India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

ಕೆಲವು ಹೆಸರುಗಳೇ ಹಾಗೇ ಅದು ಯಾವುದೇ ಭಾಷೆಯದ್ದೇ ಆಗಿರಲಿ…

Team Udayavani, Sep 18, 2024, 4:20 PM IST

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

ಜಗತ್ತಿನ ಅತೀ ದೊಡ್ಡ ರೈಲ್ವೆ ನೆಟ್ವರ್ಕ್‌ ಹೊಂದಿರುವ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಜನರ ಜೀವನಾಡಿಯಾಗಿದೆ. ಇದರಲ್ಲಿ ಅತೀ ಹೆಚ್ಚು ರೈಲು ನಿಲ್ದಾಣ ಹೊಂದಿರುವುದು, ಭಯಾನಕ ರೈಲು ನಿಲ್ದಾಣಗಳು, ಕಿರಿದಾದ ರೈಲು ನಿಲ್ದಾಣಗಳು ಹೀಗೆ ನಾನಾ ರೀತಿಗಳಿವೆ. ಆದರೆ ನಿಮಗೆ ಹುಬ್ಬೇರಿಸುವಂತೆ ಮಾಡುವ, ತಮಾಷೆಯ ಕೆಲವು ರೈಲು ನಿಲ್ದಾಣಗಳ ಹೆಸರನ್ನು ನಿಮಗೆ ಪರಿಚಯಿಸುತ್ತೇವೆ…

ಕೆಲವು ಹೆಸರುಗಳೇ ಹಾಗೇ ಅದು ಯಾವುದೇ ಭಾಷೆಯದ್ದೇ ಆಗಿರಲಿ…ಅದು ಜನಸಾಮಾನ್ಯರಿಗೂ ಥಟ್ಟನೆ ಅರ್ಥವಾಗಿ ಬಿಡುತ್ತದೆ. ಜಾರ್ಖಂಡ್‌ ನ ಹಝಾರಿಬಾಗ್‌ ಜಿಲ್ಲೆಯಲ್ಲಿನ ರೈಲ್ವೆ ನಿಲ್ದಾಣದ ಹೆಸರು….ದಾರು (Daru) ನಿಲ್ದಾಣ! ಇಲ್ಲಿನ ಸ್ಥಳೀಯ ಗ್ರಾಮವೊಂದರ ಹೆಸರು ದಾರು…ಅದಕ್ಕಾಗಿ ಈ ನಿಲ್ದಾಣಕ್ಕೂ ಅದೇ ಹೆಸರು ಇಡಲಾಗಿದೆಯಂತೆ!

Bap Railway ಸ್ಟೇಷನ್:‌

ರಾಜಸ್ಥಾನದ ಜೋಧ್‌ ಪುರ್‌ ನಲ್ಲಿ “ಬಾಪ್‌” ಹೆಸರಿನ ರೈಲ್ವೆ ನಿಲ್ದಾಣವಿದೆ. ಹಿಂದಿಯಲ್ಲಿ ಬಾಪ್‌ ಅಂದರೆ ಅಪ್ಪ ಅಂತ ಅರ್ಥ. ಕುತೂಹಲದ ವಿಚಾರವೆಂದರೆ ಈ ನಿಲ್ದಾಣದ ಹೆಸರು ಬಾಪ್‌ ಅಂತ ಇದ್ದರೂ ಕೂಡಾ ಎಷ್ಟೋ ರೈಲುಗಳು ಇಲ್ಲಿ ನಿಲ್ಲಿಸುವುದು ಇಲ್ವಂತೆ!

Sali Railway ಸ್ಟೇಷನ್:‌

ಜೋಧ್‌ ಪುರ್‌ ನ ವಾಯುವ್ಯ ರೈಲ್ವೆಯ ವಲಯದ ಡುಡ್ಡು ಎಂಬಲ್ಲಿ “ಸಾಲಿ” (Sali) ಎಂಬ ಹೆಸರಿನ ರೈಲ್ವೆ ನಿಲ್ದಾಣವಿದೆ. ಹಿಂದಿಯಲ್ಲಿ ನಾದಿನಿ(ಪತ್ನಿಯ ತಂಗಿ)ಗೆ ಸಾಲಿ ಎಂದು ಕರೆಯುತ್ತಾರೆ. ಅದಕ್ಕೆ ಹೊಂದಿಕೆ ಎಂಬಂತೆ ಸಮೀಪದಲ್ಲೇ ಜೀಜಾ ಹೆಸರಿನ ರೈಲು ನಿಲ್ದಾಣವಿದೆ. ಜೀಜಾ(Jija) ಅಂದರೆ ಸಹೋದರಿಯ ಗಂಡ(ಭಾವ)! ಎಂಬುದಾಗಿದೆ.

