Hampankatta: ಪಲ್ಟಿಯಾದ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌!

ಮಂಗಳೂರಿನ ಹಂಪನಕಟ್ಟೆ ಹಳೆ ಬಸ್‌ ನಿಲ್ದಾಣದಲ್ಲಿ  ನಿರ್ಮಾಣವಾಗುತ್ತಿರುವ ವಾಣಿಜ್ಯ/ಪಾರ್ಕಿಂಗ್‌ ಕಟ್ಟಡಕ್ಕೆ ಬಾಲಗ್ರಹಪೀಡೆ ; ಕಾಲು ಶತಮಾನದ ಕನಸಿಗೆ 3 ವರ್ಷದ ಹಿಂದೆ ಜೀವ;  ಆದರೆ ಇಷ್ಟು ವರ್ಷದಲ್ಲಿ  ನಿರ್ಮಿಸಲು ಸಾಧ್ಯವಾಗಿದ್ದು ಹೊಂಡ ಮಾತ್ರ!

Team Udayavani, Sep 18, 2024, 3:00 PM IST

Hampankatta: ಪಲ್ಟಿಯಾದ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌!

ಹಂಪನಕಟ್ಟ: ‘ನಾನು ಇಲ್ಲಿ ಕೆಲಸಕ್ಕೆ ಸೇರಿ 23 ವರ್ಷವೇ ಕಳೆಯಿತು. ಆಗಿನಿಂದಲೇ, ಹಂಪನಕಟ್ಟ ಹಳೆ ಬಸ್‌ನಿಲ್ದಾಣದಲ್ಲಿ ಅದೇನೋ ಕಟ್ಟಡ ಬರುತ್ತದೆ ಅನ್ನುತ್ತಿದ್ದರು; ಬಳಿಕ ಪಾರ್ಕಿಂಗ್‌ ಕಟ್ಟಡ ಬರುತ್ತದೆ ಎನ್ನುತ್ತಿದ್ದರು. ಈಗ 23 ವರ್ಷ ಕಳೆದಿದ್ದರೂ ಇನ್ನೂ ಇಲ್ಲಿ ಏನೂ ಆಗಿಲ್ಲ; ಆಗಿದ್ದು ಮಾತ್ರ ಅಪಾಯಕಾರಿ ಹೊಂಡ ಮಾತ್ರ!’

ಮಂಗಳೂರಿನ ಹೃದಯಭಾಗ ಹಂಪನಕಟ್ಟದ ಬಹು ಪ್ರತಿಷ್ಠಿತ ಹಳೆ ಬಸ್‌ ನಿಲ್ದಾಣದ ಜಾಗದಲ್ಲಿ ‘ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌’ ಯೋಜನೆ ಮಾಡುವ ಬಗ್ಗೆ 10-20 ವರ್ಷದ ಹಿಂದಿನ ಕನಸನ್ನು ಇನ್ನೂ ಈಡೇರಿಸಲು ಸಾಧ್ಯವಾಗದ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಅಲ್ಲೇ ಪಕ್ಕದಲ್ಲಿ ವೃತ್ತಿನಿರತರಾಗಿರುವ ವ್ಯಕ್ತಿಯೊಬ್ಬರು ವಿವರಿಸಿದ್ದು ಹೀಗೆ.

ಅವರೇ ಹೇಳುವ ಪ್ರಕಾರ ’20 ವರ್ಷದಿಂದ ಇಲ್ಲಿ ಅದು ಮಾಡುತ್ತೇವೆ-ಇದು ಮಾಡುತ್ತೇವೆ ಎಂದೆಲ್ಲ ಹೇಳಿ ಭೂಮಿ ಪೂಜೆ ಮಾಡಿ ಈಗ ಹೊಂಡ ಮಾಡಿ 3-4 ವರ್ಷ ಆದರೂ ಇನ್ನೂ ಇಲ್ಲಿ ಏನೇನೂ ಆಗಿಲ್ಲ ಎಂದರೆ ಇದನ್ನು ಕೇಳುವವರೇ ಇಲ್ಲವೇ? ಅಥವಾ ಆಡಳಿತ ವ್ಯವಸ್ಥೆ ಇದನ್ನು ನೋಡಿಯೂ ನೋಡದಂತೆ ಮೌನವಾಗಿದೆಯೇ?’ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.

