UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…


Team Udayavani, Sep 18, 2024, 5:30 PM IST

19-uv-fusion

ಮನುಷ್ಯ ಎಂದು ಕರೆಸಿಕೊಳ್ಳುವ ಪ್ರತಿಯೊಬ್ಬನಲ್ಲೂ ಮನುಷ್ಯತ್ವ ಎಂಬುದು ಇದ್ದೇ ಇರುತ್ತದೆ, ಇರಲೇ ಬೇಕು. ಆದರೆ ಈಗಿನ ಜಗತ್ತನಲ್ಲಿ ಇದು ಮಾಯವಾಗಿದೆ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ನಾನು ಈ ಅಭಿಪ್ರಾಯಕ್ಕೆ ಬರಲು ಒಂದು ಕಾರಣವಿದೆ. ನೀವೂ ಗಮನಿಸಿರಬಹುದು. ಯಾವುದಾದರೊಂದು ಅವಘಡ ಅಥವಾ ಅಪಘಾತ ಸಂಭವಿಸಿದಾಗ ಅಲ್ಲಿ ಹತ್ತಾರು ಜನರಿದ್ದರೂ ಸಹಾಯಕ್ಕೆ ಯಾರೂ ಧಾವಿಸುವುದಿಲ್ಲ.

ಬದಲಾಗಿ ಥಟ್ಟನೆ ಅವರವರ ಮೊಬೈಲ್‌ ಫೋನ್‌ನಲ್ಲಿ ವೀಡಿಯೋ ಮಾಡುತ್ತಾ ನಿಂತುಬಿಡುತ್ತಾರೆ. ಅದೇ ತಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರು ಅದೇ ಪರಿಸ್ಥಿತಿಯಲ್ಲಿ ಸಿಲುಕಿದ್ದರೆ ಓಡಿ ಹೋಗಿ ಸಹಾಯ ಮಾಡುತ್ತಾರೆ, ಸಹಾಯಕ್ಕೆ ಅಂಗಲಾಚುತ್ತಾರೆ. ಅದೇ ಅಪರಿಚಿತನಾದರೆ ನಾವು ಸೈಲೆಂಟ್‌. ಇದನ್ನೆಲ್ಲಾ ಕಂಡಾಗ ನನಗನಿಸುವುದು, ಎತ್ತ ಸಾಗುತ್ತಿದೆ ನಮ್ಮ ಈ ಪ್ರಪಂಚ ಎಂದು.

ಪ್ರಸ್ತುತ ಸಾಕಿ ಬೆಳೆಸಿದ ತಂದೆ ತಾಯಿಗೆ ಗೌರವ ನೀಡದ ಮಕ್ಕಳಿದ್ದಾರೆ. ಅದೊಂದು ಕಾಲವಿತ್ತು. ತಾಯಿಯೇ ಮೊದಲ ದೇವರು, ತಂದೆಯೇ ಮೊದಲ ಗುರು ಎಂದು ಮಕ್ಕಳು ಹೆತ್ತವರನ್ನು ಪೂಜಿಸುತ್ತಿದ್ದರು.

ಆದರೆ ಈಗಿನ ಮಕ್ಕಳು ತಮ್ಮ ಜೀವನದ ಸುಖ ಶಾಂತಿ ನೆಮ್ಮದಿಗಾಗಿ, ಎಷ್ಟೇ ಕಷ್ಟವಾದರೂ ತಾವು ಕೇಳಿದ್ದನ್ನು ಕೊಡಿಸಿದ, ನಮ್ಮನ್ನು ಚೆನ್ನಾಗಿ ನೋಡಿಕೊಂಡ ತಂದೆ ತಾಯಿಯನ್ನೇ ದೂರ ಮಾಡಿ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ವಿಪರ್ಯಾಸವೇ ಸರಿ. ತಮಗೆ ಜನ್ಮ ನೀಡಿ, ಸಾಕಿ ಸಲುಹಿ ಬೆಳೆಸಿದ ಆ ಹಿರಿಯ ಜೀವಗಳನ್ನೇ ಯಾವ ಗೌರವವೂ ಇಲ್ಲದೇ ಮನೆಯಿಂದ ಹೊರ ದಬ್ಬುವುದನ್ನು ನೋಡಿದಾಗ ನನಗೆ ಅನಿಸುವುದು ಇಷ್ಟೆ, ಎತ್ತ ಸಾಗಿತ್ತಿದೆ ನಮ್ಮ ಈ ಪ್ರಪಂಚ ಎಂದು.

