UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು


Team Udayavani, Sep 19, 2024, 10:42 AM IST

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

ಉಪೇಂದ್ರ (Upendra) ಮಾತುಗಳೇ ಹಾಗೆ.. ನೀವು ಒಂದು ಪ್ರಶ್ನೆ ಕೇಳಿ ಅವರಿಂದ ದೀರ್ಘ‌ ಉತ್ತರ ಬಯಸುವಂತಿಲ್ಲ. ಒಂದೊಂದು ವಾಕ್ಯದಲ್ಲಿ ಉತ್ತರಿಸಿಬಿಡುತ್ತಾರೆ. ಇನ್ನೊಂದಿಷ್ಟು ಪ್ರಶ್ನೆಗಳಿಗೆ ಅವರದ್ದೇ ಶೈಲಿಯಲ್ಲಿ ಉತ್ತರ. ಅರ್ಥಮಾಡಿಕೊಂಡವರೇ ಪುಣ್ಯಾತ್ಮರು. ಅವರ ಬರ್ತ್‌ಡೇ ದಿನ ಉಪೇಂದ್ರ ಪತ್ರಿಕಾಗೋಷ್ಠಿ ಕರೆದು “ಯು-ಐ’ (UI) ಬಗ್ಗೆ ಮಾತನಾಡಿದರು.

ಹಲವು ಪ್ರಶ್ನೆಗಳು ಉಪ್ಪಿಗೆ ಎದುರಾಯಿತು. ಆದರೆ, ಉಪೇಂದ್ರ ಮಾತ್ರ ಉಪ್ಪಿಟ್ಟು ತಿಂದಷ್ಟೇ ಸಲೀಸಾಗಿ ಒಂದೊಂದೇ ವಾಕ್ಯದಲ್ಲಿ ಉತ್ತರಿಸಿದರು. ಉಪ್ಪಿ “ಯು-ಐ’ ಬಗ್ಗೆ ಹೆಚ್ಚಿನ ಅಂಶಗಳನ್ನು ಬಿಟ್ಟುಕೊಡದೇ ನಗು ನಗುತ್ತಲೇ ಕೆಲವೇ ಕೆಲವು ಮಾತುಗಳನ್ನಾಡಿದರು. ಅವರ ಮಾತಿನ ಹೈಲೈಟ್ಸ್‌ ಹೀಗಿವೆ…

ಎರಡೂವರೆ ವರ್ಷಗಳ ಶ್ರಮ ಯು-ಐ ಸಿನಿಮಾ. ಈಗ ತೆರೆಗೆ ಸಿದ್ಧವಾಗಿದೆ.

ಆರಂಭದಲ್ಲಿ ಇದು ಕನ್ನಡ ಸಿನಿಮಾ ಅಂದುಕೊಂಡೆ ಶುರು ಮಾಡಿದ್ವಿ, ಆದರೆ ಮುಂದೆ ಪ್ಯಾನ್‌ ಇಂಡಿಯಾ ಮಾಡುವ ಯೋಚನೆ ಬಂತು. ಆ ನಂತರ ಸಾಕಷ್ಟು ಅಂಶಗಳು ಸೇರಿಕೊಂಡವು. ಅದಕ್ಕೆ ನಿರ್ಮಾಣ ಸಂಸ್ಥೆ ಕೂಡಾ ಸಾಥ್‌ ನೀಡಿತು.

ಅಕ್ಟೋಬರ್‌ನಲ್ಲಿ ರಿಲೀಸ್‌ ಎಂದಿದ್ದೇವೆ. ಆದರೆ, ಏನು ರಿಲೀಸ್‌ ಎಂದು ಹೇಳಿಲ್ಲ. ರಿಲೀಸ್‌ ಡೇಟ್‌ ಸದ್ಯದಲ್ಲೇ ತೀರ್ಮಾನ ಆಗಲಿದೆ. ಪ್ಯಾನ್‌ ಇಂಡಿಯಾ ಹಾಗೂ ತಂತ್ರಜ್ಞಾನ ಕೆಲಸ ಹೆಚ್ಚಿರುವುದರಿಂದ ಬಿಡುಗಡೆಯಲ್ಲಿ ವಿಳಂಬ ಆಗುತ್ತಿದೆ. ಅಕ್ಟೋಬರ್‌ನಲ್ಲೆ ಚಿತ್ರ ಬರಲಿದೆ. ಸಿನಿಮಾ ತಯಾರಾಗಿದೆ. ಒಮ್ಮೆ ನಾನು ಥಿಯೇಟರ್‌ನಲ್ಲಿ ನೋಡಬೇಕು. ಅದಾದ ನಂತರ ಬಿಡುಗಡೆ ದಿನಾಂಕ ಘೋಷಿಸುತ್ತೇವೆ.

