Rainy Season: ಮಳೆಗಾಲದೊಂದಿಗೆ ನೆನಪಿನ ಮೆಲಕು


Team Udayavani, Sep 18, 2024, 11:43 AM IST

4-uv-fusion

ಮಳೆಗಾಲವೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ತುಂಬಾನೇ ಕಷ್ಟ. ಮಳೆ ಬರುವಾಗ ಬೆಚ್ಚಗೆ ಮನೆಯಲ್ಲಿ ಕೂರುವ ಒಂದು ಬಗೆಯ ಖುಷಿಯೇ ಬೇರೆ. ಅದರೊಡನೆ ಕರಿದ ತಿಂಡಿ ತಿನ್ನಲು ಇನ್ನೂ ಒಂದು ರೀತಿಯ ಮಜಾ. ಒಲೆಯ ಮುಂದೆ ಕುಳಿತು ಕರಿದ ಹಪ್ಪಳವನ್ನು ತಿನ್ನುತ್ತಾ ಚಳಿಯನ್ನು ಕಾಯಿಸುತ್ತಾ ಕುಳಿತರೆ ಸಮಯ ಜಾರುವುದೇ ತಿಳಿಯುತ್ತಿರಲಿಲ್ಲ.

ಇನ್ನೇನು ಮಳೆಗಾಲ ಶುರುವಾಗಲು ತಿಂಗಳುಗಳು ಇದೆ ಎನ್ನುವಾಗಲೇ ಬೇಸಗೆಯಲ್ಲೆ ಎಲ್ಲೆಡೆಯಿಂದ ಹಲಸಿನಕಾಯಿಯನ್ನು ತಂದು ಹಪ್ಪಳ, ಸಂಡಿಗೆ, ಚಕ್ಕುಲಿಯನ್ನು ಮಾಡಲು ಸಿದ್ಧತೆಯನ್ನು ಮಾಡಿ ಬೇರೆ ಎಲ್ಲ ಕೆಲಸಗಳಿಗೆ ಬಿಡುವು ಕೊಟ್ಟು ಇದರ ತಯಾರಿಗೆ ಅತೀ ಶ್ರದ್ಧೆಯಿಂದ ಮಾಡಲು ಮನೆಯವರೆಲ್ಲ ಒಟ್ಟಾಗಿ ಸೇರಿ ಶುರು ಮಾಡುತ್ತೇವೆ. ಅದರೊಡನೆ ಮನೆಯಲ್ಲಿ ಮಕ್ಕಳು ಬೇಸಗೆ ರಜೆಯಲ್ಲಿರುವ ಹಾಗೆ ತಾವು ಕೈಜೋಡಿಸುತ್ತೇವೆ ಎಂದು ಬಂದು ಹಿರಿಯರಿಗೆ ಕೆಲಸವನ್ನು ದುಪಟ್ಟು ಮಾಡುವುದಂತೂ ನಿಜ.

ಹಾಗೆ ಕೈಜೋಡಿಸುತ್ತೇವೆ ಎಂದು ಬಂದು ಹಪ್ಪಳವನ್ನು ವಿಚಿತ್ರ ಆಕಾರಕ್ಕೆ ತಂದಿಟ್ಟುಬಿಡುತ್ತಿದ್ದರು. ತಾವೇ ಮಾಡಿದ ವಿಚಿತ್ರ ಆಕಾರದ ಹಪ್ಪಳವನ್ನು ಒಣಗಿಸುವಾಗ ಮಕ್ಕಳೆಲ್ಲ ತಮ್ಮ ತಮ್ಮಲ್ಲಿ ಬಿಗಿ ಕೊಳ್ಳುತ್ತಿದ್ದರು. ಒಂದಷ್ಟು ತಮಾಷೆ, ನಗು, ಬೈಗುಳದೊಡನೆ ಹಪ್ಪಳ ಸಂಡಿಗೆ ಆಗಿದ್ದೆ ತಿಳಿಯುತ್ತಿರಲಿಲ್ಲ. ಈ ದಿನವಂತು ಎಲ್ಲರಿಗೆ ಒಂದು ರೀತಿಯ ಹಬ್ಬದ ವಾತಾವರಣ ಇದ್ದಹಾಗೆ ಭಾಸವಾಗುತ್ತದೆ. ಹಾಗೂ ಸದ್ದು ಗದ್ದಲವಂತೂ ಇನ್ನೂ ಜೋರೇ!.. ದಿನನಿತ್ಯದ ಕೆಲಸಕ್ಕೆ ಒಂದು ವಿರಾಮವನ್ನು ನೀಡಿ ಮನೆಯವರೆಲ್ಲ ಒಟ್ಟಾಗಿ ಮಾಡುವ ಖುಷಿಯೇ ಬೇರೆ. ಅದರಲ್ಲೂ ಅಜ್ಜ, ಅಜ್ಜಿ ಇದ್ದರಂತೂ ಮುಗೀತು ಅವರು ತಮ್ಮ ಹಳೆಯ ನೆನಪುಗಳನ್ನು ಮೇಲುಕು ಹಾಕುತ್ತಾ ಅವರು ತಮ್ಮ ಬಾಲ್ಯದ ಕಥೆಯನ್ನು ಮಕ್ಕಳಿಗೆ ಹೇಳುತ್ತಾ ಖುಷಿಪಡುತ್ತಿದ್ದರು.