ಯುವಕರೇ ದೇಶದ ಭವಿಷ್ಯ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಕಾಲವಿತ್ತು. ಆದರೆ ಇಂದಿನ ಯುವಕರನ್ನು ಕಂಡಾಗ ಮುಂದೆ ಎಂತಹ ಪ್ರಜೆಗಳಾಗುತ್ತಾರೆ ಎಂಬ ಭಯ ಕಾಡದಿರದು. ಮುಂದೆ ಸತ್‌ಪ್ರಜೆಗಳಾಗಿ ಬೆಳೆಯಬೇಕಾದ ಅದೆಷ್ಟೋ ಯುವಕ-ಯುವತಿಯರು ದಾರಿ ತಪ್ಪಿ ಬೇರೆ ಬೇರೆ ಆಮಿಷಗಳಿಗೆ ತಮ್ಮನ್ನು ತಾವು ಬಲಿ ಕೊಡುತ್ತಿದ್ದಾರೆ. ಗಾಂಜಾ, ಸಿಗರೇಟು, ಮದ್ಯಪಾನ ಇತ್ಯಾದಿ ಚಟಗಳನ್ನು ಈಗಲೇ ಮೈಗಂಟಿಸಿಕೊಂಡಿ¨ªಾರೆ. ಸಣ್ಣಪುಟ್ಟ ಸೋಲುಗಳು, ಸಮಸ್ಯೆಗಳಿಗೆ ಹೆದರಿ, ಅದನ್ನು ಎದುರಿಸಲಾಗದೆ ಅದಕ್ಕೆಲ್ಲ ಆತ್ಮಹತ್ಯೆ ಒಂದೇ ದಾರಿ ಎಂಬ ನಿರ್ಧಾರಕ್ಕೆ ಯುವಜನತೆ ಬರುತ್ತಿರುವುದನ್ನು ಕಂಡಾಗ ನನಗೆ ಅನಿಸುವುದು ಇಷ್ಟೆ, ಎತ್ತ ಸಾಗುತ್ತಿದೆ ನಮ್ಮ ಈ ಪ್ರಪಂಚ ಎಂದು.

ಆಗಿನ ಕಾಲದಲ್ಲಿ ಪುಟ್ಟಮಕ್ಕಳಿಗೆ ತನ್ನ ಅಜ್ಜಿ ಮನೆಗೆ ಹೋಗುವಾಗ ಆಗುತ್ತಿದ್ದ ಖುಷಿ ಈಗಿನ ಮಕ್ಕಳ ಅದೃಷ್ಟದಲ್ಲಿಲ್ಲ. ಇದ್ದಕ್ಕೆ ಕಾರಣ ಮೊಬೈಲ್‌ ಅಲ್ಲದೇ ಬೇರೇನೂ ಅಲ್ಲ. ಇಂದು ಮೊಬೈಲ್‌ ಇಲ್ಲದಿದ್ದರೆ ಮಕ್ಕಳು ಊಟವನ್ನೂ ಮಾಡುವುದಿಲ್ಲ. ನಾವುಬಾಲ್ಯದಲ್ಲಿ ಚಂದ್ರನನ್ನು ನೋಡುತ್ತಾ ಊಟವನ್ನು ಸವಿಯುತ್ತಿದ್ದೆವು. ಈಗ ನೂತನ ತಂತ್ರಜ್ಞಾನ, ಆವಿಷ್ಕಾರಗಳನ್ನು ಬಳಸುತ್ತಾ ನಮ್ಮ ಸಂಪ್ರದಾಯವನ್ನು ಮರೆಯುತ್ತಿದ್ದೇವೆ ಎಂದರೆ ತಪ್ಪಾಗಲಾರದು.

ಹಾಗಂತ ಮೊಬೈಲ್‌ ಅಥವಾ ಹೊಸ ಆವಿಷ್ಕಾರ ಬಳಸಬಾರದೆಂದಲ್ಲ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಅದಕ್ಕೊಂದು ಇತಿಮಿತಯನ್ನು ನಾವೇ ರೂಪಿಸಿಕೊಳ್ಳಬೇಕು. ಆದರೆ ಇಂದು ಎಲ್ಲವನ್ನೂ ಬಿಟ್ಟು ಮೊಬೈಲ್‌ ಗೀಳಿನಲ್ಲಿ ಸಿಲುಕುತ್ತಿರುವವರನ್ನು ಕಂಡಾಗ ಮತ್ತೇ ಕಾಡುವಂತಹ ಪ್ರಶ್ನೆ ಎತ್ತ ಸಾಗುತ್ತಿದೆ ಈ ಪ್ರಪಂಚ…

-ಕವನಾ

ಬಿವೋಕ್‌ (ಡಿಎಂಎಫ್),

ಎಸ್‌ಡಿಎಂ, ಉಜಿರೆ

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.