ಸದ್ಯ ವಿಸ್ತಾರವಾಗಿ ಬಾಯ್ದೆರೆದಿರುವ ಹೊಂಡಗಳ ಜಾಗವಾದ ಹಳೆಯ ಬಸ್‌ನಿಲ್ದಾಣವನ್ನು ಈಗ ಯಾರು ಕಂಡರೂ ಇಂತಹುದೇ ಪ್ರಶ್ನೆಯನ್ನು ಅವರೂ ಕೇಳುತ್ತಾರೆ. ಯಾಕೆಂದರೆ, ಇದು ಮುಗಿಯದ-ಮುಗಿಯಬಾರದು ಎಂಬಂತಿರುವ ಯೋಜನೆಯಾಗಿ ಬದಲಾಗಿದೆ!

ಇದರ ಕೂಗಳತೆ ದೂರದಲ್ಲಿ ‘ಸೆಂಟ್ರಲ್‌ ಮಾರುಕಟ್ಟೆ’ ಕಾಮಗಾರಿ ಬಹಳಷ್ಟು ವೇಗದಲ್ಲಿ ನಡೆಯುತ್ತಿದೆ. ಅದರ ಕೆಲಸ ಪ್ರಾರಂಭ ಆಗಿದ್ದು ಕಾರ್‌ ಪಾರ್ಕಿಂಗ್‌ ಕಾಮಗಾರಿ ಆರಂಭ ಮಾಡಿದ ಕಾಲದಲ್ಲಿ.

ಗುತ್ತಿಗೆದಾರರೇ ಹಣ ಹಾಕಿ ಕಟ್ಟಡ ನಿರ್ಮಿಸಿ ಬಳಿಕ ಪಾರ್ಕಿಂಗ್‌ ಶುಲ್ಕದ ಮೂಲಕ ಹಣ ವಾಪಾಸ್‌ ಪಡೆಯುವ ಈ ಯೋಜನೆಗೆ ಮೊದಲು ಯಾರೂ ಬಂದಿರಲಿಲ್ಲ. ಬಂದವರು ಕೆಲವು ಕೋಟಿ ರೂ. ಖರ್ಚು ಮಾಡಿ ಈಗ ಕಾಮಗಾರಿ ನಿಂತಿದೆ. ಮುಂದೆ ಅವರೇ ಮುಂದುವರಿಯುತ್ತಾರಾ? ಅಥವಾ ಬೇರೆಯವರಿಗೆ ಹಸ್ತಾಂತರಿಸಲಾಗುತ್ತದಾ? ಎಂಬ ಪ್ರಶ್ನೆ ಇದೆ. ಈಗ ಇರುವವರೇ ಮಾಡುವುದಾದರೆ ಇನ್ನೆಷ್ಟು ಕಾಲ? ಬದಲಾದರೆ ಇನ್ನೆಷ್ಟು ವರ್ಷ ಕಾಯಬೇಕು? ಎಂಬಿತ್ಯಾದಿ ಪ್ರಶ್ನೆಗೆ ಇಲ್ಲಿ ಉತ್ತರವೇ ಇಲ್ಲ.

ನಾನಾ ಅಡಚಣೆ, ಕಾಮಗಾರಿ ಸ್ಥಳದಲ್ಲಿ ಭೂ ಕುಸಿತ ಸಹಿತ ವಿವಿಧ ಕಾರಣಗಳಿಂದಾಗಿ ಇನ್ನೂ ಕೂಡ ತಳಪಾಯದ ಕಾಮಗಾರಿಯೇ ಇಲ್ಲಿ ಪೂರ್ಣವಾಗಿಲ್ಲ.

ಏನಿದು ಕಾರ್‌ ಪಾರ್ಕಿಂಗ್‌ ಯೋಜನೆ?
ಮಂಗಳೂರು ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ವಿಪರೀತವಾಗಿದೆ. ಹಂಪನಕಟ್ಟೆ ಪ್ರದೇಶದಲ್ಲಿ ಸರಿಯಾದ ಪಾರ್ಕಿಂಗ್‌ ಇಲ್ಲದೆ ಕಿ.ಮೀ.ಗಟ್ಟಲೆ ದೂರದಲ್ಲಿ ಕಾರು ನಿಲ್ಲಿಸಿ ಬರಬೇಕಾದ ಸ್ಥಿತಿ ಇದೆ. ಇದಕ್ಕೆ ಪರಿಹಾರ ಎಂಬಂತೆ ಹಂಪನಕಟ್ಟೆಯಲ್ಲಿ ಬಹು ಅಂತಸ್ತಿನ ಕಾರ್‌ ಪಾರ್ಕಿಂಗ್‌ ಮತ್ತು ವಾಣಿಜ್ಯ ಸಂಕೀರ್ಣ ಯೋಜನೆಯನ್ನು ರೂಪಿಸಲಾಗಿತ್ತು.

