ್ಯಾಡ್ಮಿಂಟನ್:ಮಾಳವಿಕಾ ಕ್ವಾರ್ಟರ್ ಫೈನಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.