UV Fusion: ಬದುಕೆಂಬ ಪುಸ್ತಕದ ಪ್ರತಿ ಪುಟವೂ ಸುಂದರ


Team Udayavani, Sep 17, 2024, 9:50 PM IST

25-uv-fusion

ಬದುಕೊಂದು ಪುಸ್ತಕದಂತೆ. ಹಲವಾರು ವಿಷಯಗಳು ಗೊತ್ತಿವೆ ಅನ್ನಿಸುತ್ತದೆ ಮುಂದೆ ಓದಿದಂತೆ ಕೆಲವೊಮ್ಮೆ ಗೊಂದಲ, ಸಂತೋಷ, ದುಃಖ, ಉದ್ವೇಗಕ್ಕೆ ಒಳಗಾಗುತ್ತೆ ಕೊನೆ ಘಟ್ಟ ತಲುಪಿದಾಗ ನೆಮ್ಮದಿಯ ನಿಟ್ಟುಸಿರು. ಹೀಗೆ ಜೀವನ ದಲ್ಲಿ ಸಾಕಷ್ಟು ಗೊಂದಲ, ಉದ್ವೇಗ, ಸರಿ-ತಪ್ಪುಗಳು ಎಲ್ಲವನ್ನೂ ಕಾಣುತ್ತೇವೆ. ಹುಟ್ಟಿನಿಂದ ಸಾಯುವರೆಗೆ ಜೀವನದಲ್ಲಿ ಹಲವಾರು ಏಳುಬೀಳುಗಳೊಂದಿಗೆ ಎಲ್ಲವನ್ನೂ ಸಂಪಾದಿಸಿ ಮುಪ್ಪಿನಲ್ಲಿ ನೆಮ್ಮದಿಯಿಂದ ಇರುವಂತಿರಬೇಕು ನಮ್ಮ ಜೀವನ.

ಪುಸ್ತಕದ ಪುಟವೊಂದನ್ನು ಹರಿದಾಗ ಅದನ್ನು ಜೋಡಿಸಿ ಮತ್ತೆ ಓದಲಾರಂಭಿಸುತ್ತೇವೆ, ಕಾರಣ ಆ ಪುಸ್ತಕದ ಸೆಳೆತ. ಹಾಗೆಯೇ ಜೀವನದಲ್ಲಿ ಆಗುವ ಕೆಲವೊಂದು ಸಮಸ್ಯೆಗಳಿಗೆ ಕುಗ್ಗದೆ ಗುರಿಯ ಸೆಳೆತಕ್ಕೆ ಓಡುತ್ತಿರಬೇಕು. ಪುಸ್ತಕದ ಕಿವಿಗಳು ಮುಚ್ಚಿದಾಗ ಅದನ್ನ ಬಿಡಿಸಿ ಮತ್ತೆ ಸುಂದರರೂಪ ನೀಡುತ್ತೇವೆ ಹಾಗೆ ಜೀವನದಲ್ಲಿ ಪರರ ಮಾತುಗಳಿಗೆ ಕಿವಿಕೊಡದೆ ನಮ್ಮ ಜೇವನವನ್ನು ಸುಂದರವಾಗಿ ರೂಪುಗೊಳಿಸುವಲ್ಲಿ ಶ್ರಮಿಸಬೇಕು.

ನೆನಪಿರಲಿ, ಪ್ರತಿಯೊಂದು ಪುಸ್ತಕವೂ ನಮ್ಮನ್ನು ಸೆಳೆಯುವುದಿಲ್ಲ. ಯಾವ ಪುಸ್ತಕ ಓದಿದರೆ ಜ್ಞಾನ ಹೆಚ್ಚುತ್ತದೆಯೂ ಮತ್ತು ಮನಸ್ಸಿಗೆ ಮುದ ನೀಡುತ್ತದೆಯೋ ಅಂತಹ ಪುಸ್ತಕದ ಕಡೆಗೆ ಆಸಕ್ತಿ ಬೆಳೆಸುತ್ತೇವೆ. ಹಾಗೆ ಜೀವನದಲ್ಲಿ ಪರಿಚಯ ಆಗೋ ಅದೆಷ್ಟೋ ಜನರು ಬದುಕಿಗೊಂದು ಪಾಠ ಕಲಿಸಿ ಹೋಗುತ್ತಾರೆ. ಆದರೆ ನಾವು ಯಾರನ್ನು ಹಿಂಬಾಲಿಸುತ್ತೇವೆ, ಯಾರನ್ನು ಮಾರ್ಗದರ್ಶಕರಾಗಿ ಸ್ವೀಕರಿಸುತ್ತೇವೆಯೋ ಮುಂದೆ ಜೀವನದಲ್ಲಿ ನಾವು ಸಹ ಅವರಂತೆಯೇ ಆಗುತ್ತೇವೆ.

ಹಾಗಾಗಿ ಉತ್ತಮರ ಮಾರ್ಗದರ್ಶನದಿಂದ ನಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳೋಣ. ಪುಸ್ತಕ ಓದುವಾಗ ಪ್ರಸ್ತುತ ಪುಟದ ಕುರಿತು ಗೊತ್ತಿದೆಯೇ ವಿನಃ ಮುಂದಿನ ಪುಟದ ಬಗ್ಗೆ ತಿಳಿದಿರುವುದಿಲ್ಲ. ಹಾಗೆಯೇ ಭವಿಷ್ಯದ ಬಗ್ಗೆ ಚಿಂತಿಸದೆ ಈ ಕ್ಷಣವನ್ನು ಅನುಭವಿಸಿ, ಬದುಕು ಬಂದಂತೆ ಸ್ವೀಕರಿಸಿ. ಪುಸ್ತಕದ ಪುಟಗಳಂತೆ ನಮ್ಮೆಲ್ಲರ ಬದುಕಿನ ಪುಟವೂ ಸುಂದರವಾಗಿರಲಿ, ಪರಿಶುದ್ಧವಾಗಿರಲಿ.

-ಪ್ರಮೀಳ

ಮಂಗಳೂರು

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.