Vishnuvardhan: ನಟ ವಿಷ್ಣುವರ್ಧನ್ ಸಮಾಧಿ ದರ್ಶನ ವೇಳೆ ಗೊಂದಲ
Team Udayavani, Sep 19, 2024, 11:19 AM IST
ಬೆಂಗಳೂರು: ನಟ ವಿಷ್ಣುವರ್ಧನ್ ಅವರ 74ನೇ ಜನ್ಮದಿನ ಹಿನ್ನೆಲೆಯಲ್ಲಿ, ನಗರದ ಅಭಿಮಾನ್ ಸ್ಟುಡಿಯೋ ದಲ್ಲಿನ ಅವರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಲು ನೂರಾರು ಅಭಿಮಾನಿಗಳು ಆಗಮಿಸಿ ದ್ದರು. ತಮ್ಮ ನೆಚ್ಚಿನ ನಾಯಕನನ್ನು ಸ್ಮರಿಸಿಕೊಂಡ ಅಭಿಮಾನಿಗಳು, ಅವರ ಪರ ಜೈಕಾರ ಘೋಷಣೆ ಕೂಗಿದರು. ಅಲ್ಲಲ್ಲಿ ವಿಷ್ಣು ವರ್ಧನ್ ಅವರ ಫೋಟೋ ಗಳು, ಕನ್ನಡ ಬಾವುಟ ರಾರಾಜಿಸುತ್ತಿ ದ್ದವು. ವಿಷ್ಣು ನೆನಪಿನಲ್ಲಿ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಬಾಲಣ್ಣ ಮಕ್ಕಳಿಂದ ತಡೆ: ಇದೇ ಸಂದರ್ಭದಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಬಾರದೆಂದು ನಟ ಬಾಲಕೃಷ್ಣ ಅವರ ಮಕ್ಕಳು ಸ್ಟುಡಿಯೋಗೆ ಬೀಗ ಹಾಕಿ, ತಡೆದ ಘಟನೆ ನಡೆದಿದೆ. ಸಂಘಟನೆಯವರನ್ನು ಸ್ಟುಡಿಯೋ ಹೊರಬಾಗದಲ್ಲೇ ನಿಲ್ಲಿಸಿ, ಉಳಿದ ಅಭಿಮಾನಿಗಳಿಗೆ ಮಾತ್ರ ಒಳಗೆ ಪ್ರವೇಶಿಸಲು ಅನುಮತಿಸಲಾಗಿತ್ತು. ವಿಷ್ಣುವರ್ಧನ್ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸುವ ವಿಚಾರದಲ್ಲಿ ಮೊದಲಿನಿಂದಲೂ ವಿವಾದ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಅನುಮತಿಸಿದ್ದರೂ, ಕೋರ್ಟ್ ಮೂಲಕ ತಡೆಯಾಜ್ಞೆ ತರಲಾಗಿದೆ. ಇದರಿಂದಾಗಿ ಕೆಲ ಕಾಲ ಗೊಂದಲ ಸೃಷ್ಟಿಯಾಗಿ, ಅಭಿಮಾನಿಗಳಿಂದ ಸರ್ಕಾರದ ವಿರುದ್ಧ ಘೋಷಣೆಗಳು ಕೇಳಿ ಬಂದವು.
ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಬಾಲಣ್ಣ ಅವರ ಮಕ್ಕಳು ಇಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿ ಸಬೇಕೆಂಬ ಯೋಜನೆಯಲ್ಲಿದ್ದಾರೆ. ಅಭಿಮಾನಿಗಳು ಅವರ ಸಮಾಧಿ ದರ್ಶನಕ್ಕೆ ಬಂದಿದ್ದಾರೆ. ಹೀಗೆ ಹೊರಗೆ ಕಾಯಿಸುವುದು ಸರಿಯಲ್ಲ. ಇಲ್ಲಿ ಅವರ ಸ್ಮಾರಕ ವಾ ಗಲೇಬೇಕು. ನಮ್ಮ ಹೋರಾಟ ಇನ್ನು ದೊಡ್ಡಮಟ್ಟದಲ್ಲಿ ಮುಂದುವರಿಸುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.