Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

ಕುಂದಾಪುರದ ಈ ಮೈದಾನದ ಕಳೆಯನ್ನೇ ಕಿತ್ತಿಲ್ಲ, ದೀಪ ಬೆಳಗಲ್ಲ; ಆಡಲು ಜಾಗವೂ ಇಲ್ಲ! ನೆಹರೂ ಮೈದಾನದಲ್ಲಿ ದೊಡ್ಡ ಪೈಪುಗಳ ರಾಶಿ; ಉಪಯೋಗಕ್ಕೆ ಇಲ್ಲದಂತಾದ ರಂಗ ಮಂದಿರ

Team Udayavani, Sep 19, 2024, 1:26 PM IST

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

ಕುಂದಾಪುರ: ತಾಲೂಕು ಕೇಂದ್ರದಲ್ಲಿ ಸಮರ್ಪಕವಾಗಿ ಇರುವುದು ಎರಡೇ ಮೈದಾನಗಳು. ಒಂದು ಗಾಂಧಿ ಮೈದಾನ, ಇನ್ನೊಂದು ನೆಹರೂ ಮೈದಾನ. ಗಾಂಧಿ ಮೈದಾನ ಯುವನಸೇವಾ ಮತ್ತು ಕ್ರೀಡಾ ಇಲಾಖೆ ಆಧೀನದಲ್ಲಿದೆ. ಇನ್ನು ನೆಹರೂ ಮೈದಾನದ ಅವಸ್ಥೆ ಕೇಳುವುದೇ ಬೇಡ. ಏಕೆಂದರೆ ಅತ್ತ ಪುರಸಭೆಗೂ ಹಸ್ತಾಂತರವಾಗಲಿಲ್ಲ. ಇತ್ತ ಕಂದಾಯ ಇಲಾಖೆಯೂ ಇದರ ಕುರಿತು ಗಮನ ಹರಿಸುವುದಿಲ್ಲ. ಪುರಸಭೆಗೆ ಹಸ್ತಾಂತರಿಸಬೇಕು ಎಂದು ಎಂದೋ ಆದೇಶವಾಗಿದ್ದರೂ, ಪುರಸಭೆ ನಿರ್ಣಯ ಮಾಡಿ, ಜಂಟಿ ಸರ್ವೆ ಮಾಡಿ, ಅಳತೆಯಾಗಿ ಕಂದಾಯ ಇಲಾಖೆಯಲ್ಲಿ ಕಡತ ಸಿದ್ಧವಾಗಿದ್ದರೂ ಹಸ್ತಾಂತರವಾಗಲೇ ಇಲ್ಲ.

ಗಾಂಧಿ ಮೈದಾನದಲ್ಲಿ ಆಟಕ್ಕೆ ಜಾಗವಿಲ್ಲ!
ಇದು ಹೆಸರಿಗೆ ಆಟದ ಮೈದಾನ. ಆದರೆ ಆಡಲು ಜಾಗವೇ ಇಲ್ಲ. ಇಲ್ಲಿ ಸಮಸ್ಯೆಗಳೇ ಆಡುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ. ವಾರಾಂತ್ಯದಲ್ಲಿ ಇಲ್ಲಿ ಕ್ರಿಕೆಟ್‌ ಮತ್ತಿತರ ಪಂದ್ಯಗಳು ನಡೆಯುತ್ತವೆ. ಆದರೆ ಈಗ ಹುಲ್ಲು ತುಂಬಿದೆ. ಕಳೆ ಕೀಳಲಿಲ್ಲ. ಮಳೆ ಬಂದಾಗಲೆಲ್ಲ ಕೊಚ್ಚೆಯಾಗುತ್ತದೆ.   ವಾಲಿಬಾಲ್‌ ಕೋರ್ಟ್‌ ಸಮೀಪ ಬಿದ್ದರೆ ಕೈ ಕಾಲಿನ ಗಂಟು ಮುರಿಯಬಹುದು ಎಂಬಂತೆ ಹೊಂಡಗಳಿವೆ.

ಬೇರೆ ಮೈದಾನಗಳಿದ್ದರೂ…
ಭಂಡಾರ್‌ಕಾರ್ಸ್‌ ಕಾಲೇಜು ಪಕ್ಕದ ಗಾಂಧಿ ಕ್ರೀಡಾಂಗಣ, ಅದರ ಪಕ್ಕದಲ್ಲಿ ನೆಹರೂ ಮೈದಾನ ಎಂದು ವಿವಿಧ ಚಟುವಟಿಕೆಗಳಿಗೆ ಯೋಗ್ಯವಾದ ಮೈದಾನಗಳಿವೆ. ನೆಹರೂ ಮೈದಾನ ಪುರಸಭೆಯ ಹಿಡಿತದಲ್ಲಿ ಇಲ್ಲದೆ ಇರುವುದರಿಂದ ಅದು ಯಾವುದಕ್ಕೂ ಸಿಗುತ್ತಿಲ್ಲ.  ಗಾಂಧಿ ಮೈದಾನದಲ್ಲಿ ಸರಕಾರಿ ಕಾರ್ಯಕ್ರಮಗಳೂ ನಡೆಯುತ್ತವೆ.  ದಸರಾ ಕ್ರೀಡಾಕೂಟಕ್ಕೂ ಇದೇ ಜಾಗ ಬೇಕು.

