Kundapura: ಖಾಸಗಿ ಬಸ್ಗಳ ಢಿಕ್ಕಿ: 7 ಮಂದಿಗೆ ಗಾಯ
ಗಾಯಾಳುಗಳನ್ನು ನಡುರಸ್ತೆಯಲ್ಲೇ ಬಿಟ್ಟು ಪರಾರಿಯಾದ ಬಸ್
Team Udayavani, Sep 18, 2024, 12:05 AM IST
ಕುಂದಾಪುರ: ಹೆಮ್ಮಾಡಿ ಗ್ರಾಮದ ಕಾಶಿ ಮಠದ ಹತ್ತಿರ ಸೋಮವಾರ ರಾತ್ರಿ ಖಾಸಗಿ ಬಸ್ಗಳೆರಡು ಢಿಕ್ಕಿಯಾಗಿ 7ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳು ಪ್ರಯಾಣಿಕರನ್ನು ಅಲ್ಲೇ ಇಳಿಸಿ ಬಸ್ ಅನ್ನು ಬೆಂಗಳೂರು ಕಡೆಗೆ ಕೊಂಡೊಯ್ದ ಚಾಲಕ ಅಮಾನವೀಯತೆ ಪ್ರದರ್ಶಿಸಿದ ಘಟನೆ ಇದಾಗಿದೆ.
ಅದೇ ಬಸ್ನಲ್ಲಿದ್ದ ಪ್ರಯಾಣಿಕ ಹೇರೂರು ಗ್ರಾಮದ ರಾಗಿಹಕ್ಲುವಿನ ಸುಧೀರ್ ದೂರು ನೀಡಿದ್ದಾರೆ. ಭಟ್ಕಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಚಾಲಕ ಲೋಕೇಶ್ ಬಸ್ಸನ್ನು ಪ್ರಯಾಣಿಕರನ್ನು ಹತ್ತಿಸಲು ಯಾವುದೇ ಸೂಚನೆ ನೀಡದೆ ಒಮ್ಮೆಲೆ ರಸ್ತೆಯಲ್ಲಿ ನಿಲ್ಲಿಸಿದಾಗ ಹಿಂದಿನಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಿರಣ್ ಚಲಾಯಿಸುತ್ತಿದ್ದ ಇನ್ನೊಂದು ಖಾಸಗಿ ಬಸ್ ಢಿಕ್ಕಿಯಾಗಿದೆ.
ಪರಿಣಾಮ ಬೆಂಗಳೂರು ಬಸ್ನಲ್ಲಿದ್ದ ಸುಧೀರ್, ರೇವತಿ, ಜಾನು ಹಾಗೂ ಇತರ ಪ್ರಯಾಣಿಕರಿಗೂ ಗಾಯವಾಗಿದೆ. ಹಿಂದಿನಿಂದ ಢಿಕ್ಕಿ ಹೊಡೆದ ಬಸ್ನಲ್ಲಿದ್ದ ಚಾಲಕ ಕಿರಣ, ಕಂಡಕ್ಟರ್ ರಾಜು, ಪ್ರಯಾಣಿಕರಾದ ಚೇತನಾ, ಪ್ರತ್ಯುಷಾ, ಲಾವಣ್ಯ ಸಿಂಗ್ ಹಾಗೂ ಇತರ ಪ್ರಯಾಣಿಕರಿಗೂ ಗಾಯಗಳಾಗಿದೆ.
ಎರಡೂ ಖಾಸಗಿ ಬಸ್ಗಳ ಚಾಲಕರು ಗಾಯಗೊಂಡ ಪ್ರಯಾಣಿಕರನ್ನು ರಸ್ತೆಯಲ್ಲೇ ಬಿಟ್ಟು ಬಸ್ಸಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರು ರಿಕ್ಷಾದಲ್ಲಿ ಚಿಕಿತ್ಸೆಗೆ ಕುಂದಾಪುರದ ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.