Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
ಲೆಬನಾನ್ನ ವಿವಿಧ ಪ್ರದೇಶಗಳಲ್ಲಿ ಸಂಭವಿಸಿದ ಸ್ಫೋಟ, 450 ಮಂದಿಗೆ ತೀವ್ರ ಗಾಯ
Team Udayavani, Sep 19, 2024, 5:50 AM IST
ಬೈರುತ್: ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಲೆಬನಾನ್ನಲ್ಲಿ ಒಂದೇ ಬಾರಿಗೆ 1 ಸಾವಿರಕ್ಕೂ ಅಧಿಕ ಪೇಜರ್ಗಳನ್ನು ಸ್ಫೋಟಿಸಿದ್ದ ಬೆನ್ನಲ್ಲೇ ಬುಧವಾರ ಮತ್ತೆ 3 ಸಾವಿರ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ವಾಕಿಟಾಕಿ, ವೈರ್ಲೆಸ್ ರೇಡಿಯೋ ಗಳನ್ನು ಸ್ಫೋಟಿಸಲಾಗಿದೆ. ಈ ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪೇಜರ್ಗಳನ್ನು ಖರೀದಿಸಿದ್ದ ಸಂದರ್ಭದಲ್ಲೇ ಈ ವಾಕಿ-ಟಾಕಿ ಮತ್ತು ರೇಡಿಯೋಗಳನ್ನೂ ಖರೀದಿಸಲಾಗಿತ್ತು ಎನ್ನುವ ಮಾಹಿತಿ ಹೊರಬಿದ್ದಿದ್ದು, ಲೆಬನಾನ್ ಜನರಲ್ಲಿ ಘಟನೆ ಆತಂಕ ಹೆಚ್ಚಿಸಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬೈರೂತ್, ಬೈಕಾ ವ್ಯಾಲಿ ಹಾಗೂ ದಕ್ಷಿಣ ಲೆಬನಾನ್ನಲ್ಲಿ ವಾಕಿ-ಟಾಕಿ ಮತ್ತು ವೈರ್ಲೆಸ್ ರೇಡಿಯೋಗಳು ಸ್ಫೋಟಗೊಂಡಿವೆ. ಹಲವು ಪ್ರದೇಶಗಳಲ್ಲಿ ಮನೆಯ ಸೌರಶಕ್ತಿ ವ್ಯವಸ್ಥೆಗಳೂ ಸ್ಫೋಟಗೊಂಡಿವೆ ಎನ್ನಲಾಗಿದೆ. ಮಂಗಳವಾರ ನಡೆದಿದ್ದ ಪೇಜರ್ ಸ್ಫೋಟದಿಂದ 12 ಮಂದಿ ಮೃತಪಟ್ಟಿದ್ದರು. ಈಗ ಈ ಘಟನೆಯನ್ನೂ ಹೆಜ್ಜುಲ್ಲಾ ನಾಯ ಕರು ಇಸ್ರೇಲ್ ನಡೆಸಿದೆ ಎಂದು ಆರೋಪಿಸಿದ್ದಾರೆ.
ಅಂತ್ಯಸಂಸ್ಕಾರದ ವೇಳೆಯೇ ಸ್ಫೋಟ
ಮಂಗಳವಾರ ಪೇಜರ್ ಸ್ಫೋಟ ದಿಂದ ಮೃತಪಟ್ಟ ಹೆಜ್ಬುಲ್ಲಾ ಸಂಘ ಟನೆಯ ನಾಲ್ವರ ಅಂತಿಮ ಸಂಸ್ಕಾರ ಬೈರೂತ್ನಲ್ಲಿ ನಡೆಯುತ್ತಿತ್ತು. ಈ ವೇಳೆಯೇ ವಾಕಿ-ಟಾಕಿಗಳು ಸ್ಫೋಟಗೊಂಡಿವೆ. ಹಲವರು ಗಾಯಗೊಂಡಿದ್ದು, ಜಾಲತಾಣಗಳಲ್ಲೂ ಈ ವೀಡಿಯೋ ವೈರಲ್ ಆಗಿದೆ.
ಏನೇನಾಯ್ತು?
* ಬೈರೂತ್, ಬೈಕಾ ವ್ಯಾಲಿ, ದ.ಲೆಬನಾನ್ನ ಹಲವೆಡೆ ಕೃತ್ಯ
* ವೈರ್ಲೆಸ್ ರೇಡಿಯೋಗಳು ಕೂಡ ಇದ್ದಕ್ಕಿದ್ದಂತೆ ಚೂರು
* ಕೆಲವಡೆ ಮನೆಯ ಸೌರಶಕ್ತಿ ವ್ಯವಸ್ಥೆ ಗಳೂ ಸ್ಫೋಟ
Explosion occurred during the funeral procession of Mahdi Ammar, the son of Lebanese MP Ali Ammar, in Sohmor, Lebanon. pic.twitter.com/VrSFS9YXJ7
— Tehran Times (@TehranTimes79) September 18, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.