ಹಿರಿಯರಿಗೆ ವಾಕಿಂಗ್‌, ಕಿರಿಯರಿಗೆ ಆಟ!
ಗಾಂಧಿ ಮೈದಾನದಲ್ಲಿ ಸಂಜೆ ವಾಕಿಂಗ್‌ಗೆ ಎಂದು ನೂರಾರು ನ ಆಗಮಿಸುತ್ತಾರೆ. ಅದೇ ಹೊತ್ತಿಗೆ ಯುವಕರು ಆಟವಾಡಲು ಬರುತ್ತಾರೆ! ಆದರೆ ಸಂಜೆ ಆರಾಗುತ್ತಿದ್ದಂತೆ ಇಲ್ಲಿ ಕತ್ತಲು ಆವರಿಸುತ್ತದೆ. ಇಲ್ಲಿನ ದೀಪಗಳೂ ಬೆಳಗುವುದಿಲ್ಲ. ಇದರಿಂದ ಹಿರಿಯರಿಗೆ, ಮಹಿಳೆಯರಿಗೆ ಅನಗತ್ಯ ಭಯದ ವಾತಾವರಣ ಸೃಷ್ಟಿಯಾಗುತ್ತದೆ.

ನೆಹರೂ ಮೈದಾನವೂ ಕಳಾಹೀನ!
ಪುರಸಭೆಯ ಸ್ವರ್ಣ ಮಹೋತ್ಸವದ ನೆನಪಿಗೆ ನೆಹರೂ ಮೈದಾನದ ಬಯಲಿನಲ್ಲಿ ಒಂದು ಸುಂದರ ರಂಗಮಂದಿರ ಕಟ್ಟಿಸಿದೆ. ಈ ಮೈದಾನದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇಲ್ಲಿ ಯುಜಿಡಿ ಕಾಮಗಾರಿಗಾಗಿ ತಂದು ಹಾಕಿದ್ದ ದೊಡ್ಡ ಗಾತ್ರದ ಪೈಪುಗಳಿಂದಾಗಿ ಮೈದಾನ ಪಾಳು ಬೀಳಲಾರಂಭಿಸಿತು. ಮೈದಾನದ ಸುತ್ತ ಮಳೆಗಾಲದ ಕಳೆ ಬೆಳೆಯತೊಡಗಿತು. ಆಗೊಮ್ಮೆ ಈಗೊಮ್ಮೆ ಪುರಸಭೆ ಕಳೆ ತೆಗೆದರೂ ಮೈದಾನ ಮಾತ್ರ ‘ಕಳಾಹೀನ’ವಾಗಿ ‘ಕಲಾವಿಹೀನ’ವಾಗಿದೆ.

ಕೆಲವು ಪ್ರದರ್ಶನ ಮೇಳಗಳಿಗಾಗಿ ಇಲ್ಲಿ ಅಗೆಯಲಾಗಿದೆ.

ಘನ ಲಾರಿಗಳು ಮೈದಾನದೆಲ್ಲೆಡೆ ಎಗ್ಗಿಲ್ಲದೆ ಸಂಚರಿಸಿದ ಪರಿಣಾಮ ಹೊಂಡಗುಂಡಿಗಳು ಬಿದ್ದಿವೆ. ವಾಹನ ಚಾಲನೆ ಕಲಿಕೆಗೆ ಈ ಮೈದಾನ ಉಪಯೋಗವಾಗುತ್ತಿದೆ.

ಮೈದಾನದಲ್ಲಿರುವ ರಂಗಮಂದಿರ ಉಪಯೋಗಶೂನ್ಯವಾಗಿದೆ. ಮುಚ್ಚಿದ ಕಬ್ಬಿಣದ ಗೇಟು ತುಕ್ಕು ಹಿಡಿಯತೊಡಗಿದ್ದು, ಕೈಗೆ ಮಣ್ಣಿನ ಲೇಪನವಾಗುತ್ತಿದೆ.  ಸಾಂಸ್ಕೃತಿಕ ಚಟುವಟಿಕೆಗೆ ಇಂಬು ನೀಡಬೇಕಿದ್ದ ಈ ರಂಗಮಂದಿರ ಈಗ ದಿಕ್ಕುದೆಸೆಯಿಲ್ಲದಂತಾಗಿದೆ.

ಗಾಂಧಿ ಮೈದಾನ ನಾದುರಸ್ತಿಯಲ್ಲಿದೆ. ಇಲ್ಲಿ ವಾಲಿಬಾಲ್‌ಆಟವಾಡಿದರೆ ಕೈ ಕಾಲು ತುಂಡಾಗಬಹುದು. ಮೈದಾನ ಅಷ್ಟು ಹೊಂಡಗುಂಡಿಗಳಿಂದ ಕೂಡಿದೆ.
-ವಿಕಾಸ್‌ ಹೆಗ್ಡೆ, ಸ್ಥಳೀಯರು

ಗಾಂಧಿ ಮೈದಾನ ದುರಸ್ತಿಗೆ 5 ಲಕ್ಷ ರೂ. ಅನುದಾನ ದೊರೆತಿದ್ದು ದುರಸ್ತಿ ನಡೆಸಲಾಗುವುದು. ಆಟ ಆಡಲು ಯಾವುದೇ ಸಮಸ್ಯೆಗಳು ಇಲ್ಲ.
-ಕುಸುಮಾಕರ್‌ ಶೆಟ್ಟಿ, ತಾಲೂಕು ಯುವನ ಸೇವಾ ಮತ್ತು ಕ್ರೀಡಾಧಿಕಾರಿ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.