Kasaragod ಅಪರಾಧ ಸುದ್ದಿಗಳು
Team Udayavani, Sep 19, 2024, 7:34 PM IST
24.79 ಲಕ್ಷ ರೂ. ಕಾಳಧನ ವಶಕ್ಕೆ
ಕಾಸರಗೋಡು: ಸರಿಯಾದ ದಾಖಲೆ ಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 24.79 ಲಕ್ಷ ರೂ. ಕಾಳಧನವನ್ನು ಹೊಸದುರ್ಗ ಪೊಲೀಸರು ವಶಪಡಿಸಿಕೊಂಡು, ಈ ಸಂಬಂಧ ಪಳ್ಳಿಕೆರೆ ಕಲ್ಲಿಂಗಾಲ್ ನಿವಾಸಿ ಶಂಸು ಆಲಿಯಾಸ್ ಸನಾ ಶಂಸು(62)ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಹೊಸದುರ್ಗ ಡಿವೈಎಸ್ಪಿ ಬಾಬು ಪೆರಿಂಙೋತ್ ನೀಡಿದ ನಿರ್ದೇಶದಂತೆ ಹೊಸದುರ್ಗ ಎಸ್ಐ ವಿ.ಪಿ. ಅಖೀಲ್ ನೇತೃತ್ವದಲ್ಲಿ ಪೊಲೀಸರು ಹೊಸದುರ್ಗದ ಮಡಿಯನ್ನಲ್ಲಿ ಕಾರ್ಯಾಚರಣೆ ನಡೆಸಿದ್ದರು.
ವೈದ್ಯ ದಂಪತಿಯ ಕಾರುಗಳಿಗೆ ಹಾನಿ
ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯ ಹಾಗೂ ವೈದ್ಯೆ ಪತ್ನಿ ಕಾರುಗಳ ಗಾಜುಗಳನ್ನು ಕಲ್ಲು ಹೊಡೆದು ಹಾನಿಗೈದ ಘಟನೆ ನಡೆದಿದೆ. ಡಾ| ಅಭಿಜಿತ್ ದಾಸ್, ಪತ್ನಿ ಡಾ| ದಿವ್ಯಾ ಅವರ ಕಾರುಗಳಿಗೆ ಹಾನಿ ಮಾಡಲಾಗಿದೆ. ಈ ಇಬ್ಬರು ವಾಸಿಸುವ ಕಾಂಞಂಗಾಡ್ ಉದಯಾಂಕುನ್ನಿನ ಬಾಡಿಗೆ ಮನೆ ಮುಂದೆ ಕಾರುಗಳನ್ನು ನಿಲ್ಲಿಸಲಾಗಿತ್ತು. ಡಾ| ಅಭಿಜಿತ್ ದಾಸ್ರ ಹೋಂಡಾ ಸಿಟಿ ಕಾರು, ಡಾ| ದಿವ್ಯಾ ಅವರ ಆಲ್ಟೋ ಕಾರಿಗೆ ಸೆ. 18ರಂದು ತಡರಾತ್ರಿ 1 ಗಂಟೆಗೆ ಹಾನಿಗೊಳಿಸಲಾಗಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.