UV Fusion: ಸಾವನ್ನೂ ನೆಮ್ಮದಿಯಿಂದ ಸ್ವೀಕರಿಸುವಂತೆ ಬದುಕೋಣ…


Team Udayavani, Sep 17, 2024, 7:18 PM IST

17-uv-fusion

ನಮ್ಮ ಸಾವು ನಾವು ಸಂಭ್ರಮಿಸುವಂತೆ ಇರಲಿ. ಈ ಸಾಲುಗಳನ್ನು ಕೇಳಿದರೆ ಒಮ್ಮೆ ಆಶ್ಚರ್ಯವಾಗಬಹುದು. ಹೌದು… ನಮ್ಮ ಸಾವು ನಾವು ಸಂಭ್ರಮಿಸುವಂತೆ ಇರಬೇಕು. ಅದು ಹೇಗೆ ಸಾಧ್ಯವೆಂದರೆ ನಮ್ಮ ಸಾವಿನ ದಿನಗಳಲ್ಲಿ ನಾವು ನಡೆದು ಬಂದ ಹಾದಿ ನಮಗೆ ನೆಮ್ಮದಿಯ ನಿಟ್ಟುಸಿರಾಗಿರಬೇಕು.

ಬದುಕಿನ ಉದ್ದಗಲಕ್ಕೂ ಯಾರಿಗೂ ಮೋಸ ಮಾಡದೆ, ನ್ಯಾಯಯುತವಾಗಿ ಹಣ ಸಂಪಾದಿಸಿರಬೇಕು. ಬದುಕಿನಲ್ಲಿ ನಮಗೆ ಜನ್ಮವಿತ್ತ ತಂದೆ-ತಾಯಿಗಳಿಗೆ ಋಣಿಗಳಾಗಿದ್ದು, ಅವರ ಸೇವೆ ಮಾಡಿರಬೇಕು. ರಕ್ತ ಸಂಬಂಧಗಳನ್ನು ಹಣದಿಂದ ಅಳೆಯದೆ ಗುಣಗಳಿಗೆ ಅನುಸಾರ ಗೌರವಿಸಿ, ಸಮಯಕ್ಕೆ ಹೆಗಲಾಗಿ ಬದುಕಿರಬೇಕು. ನಾವು ದುಡಿದ ನೂರು ರೂಪಾಯಿಯಲ್ಲಿ ಒಂದು ರೂಪಾಯಿ ಆವಶ್ಯಕತೆ ಇರುವವರಿಗೆ ಸಹಾಯ ಹಸ್ತ ನೀಡಬೇಕು.

ಹೀಗೆ ಬದುಕಿನ ಪಯಣವನ್ನ ಸಾಗಿ ಬಂದ ನಮಗೆ ನಮ್ಮ ವಯೋಸಹಜ ಸಾವನ್ನು ಕೂಡ ಸಂಭ್ರಮಿಸಿ ದೇವರು ನೀಡಿದ ಈ ಮಣ್ಣಿನ ಋಣವನ್ನು ನೆನೆದು ನಿರ್ಗಮಿಸಬೇಕು. ಸಾವು ಕೂಡ ನಮ್ಮ ಬದುಕಿನ ಕಹಿ ಸತ್ಯ ಅಲ್ಲವೇ.   ನಾನು ಅಂದುಕೊಂಡದ್ದನ್ನು ಜೀವನದಲ್ಲಿ ಸಾಧಿಸಿದರೆ,  ನಮ್ಮ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಿದ್ದರೆ, ಜೀವನದಲ್ಲಿ ಎಲ್ಲವನ್ನೂ ಅನುಭವಿಸಲು ನನ್ನಿಂದ ಸಾಧ್ಯವಾಗಿದೆ, ಕಷ್ಟದಲ್ಲಿರುವವರಿಗೆ ನೆರವಾಗಿದ್ದೇನೆ..