ಚಿತ್ರದಲ್ಲಿ ಲಾಜಿಕಲ್‌, ಸೈಕಾಲಾಜಿಕಲ್‌ ಅಂಶಗಳಿವೆ. ಸಿನಿಮಾ ನೋಡಿದ ನಂತರ ನೀವೇ ಮಾತನಾಡುತ್ತೀರಿ.

ಈ ಸಿನಿಮಾ ಮುಗಿದ ಮೇಲೆ ವರ್ಷಕ್ಕೆರಡು ಸಿನಿಮಾ ಮಾಡುವ ಯೋಚನೆ ಇದೆ.

ನನ್ನ ಸಿನಿಮಾ ಎಂದರೆ ಹುಳ ಬಿಡೋದು ಎನ್ನುತ್ತಾರೆ ಆದರೆ, ಇದು ತಲೆಯಲ್ಲಿರೋ ಹುಳ ತೆಗೆಯುವ ಸಿನಿಮಾ.

ಬೇಕಾದರೆ ಐದೈದು ಮದುವೆಯಾಗಬಹುದು. ಆದರೆ, ನಿರ್ದೇಶನ ಮಾಡೋದು ಬಹಳ ಕಷ್ಟ.

ಲೋಕೇಶ ಕನಕರಾಜ್‌ ನಿರ್ದೇಶನದ ಕೂಲಿ ಸಿನಿಮಾದಲ್ಲಿ ರಜನಿಕಾಂತ್‌ ಜೊತೆ ಮಾಡ್ತಾ ಇದಿನಿ. ಅಲ್ಲಿ ವಿಲನ್‌ ಪಾತ್ರ ಅಲ್ಲ. ಬೇರೆಯೇ ಶೇಡ್‌ನ‌ಲ್ಲಿ ನನ್ನ ಪಾತ್ರವಿದೆ.

ಪ್ರೇಕ್ಷಕರು ಅತಿ ಬುದ್ಧಿವಂತರು, ಅವರ ಮೇಲಿನ ವಿಶ್ವಾಸದಿಂದಲೇ ಈ ಸಿನಿಮಾ ಮಾಡಿರುವೆ. ಅಭಿಮಾನಿಗಳು ಯೆಸ್‌ ಎಂದರೆ ಸಿನಿಮಾ ಗೆದ್ದಂತೆ. ಎಲ್ಲರೂ ಸಿನಿಮಾ ಮೇಕರ್‌ಳಾಗಿದ್ದಾರೆ. ಹೀಗಾಗಿ, ಒಳ್ಳೆಯದನ್ನು ನೀಡಲು ನಾವು ಪ್ರಯತ್ನಿಸಬೇಕು.

ಸಿನಿಮಾ ನಿರ್ದೇಶನ ಅನ್ನೋದು ದೊಡ್ಡ ಫೈಟ್‌. ಪ್ರತಿ ಒಂದು ಹಂತದಲ್ಲೂ ಫೈಟ್‌ ಮಾಡಿ ಸಿನಿಮಾ ತಲುಪಿಸಬೇಕು. ಹಲವು ಕಾರಣದಿಂದ ಸಿನಿಮಾ ವಿಳಂಬ ಆಗಿದೆ. ಯೂಟ್ಯೂಬ್‌ನಲ್ಲಿ ಲೈವ್‌ ಹೋಗುವ ಸ್ಪೀಡ್‌ನ‌ಲ್ಲಿ ಸಿನಿಮಾ ಮಾಡೋಕೆ ಆಗಲ್ಲ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Bhale Huduga Movie: ಹಳ್ಳಿ ಹುಡುಗನ ಸಾಹಸ ಕಥನ

Bhale Huduga Movie: ಹಳ್ಳಿ ಹುಡುಗನ ಸಾಹಸ ಕಥನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.