ಹಳೆ ಬಸ್‌ ನಿಲ್ದಾಣ ಸ್ಟೇಟ್‌ ಬ್ಯಾಂಕ್‌ಗೆ ಸ್ಥಳಾಂತರವಾದ ದಿನದಿಂದಲೇ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಹೆಸರು ಕೇಳಿಬಂದಿತ್ತು. ಅಂದರೆ ಸುಮಾರು 25 ವರ್ಷದ ಹಿಂದೆ.

1.50 ಎಕರೆ ಸರಕಾರಿ ಮತ್ತು ಉಳಿದ ಖಾಸಗಿ ಜಾಗ ಸೇರಿ ಅಂದಾಜು 2.10 ಎಕರೆ ಪ್ರದೇಶ ದಲ್ಲಿ ಬಹುಮಹಡಿ ವಾಣಿಜ್ಯ/ವಾಹನ ನಿಲುಗಡೆ ಕಾಂಪ್ಲೆಕ್ಸ್‌ ನಿರ್ಮಿಸುವ ಯೋಜನೆ ಇದು.

ಮಹಾನಗರ ಪಾಲಿಕೆಯೇ ಈ ಯೋಜನೆಯನ್ನು ಜಾರಿಗೊಳಿ ಸುವ ಬಗ್ಗೆ ಯೋಚಿಸಲಾಗಿತ್ತು. ಅದು ಕಾರ್ಯಗತವಾಗದ ಕಾರಣದಿಂದ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ವತಿಯಿಂದ ನಡೆಸುವ ಬಗ್ಗೆಯೂ ಚಿಂತಿಸಲಾಯಿತು. ಆದರೆ, ಅದೂ ಈಡೇರಲಿಲ್ಲ.

2021ರಲ್ಲಿ ಸ್ಮಾರ್ಟ್‌ ಸಿಟಿ ಯಿಂದ  ಯೋಜನೆಯನ್ನು ಕೈಗೆತ್ತಿ ಕೊಳ್ಳಲಾಗಿದೆ.  91 ಕೋಟಿ ರೂ. ವೆಚ್ಚದ ಯೋಜನೆಗೆ 2021ರ ನ.  2ರಂದು ಅಡಿಗಲ್ಲು ಹಾಕಲಾಗಿದೆ.

ಗುತ್ತಿಗೆದಾರರು ತಾವೇ ಹಣ ಹಾಕಿ ಕಟ್ಟಡ ನಿರ್ಮಿಸಿ, ಅದರಿಂದ ಬರುವ ಶುಲ್ಕ ಮತ್ತು ಬಾಡಿಗೆಯಿಂದ ತಮ್ಮ ಹಣವನ್ನು ವಾಪಸ್‌ ಪಡೆಯುವ (DBFOT) ಯೋಜನೆ ಇದಾಗಿದೆ.

ಮಂಗಳೂರಿನ ಹಂಪನಕಟ್ಟೆಯ ಹಳೆ ಬಸ್‌ ನಿಲ್ದಾಣವನ್ನು ತೆರವು ಮಾಡಿದ ಖಾಲಿ ಜಾಗದಲ್ಲಿ  ‘ಬಹುಮಹಡಿ ಕಾರು ಪಾರ್ಕಿಂಗ್‌’ ಬರಲಿದೆ ಎಂಬ ಸುದ್ದಿಗೆ ಹೆಚ್ಚು ಕಡಿಮೆ ರಜತ ವರ್ಷ. 2021ರಲ್ಲಿ ಕಾಮಗಾರಿಗೆ ಶಿಲಾನ್ಯಾಸ ನಡೆದರೂ ಅದಕ್ಕೆ ಹತ್ತಾರು ವಿಘ್ನ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಆರಂಭಗೊಂಡ ಕಾಮಗಾರಿಯಲ್ಲಿ ಇದುವರೆಗೆ ಸೃಷ್ಟಿಯಾಗಿದ್ದು ಬೃಹತ್‌ ಹೊಂಡ ಮಾತ್ರ. ಅಕ್ಷರಶಃ ಈ ಯೋಜನೆ ಹಳ್ಳಹಿಡಿದಿದೆ! ಅಂದರೆ ಕಾರ್‌ ಪಾರ್ಕಿಂಗ್‌ ಬದಲು ನೀರು ಪಾರ್ಕಿಂಗ್‌ ಆಗಿದೆ. ನಗರದ ಮಧ್ಯ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಯಾಕೆ ಈ ಅನಾದರ? ಯಾರು ಇದಕ್ಕೆ ಜವಾಬ್ದಾರರು? ಏನಾಗುತ್ತಿದೆ ಇಲ್ಲಿ ಎನ್ನುವುದನ್ನು ಉದಯವಾಣಿ ಸುದಿನ ಈ ವಿಶೇಷ ಸರಣಿಯಲ್ಲಿ ತೆರೆದಿಡಲಿದೆ.