ಸಿಂಗಾಪುರ್‌ ರೈಲ್ವೆ ನಿಲ್ದಾಣ:

ಈ ಸಿಂಗಾಪುರ್‌ ರೈಲ್ವೆ ನಿಲ್ದಾಣಕ್ಕೆ ತೆರಳಲು ಯಾವುದೇ ವೀಸಾದ ಅಗತ್ಯವಿಲ್ಲ. ಈ ನಿಲ್ದಾಣವೇನು ಜನಪ್ರಿಯ ನಗರದಲ್ಲಿ ಇಲ್ಲ. ಇದು ಒಡಿಶಾದ ರಾಯಗಢ್‌ ನಲ್ಲಿದೆ. ಇಲ್ಲಿನ ಸಿಂಗಾಪುರ್‌ ರೋಡ್‌ ರೈಲ್ವೆ ಜಂಕ್ಷನ್‌ ನಲ್ಲಿ ದೇಶದ ಹಲವು ಭಾಗಗಳನ್ನು ಸಂಪರ್ಕಿಸುವ ರೈಲ್ವೆ ಮಾರ್ಗ ಹೊಂದಿರುವುದಾಗಿ ವರದಿ ತಿಳಿಸಿದೆ.

ದಿವಾನ(Diwana):

ಹರ್ಯಾಣದ ಪಾಣಿಪತ್‌ ನಲ್ಲಿರುವ ಈ ರೈಲ್ವೆ ನಿಲ್ದಾಣದ ಹೆಸರು “ದಿವಾನ”( Diwana). ಇಲ್ಲಿ ದಿನಂಪತ್ರಿ ಎರಡು ಫ್ಲ್ಯಾಟ್ ಫಾರಂಗಳಲ್ಲಿ ಅಂದಾಜು ಪ್ರತಿದಿನ 16 ರೈಲುಗಳು ಇಲ್ಲಿ ನಿಲುಗಡೆಯಾಗುತ್ತದೆ. ಈ ರೈಲ್ವೆ ನಿಲ್ದಾಣದ ಹೆಸರು ನಿಮಗೆ ನಗು ತರಿಸುತ್ತೆ.

ಕಾಲಾ ಬಕರಾ!

ಪಂಜಾಬ್‌ ನ ಜಲಂಧರ್‌ ಸಮೀಪದ ಗ್ರಾಮವೊಂದರಲ್ಲಿ ಕಾಲಾ ಬಕರಾ ಎಂಬ ಹೆಸರಿನ ರೈಲ್ವೆ ನಿಲ್ದಾಣವಿದೆ. (ಕಪ್ಪು ಆಡು). ಒಂದು ವೇಳೆ  ನೀವು ಯಾವತ್ತಾದರೂ ಈ ನಿಲ್ದಾಣಕ್ಕೆ ಭೇಟಿ ಕೊಟ್ಟರೆ ತುಂಬಾ ಗೌರವಯುತವಾಗಿ ನಿಲ್ದಾಣದ ಹೆಸರು ಕರೆಯಿರಿ…ಕಾಲಾ ಬಕರಾ ಅಂತ!

Kutta Railway Station:

ಕು(ತ್ತಾ)ಟ್ಟ ಹೆಸರಿನ ರೈಲ್ವೆ ನಿಲ್ದಾಣ ಕರ್ನಾಟಕದ ಮಡಿಕೇರಿಯ ಗಡಿಭಾಗದಲ್ಲಿರುವ ಹಳ್ಳಿಯಲ್ಲಿದೆ. ಇದೊಂದು ಪ್ರಕೃತಿ ಸೌಂದರ್ಯ ಹೊಂದಿರುವ ಹಳ್ಳಿ. ಇಲ್ಲಿಂದ  ಕೇರಳದ ತಲಶ್ಚೇರಿ ರೈಲ್ವೆ ನಿಲ್ದಾಣ 106 ಕಿಲೋ ಮೀಟರ್‌ ದೂರದಲ್ಲಿದ್ದು, ಮೈಸೂರು ಜಂಕ್ಷನ್‌ ರೈಲ್ವೆ ನಿಲ್ದಾಣ 120 ಕಿಲೋ ಮೀಟರ್‌ ದೂರದಲ್ಲಿದೆ.

ಟಾಪ್ ನ್ಯೂಸ್

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್‌ ಸ್ಟಾರ್‌

Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್‌ ಸ್ಟಾರ್‌

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

smi irani

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-tWWW

Tupperware ಲಂಚ್‌ ಬಾಕ್ಸ್‌ ದಿವಾಳಿ: ಅಮೆರಿಕದ ಕಂಪೆನಿ ಘೋಷಣೆ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.