ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

2ನೇ ಮದುವೆಯಾಗದಿದ್ದರೆ ಆತನನ್ನು ಆ ಊರಿನಿಂದಲೇ ಹೊರಗೆ ಹಾಕುತ್ತಾರಂತೆ!

ಸುಧೀರ್, Sep 17, 2024, 5:46 PM IST

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

ಕಾನೂನಿನ ಪ್ರಕಾರ ಭಾರತದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವಂತಿಲ್ಲ, ಒಂದು ವೇಳೆ ಬೇರೆ ಮದುವೆ ಆಗುವುದಿದ್ದರೂ ಕಾನೂನಿನ ಮೂಲಕ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಆ ಬಳಿಕವೇ ಎರಡನೇ ಮದುವೆ ಆಗಲು ಸಾಧ್ಯ, ಆದರೆ ನಮ್ಮ ದೇಶದಲ್ಲಿರುವ ಈ ಒಂದು ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನೂ ಎರಡು ಮದುವೆ ಆಗಲೇಬೇಕಂತೆ ಇದಕ್ಕೆ ಯಾವುದೇ ಕಾನೂನಿನ ಅಡೆತಡೆಗಳೂ ಇಲ್ವಂತೆ, ಒಂದು ವೇಳೆ ಆತ ಎರಡನೇ ಮದುವೆಯಾಗದಿದ್ದರೆ ಆತನನ್ನು ಆ ಊರಿನಿಂದಲೇ ಹೊರಗೆ ಹಾಕುತ್ತಾರಂತೆ. ಈ ಸಂಪ್ರದಾಯ ಅನಾದಿಕಾಲದಿಂದಲೂ ಚಾಲ್ತಿಯಲ್ಲಿದ್ದು ಇಂದಿಗೂ ನಡೆದುಕೊಂಡು ಬಂದಿದೆಯಂತೆ. ಹಾಗಾದರೆ ಈ ಸಂಪ್ರದಾಯವನ್ನು ಪಾಲಿಸುವ ಊರು ಎಲ್ಲಿದೆ? ಯಾಕಾಗಿ ಅಲ್ಲಿಯ ಪುರುಷರು ಎರಡು ಮದುವೆಯಾಗುತ್ತಾರೆ ಇದರ ಹಿಂದಿರುವ ನಂಬಿಕೆ ಏನು ಎಂಬುದರ ಬಗ್ಗೆ ತಿಳಿದುಕೊಂಡು ಬರೋಣ.

ಎಲ್ಲಿದೆ ಊರು:
ಭಾರತ – ಪಾಕಿಸ್ತಾನ ಗಡಿಯ ಸಮೀಪದಲ್ಲಿರುವ ರಾಜಸ್ಥಾನದ ಬರ್ಮೇಧ್ ಜಿಲ್ಲೆಯಲ್ಲಿ ದೇರಸರ್ ಎಂಬ ಪುಟ್ಟ ಹಳ್ಳಿ ಇದೆ ಇದಕ್ಕೆ ರಾಮದೇವ್ ಕಿ ಬಸ್ತಿ ಎಂದೂ ಕೂಡ ಕರೆಯುತ್ತಾರೆ. ಈ ಹಳ್ಳಿ ಸುಮಾರು ಆರು ನೂರು ಮಂದಿಯನ್ನು ಹೊಂದಿದ 70 ಕುಟುಂಬಗಳು ವಾಸವಾಗಿದೆ. ಇಲ್ಲಿ ವಾಸಿಸುವ ಹಿರಿಯರು ಪ್ರತಿಯೊಬ್ಬರೂ ಎರಡೆರಡು ಮದುವೆಯಾಗಿದ್ದರಂತೆ. ಪ್ರತಿ ಕುಟುಂಬವೂ ಸಾಂಪ್ರದಾಯಿಕವಾಗಿ ಮದುವೆ ಮಾಡುವ ಮೂಲಕ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ ಇದರ ಹಿಂದೆ ವಿಶೇಷವಾದ ಕಾರಣವೂ ಇದೆಯಂತೆ.

ಸಹೋದರಿಯರಂತೆ ಬಾಳುತ್ತಾರೆ:
ರಾಮದೇವರ ಕಾಲೋನಿಯಲ್ಲಿರುವ ಪ್ರತಿಯೊಬ್ಬ ಪುರುಷನೂ ಎರಡು ಬಾರಿ ಮದುವೆಯಾಗಿರುತ್ತಾನೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಮದುವೆಯಾದ ಇಬ್ಬರೂ ಪತ್ನಿಯರು ಪರಸ್ಪರ ಸಹೋದರಿಯರಂತೆ ಅನ್ಯೋನ್ಯವಾಗಿ ಬಾಳುತ್ತಾರಂತೆ.