ಕಾರ್‌ ಪಾರ್ಕಿಂಗ್‌ ಅಲ್ಲ, ನೀರ್‌ ಪಾರ್ಕಿಂಗ್‌!
ಮಲ್ಟಿ ಲೆವೆಲ್‌ ಪಾರ್ಕಿಂಗ್‌ ವಸ್ತುಶಃ ಹಳ್ಳ ಹಿಡಿದಿದೆ. ಮೂರು ವರ್ಷಗಳಿಂದ ನಡೆದ ಕಾಮಗಾರಿಯಲ್ಲಿ ಇದುವರೆಗೆ ಆಗಿರುವುದು ಹೊಂಡ ಮಾತ್ರ. ಪಂಚಾಂಗದ ಕಾಮಗಾರಿಯೂ ಪೂರ್ಣಗೊಂಡಿಲ್ಲ.

ಮಧ್ಯೆ ಬೃಹತ್‌ ಹೊಂಡ ಮಾಡಿ ರಕ್ಷಣೆಗಾಗಿ ತಗಡಿನ ಶೀಟ್‌ ಅನ್ನು ಬದಿಯಲ್ಲಿ ಕಟ್ಟಲಾಗಿದೆ. ಇದರ ಮಧ್ಯೆಯೂ ಕೆಲವರು ಹೊಂಡವನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಪ್ರೇಕ್ಷಣೀಯ ಸ್ಥಳವಾಗಿಯೂ ಇದು ಬದಲಾಗಿದೆ. ಇಲ್ಲಿ ಕೊಂಚ ಎಡವಿದರೂ ಕೆಳಗೆ ಬೀಳುವ ಅಪಾಯವಿದೆ.

ಇತ್ತೀಚೆಗೆ ಭಾರೀ ಮಳೆ ಸಂದರ್ಭ ಒಂದು ಭಾಗದಲ್ಲಿ ಕುಸಿತ ಉಂಟಾಗಿದೆ. ಸ್ವಲ್ಪ ಹೆಚ್ಚು ಕುಸಿದಿದ್ದರೆ ಪಕ್ಕದ ಕಟ್ಟಡಗಳಿಗೆ ಅಪಾಯವಿತ್ತು. ಸದ್ಯ ಮರಳಿನ ಚೀಲ ಅಳವಡಿಸಿ ತಾತ್ಕಾಲಿಕ ರಕ್ಷಣೆ ಮಾಡಲಾಗಿದೆ.

ಹೊಂಡದಲ್ಲಿ ಮಳೆ ನೀರು ತುಂಬಿ  ಸೊಳ್ಳೆ ಉತ್ಪತ್ತಿ ತಾಣವಾಗಿವೆ ಪಂಪ್‌ ಮೂಲಕ ಇಲ್ಲಿ ತುಂಬಿರುವ ನೀರನ್ನು ಖಾಲಿ ಮಾಡುತ್ತಿದ್ದರೂ, ಬಹುತೇಕ ಭಾಗದಲ್ಲಿ ನಿಂತ ನೀರು ಹಾಗೆಯೇ ಇದೆ.

ವರದಿ: ದಿನೇಶ್‌ ಇರಾ
ಚಿತ್ರ: ಸತೀಶ್‌ ಇರಾ

ಟಾಪ್ ನ್ಯೂಸ್

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-tWWW

Tupperware ಲಂಚ್‌ ಬಾಕ್ಸ್‌ ದಿವಾಳಿ: ಅಮೆರಿಕದ ಕಂಪೆನಿ ಘೋಷಣೆ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.