ನಾನು ಸತ್ತರೂ ನನ್ನನ್ನು ನೆನೆಪಿಸಿಕೊಳ್ಳವಷ್ಟು ಹೃದಯಗಳನ್ನು ಸಂಪಾದಿಸಿದ್ದೇನೆ ಎಂದರೆ ಸಾವು ಕೂಡ ಸಂಭ್ರಮದಿಂದಲೇ ಸ್ವೀಕರಿಸಬಹುದು. ಯಾಕೆಂದರೆ ಸಾವು ಯಾರಿಗೂ ಹೊರತಾಗಿಲ್ಲ. ಆದರೆ ಬದುಕಿದ್ದಷ್ಟು ದಿನ ಹೇಗೆ ಬದುಕಿದ್ದೆವು ಎನ್ನುವುದು ಮಹ ತ್ವದ್ದು. ಬದುಕಿದ್ದಾಗಲೆಲ್ಲ ಇತತರಿಗೆ ಹೊರೆಯಾಗಿ, ನೋಯಿಸಿ, ಇನ್ನೊಬ್ಬರ ಹಣದಲ್ಲಿ ಬದುಕಿ ಕೊನೆ ದಿನಗಳಲ್ಲಿ ಅದಕ್ಕಾಗಿ ಪಶ್ಚಾತಾಪಪಟ್ಟರೆ ಮತ್ತೆ ಹಿಂದಿನ ದಿನಗಳು ಬರಲು ಸಾಧ್ಯವೇ ? ವಾಸ್ತವಿಕವಾಗಿ ನಮ್ಮ ಸಾವಿನಲ್ಲಿ ಅತ್ತವರೆಲ್ಲ ನಾವು ಬದುಕಿದ್ದಾಗ ನಮಗೆ ಹೆಗಲಾದವರಲ್ಲ. ಕೆಲವೊಮ್ಮೆ ನಮ್ಮ ಹೆಣ ಹೊರುವ ಭುಜಗಳು ಕೂಡ ನಮ್ಮ ಬದುಕಿನಲ್ಲಿ ಕಿಂಚಿತ್ತೂ ಬೆಸೆಯದೆ ಇರುವ ಜೀವಗಳಿರಬಹುದು. ನಾವು ಸತ್ತಾಗ ಹೊತ್ತು ಮುಳುಗುತ್ತಿದೆ ಬೇಗ ಮುಗಿಸಿ ಎನ್ನುವ ಮಾತುಗಳು ಸಹಜ.

ನಾವು ನಮ್ಮ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಸದೃಢ‌ವಾಗಿರುವಾಗಲೇ ನಮ್ಮ ಕುಟುಂಬದ ಹಿತದೃಷ್ಟಿಯಿಂದ ಅವರ ಮುಂದಿನ ದಿನಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು. ಒಮ್ಮೆ ಸೋತರು ಸರಿ, ತುಸು ಕಷ್ಟವಾದರೂ ಸರಿ, ಒಳ್ಳೆಯ ಮಾರ್ಗದಿಂದ ಹಣಗಳಿಸುವ ಮಾರ್ಗವನ್ನು ಕಂಡುಕೊಳ್ಳಬೇಕು.

ನಮ್ಮ ಬದುಕನ್ನು  ಯಾರಿಗೂ ಹೋಲಿಸಿಕೊಳ್ಳಬಾರದು. ನಮ್ಮ ಸೋಲು, ನಮ್ಮ ಆರ್ಥಿಕ ಪರಿಸ್ಥಿತಿ, ನಮ್ಮ ಬವಣೆಗಳನ್ನು ಇತರರಿಗೆ ಹೋಲಿಸಿಕೊಳ್ಳಬಾರದು. ವಿಶ್ವಗುರು ಬಸವಣ್ಣನವರು ಹೇಳಿರುವಂತೆ  ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.   ನಮ್ಮ ಸಾವು ನಾವು ಸಂಭ್ರಮಿಸುವಂತೆ ಇರಲಿ.

-ಮಂಜೇಶ್‌ ದೇವಗಳ್ಳಿ

ಮೈಸೂರು

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.