ಮದುವೆಯ ಹಿಂದಿನ ನಂಬಿಕೆ:
ಈ ಊರಿನಲ್ಲಿ ಪುರುಷರು ಎರಡು ಮದುವೆಯಾಗಲು ಕಾರಣವೂ ಇದೆ ಎಂದು ಈ ಊರಿನ ಜನ ಹೇಳುತ್ತಾರೆ ಅದೇನೆಂದರೆ ಮೊದಲು ಮದುವೆಯಾದ ಹೆಂಡತಿ ಗರ್ಭಿಣಿಯಾಗುವುದಿಲ್ಲ, ಸಂತಾನ ಭಾಗ್ಯ ಸಿಗಬೇಕಾದರೆ ಎರಡನೇ ಮದುವೆ ಆಗಬೇಕು ಎಂಬುದು ಇಲ್ಲಿನ ಜನರ ನಂಬಿಕೆ ಹಾಗಾಗಿ ಮೊದಲ ಮದುವೆಯಾದ ಕೆಲವೇ ಸಮಯದಲ್ಲಿ ಪುರುಷ ಎರಡನೇ ಮದುವೆಯಾಗುತ್ತಾನಂತೆ. ಇದಕ್ಕೆ ಇಂಬು ನೀಡುವಂತೆ ಹಿಂದೆ ಓರ್ವ ಪುರುಷನಿಗೆ ಮದುವೆ ಮಾಡಿ ಕೊಡಲಾಗಿತ್ತಂತೆ ಆದರೆ ಕೆಲ ವರ್ಷಗಳ ವರೆಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿಲ್ಲವಂತೆ ಇದಾದ ಬಳಿಕ ಕುಟುಂಬ ಸದಸ್ಯರು ಇನ್ನೊಂದು ಮದುವೆಯಾಗುವಂತೆ ಹೇಳಿದ್ದಾರೆ ಅದರಂತೆ ಪುರುಷ ಇನ್ನೊಂದು ಮದುವೆಯಾಗಿದ್ದಾನೆ ಇದಾದ ಬಳಿಕ ಕುಟುಂಬಕ್ಕೆ ಸಂತಾನ ಭಾಗ್ಯ ದೊರಕಿದೆ, ಅಂದಿನಿಂದ ಊರಿನ ಜನರಿಗೆ ಈ ನಂಬಿಕೆ ಬಂದಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಇಂತದ್ದೇ ಎರಡು ಸಂಗತಿಗಳು ಹಿಂದೆ ನಡೆದಿತ್ತಂತೆ ಹಾಗಾಗಿ ಅನಾದಿ ಕಾಲದಿಂದಲೂ ಈ ಊರಿನ ಜನ ಎರಡು ಮದುವೆಯಾದರೆ ‘ಮಂಗಳಕರ’ ಇದರಿಂದ ಕುಟುಂಬಕ್ಕೆ ಸಂತಾನ ಭಾಗ್ಯ ದೊರಕುತ್ತದೆ ಎಂಬುದು ಅವರ ನಂಬಿಕೆಯಾಗಿದೆ.

ಇದರ ಹಿಂದಿದೆ ಮತ್ತೊಂದು ಕಾರಣ:
ಎರಡು ಮದುವೆಯಾಗುವ ವಿಷಯದಲ್ಲಿ ಈ ಊರಿನ ಜನರು ನಂಬಿರುವ ನಂಬಿಕೆಯ ಹಿಂದೆ ಇನ್ನೊಂದು ಕಾರಣವೂ ಇದೆಯಂತೆ, ಅದೇನೆಂದರೆ ಈ ಊರಿನಲ್ಲಿ ಮೊದಲಿನಿಂದಲೂ ನೀರಿನ ಸಮಸ್ಯೆ ಇದೆಯಂತೆ ಅಲ್ಲದೆ ನೀರಿಗಾಗಿ ಇಲ್ಲಿಯ ಜನ ಸುಮಾರು ಐದರಿಂದ ಆರು ಕಿಲೋಮೀಟರ್ ದೂರದವರೆಗೆ ನಡೆದು ಹೋಗಬೇಕಿತ್ತಂತೆ, ಇಷ್ಟು ದೂರದಿಂದ ನೀರು ತರುವುದು ಗರ್ಭಿಣಿಯರಿಗೆ ಕಷ್ಟ ಸಾಧ್ಯ ಹಾಗಾಗಿ ಇದೇ ಕಾರಣಕ್ಕೆ ಪುರುಷರು ಮತ್ತೊಂದು ಮದುವೆಯಾಗುತ್ತಿದ್ದರು ಎಂದೂ ಕೂಡ ಹೇಳಲಾಗುತ್ತಿದೆ.

ಏನೇ ಆಗಲಿ ಜಗತ್ತು ಇಷ್ಟು ಮುಂದುವರೆದರೂ ಈ ಊರಿನ ಜನ ಮಾತ್ರ ಇಂದಿಗೂ ಅದೇ ನಂಬಿಕೆಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ.

– ಸುಧೀರ್ ಪರ್ಕಳ

ಟಾಪ್ ನ್ಯೂಸ್

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್‌ ಸ್ಟಾರ್‌

Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್‌ ಸ್ಟಾರ್‌

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

smi irani

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.