Bengaluru: ದೇಶದ ಸಿಲಿಕಾನ್ ವ್ಯಾಲಿ ಎಂಬ ಬೆಂಗಳೂರು ಪಟ್ಟಕ್ಕೇ ಕುತ್ತು?
ಹೊಸ ಸಿಲಿಕಾನ್ ವ್ಯಾಲಿ ನಗರಕ್ಕೆ ಕೇಂದ್ರ ಸರ್ಕಾರ ಚಿಂತನೆ
Team Udayavani, Sep 18, 2024, 6:30 AM IST
ನವದೆಹಲಿ: ಭಾರತದ ಸಿಲಿಕಾನ್ ವ್ಯಾಲಿ ಎಂಬ ಪಟ್ಟವನ್ನು ಬೆಂಗಳೂರು ಕಳೆದುಕೊಳ್ಳಲಿದೆಯೇ?
ಹೌದು, ಇಂಥದೊಂದು ಪ್ರಶ್ನೆ ಮೂಡಲು ಕಾರಣವಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಬೆಂಗಳೂರು ಹೊರತಾದ ಮತ್ತು ಸಂಪೂರ್ಣವಾಗಿ ಉದ್ಯಮಗಳು, ನವೋದ್ಯಮಗಳಿಗೆ ಮೀಸಲಾದ ಹೊಸ ನಗರ ನಿರ್ಮಾಣದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.
ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಅವರು, ನಾವು ಈಗ ನಮ್ಮದೇ ಆದ ಸಿಲಿಕಾನ್ ವ್ಯಾಲಿಯನ್ನು ಹೊಂದುವಂತಾಗಬೇಕು. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದು ನನಗೆ ತಿಳಿದಿದೆ. ಆದರೆ, ನಾವು ಆದರಾಚೆಗೂ ಯೋಚಿಸಬೇಕಿದೆ. ನಾವು ಎನ್ಐಸಿಡಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮತ್ತು ಉದ್ಯಮಿಗಳು, ನವೋದ್ಯಮಿಗಳು, ಅನ್ವೇಷಕರು, ಮತ್ತು ಕ್ರಾಂತಿಕಾರಕ ಬದಲಾವಣೆಗೆ ಸಾಮರ್ಥ್ಯವುಳ್ಳವರಿಗೆ ಮೀಸಲಾಗಿರುವ ಸಂಪೂರ್ಣ ಹೊಸ ನಗರವನ್ನು ರಚಿಸುವ ಬಗ್ಗೆ ಯೋಚಿಸುವ ಸಮಯ ಬಂದಿದೆ ಎಂದಿದ್ದಾರೆ.
ಹೊಸ ಸಿಲಿಕಾನ್ ವ್ಯಾಲಿಯನ್ನು ಸುಮಾರು 500 ಎಕರೆಯಲ್ಲಿ ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದ ಅವರು, ನವೋದ್ಯಮಗಳಿಗೆ ಸಂಬಂಧಿಸಿದಂತೆ ಸಮಗ್ರ ಉಪಕ್ರಮಗಳ ಸೃಷ್ಟಿಗಾಗಿ ಇನ್ವೆಸ್ಟ್ ಇಂಡಿಯಾ ರೀತಿಯಲ್ಲೇ ಲಾಭ ರಹಿತ ಸಂಸ್ಥೆಯನ್ನು ಹುಟ್ಟುಹಾಕಬಹುದು ಎಂದರು.
ಏನಿದು ಎನ್ಐಸಿಡಿಸಿ?
ಹೊಸ ಕೈಗಾರಿಕಾ ನಗರಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ (ಎನ್ಐಸಿಡಿಸಿ) ಹೊಂದಿದೆ.
ಪಿಯೂಷ್ ಗೋಯೆಲ್ ಹೇಳಿದ್ದೇನು?
– ಬೆಂಗಳೂರು ದೇಶದ ಸಿಲಿಕಾನ್ ವ್ಯಾಲಿ ಎಂದು ತಿಳಿದಿದೆ.
– ನಾವು ಬೆಂಗಳೂರು ಆಚೆಗೂ ಯೋಚಿಸುವ ಸಮಯ ಬಂದಿದೆ.
– ಭಾರತಕ್ಕೆ ಹೊಸ ಸಿಲಿಕಾನ್ ವ್ಯಾಲಿ ನಗರ ಅವಶ್ಯಕವಿದೆ
– ಸಂಪೂರ್ಣ ಸ್ಟಾರ್ಟ್ಅಪ್, ಉದ್ಯಮಗಳಿಗೆ ಮೀಸಲಿರಬೇಕು.
– ಎನ್ಐಸಿಡಿಸಿಯಿಂದಲೇ ಹೊಸ ಸಿಲಿಕಾನ್ ವ್ಯಾಲಿ ನಿರ್ಮಾಣ
– ಸ್ಟಾರ್ಟ್ಅಪ್ಗ್ಳಿಗೂ ಲಾಭ ರಹಿತ ಸಂಸ್ಥೆ ಸ್ಥಾಪನೆ ಅಗತ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ
PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ
Congress-NC ಮೈತ್ರಿಗೆ ಪಾಕ್ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.