ನಾಲ್ಕು ದಿನಗಳ ಬಿಸಿಲಿನಲ್ಲಿ ಹಪ್ಪಳ ಸಂಡಿಗೆಯನ್ನು ಒಣಗಿದ ಅನಂತರ ಜೋಡಿಸುತ್ತಿರುವಾಗ ಮಕ್ಕಳೆಲ್ಲ ಬಾಯಲ್ಲಿ ನೀರೂರಿಸಿ ತಿನ್ನಲು ಕಾತುರತೆಯಿಂದ ಕಾಯುವಾಗ ತಿಳಿಯದಂತೆ ಹಿರಿಯರು ಹಪ್ಪಳವನ್ನು ತಿನ್ನಲು ಹವಣಿಸುತ್ತಿದ್ದರು. ಮಳೆ ಶುರುವಾದ ಮೇಲಂತೂ ಕರಿದ ತಿಂಡಿ ತಿನ್ನಬೇಕೆನಿಸಿದಾಗಲೆಲ್ಲ ಹಪ್ಪಳವನ್ನು ಕರಿದು ತಿನ್ನುವ ಮಜಾವೇ ಬೇರೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಖಾದ್ಯಗಳನ್ನು ಹಳ್ಳಿ ಎಲ್ಲೆಡೆ ಕೆಲವು ಭಾಗಗಳಲ್ಲಿ ಕಾಣಬಹುದು, ಎಲ್ಲವೂ ಕೈಗೆ ಅತ್ಯಂತ ಸುಲಭವಾಗಿ ಸಿದ್ಧವಾಗಿ ಅಂಗಡಿಯಲ್ಲಿ ಸಿಗುತ್ತದೆ ಎಂದು ಮನೆಯಲ್ಲಿ ಮಾಡುವುದನ್ನೇ ಬಹಳ ಕಡಿಮೆಯಾಗಿದೆ. ಎಲ್ಲರೂ ಒಂದಾಗಿ ಸೇರಿ ಈ ರೀತಿಯ ತಿನಿಸುಗಳನ್ನು ಮಾಡಿ ತಮ್ಮ ಭಾಂದವ್ಯವನ್ನು ಇನ್ನೂ ಗಟ್ಟಿಯಾಗಿಸಿಕೊಳ್ಳುತ್ತಿದ್ದರು ಹಾಗೂ ಸಣ್ಣ ಮಕ್ಕಳಿಗೆ ತಮ್ಮ ಸಂಪ್ರದಾಯವನ್ನು ಈ ಮೂಲಕ ತಿಳಿಸುತ್ತಿದ್ದರು ಆದರೆ ಎಲ್ಲೋ ಒಂದೆಡೆ ಈ ಎಲ್ಲಾ ಒಗ್ಗಟ್ಟುಗಳು ಕ್ಷೀಣಿಸಿ ಹೋಗಿದೆ. ಆದರೆ ಎಲ್ಲವೂ ಮೊದಲಿನಂತೆ ಪುನಃ ಕಾಣಸಿಗುವುದು ಅಸಾಧ್ಯವೇ ಹೌದು.

- ಸಮೃದ್ಧಿ ಹೆಗ್ಡೆ

ಎಸ್‌ಡಿಎಂ, ಉಜಿರೆ

ಟಾಪ್ ನ್ಯೂಸ್

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.