Yermarus: ಖಾಸಗಿ ಬಸ್ ಹರಿದು 150 ಕುರಿಗಳ ಮಾರಣಹೋಮ
Team Udayavani, Sep 20, 2024, 11:00 AM IST
ರಾಯಚೂರು: ಸಮೀಪದ ಯರಮರಸ್ ಬೈಪಾಸ್ ನಲ್ಲಿ ಖಾಸಗಿ ಬಸ್ ಹರಿದು 150ಕ್ಕೂ ಹೆಚ್ಚು ಕುರಿಗಳ ಮಾರಣಹೋಮ ನಡೆದಿದ್ದು, ಅಂದಾಜು 15 ಲಕ್ಷ ಹಾನಿ ಸಂಭವಿಸಿದೆ.
ಗುರುವಾರ ಬೆಳಗಿನ ಜಾವ ತೆಲಂಗಾಣದ ನಾರಾಯಪೇಟೆ, ಹೊಳಪುರ ಮೂಲದ ಕುರಿಗಾಹಿಗಳು ಕುರಿ ಹೊಡೆದುಕೊಂಡು ಹೊಗುವಾಗ ವೇಗದಲ್ಲಿ ಬಂದ ಬಸ್ ಮೇಲೆ ಹರಿದಿದೆ. ಪರಿಣಾಮ 150ಕ್ಕೂ ಅಧಿಕ ಕುರಿಗಳು ಸ್ಥಳದಲ್ಲೇ ಅಪ್ಪಚ್ಚಿಯಾದರೆ 30 ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ. ಗಂಟೆ ಮಲ್ಲೇಶ, ಪೂಜಾರಿ ಚಿನ್ನಪ್ಪ, ಬಾಲರಾಜ್ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಬಸ್ ಚಾಲಕನಿಗೆ ಬ್ಯಾಟರಿ ಹಾಕಿ ಎಚ್ಚರಿಸಿದರೂ ಗಮನಿಸಿಲ್ಲ. 500 ಕುರಿಗಳಿದ್ದು, ಉಳಿದು ಕುರಿಗಳು ಬೆದರಿ ರಸ್ತೆ ಪಕ್ಕಕ್ಕೆ ಸರಿದಿವೆ ಎಂದು ಕುರಿಗಾಹಿ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಖಾಸಗಿ ಬಸ್ ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದಲ್ಲಿ ಹೆದ್ದಾರಿ ಪಕ್ಕದಲ್ಲೇ ಜೆಸಿಬಿಯಿಂದ ಗುಂಡಿ ಅಗೆದು ಕುರಿಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಸ್ಥಳಕ್ಕೆ ಸ್ಥಳೀಯ ಪಶು ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನಾರಾಯಣ ಪೇಟೆ ಶಾಸಕ, ಅಲ್ಲಿನ ಪಶು ಅಧಿಕಾರಿಗಳು ಬಂದು ಮಾಹಿತಿ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur ಡಿ.ರಾಂಪುರದಲ್ಲಿ ಭಾರೀ ಗಾತ್ರದ ಮೊಸಳೆ ಸೆರೆ
Raichur: ಬಿಜೆಪಿಯವರು ಮೈಮೇಲೆ ಬಂದಂತೆ ಆಡುತ್ತಿದ್ದಾರೆ: ಸಚಿವ ಎನ್.ಎಸ್.ಭೋಸರಾಜು
Cabinet Meeting: ಬೀದರ್, ರಾಯಚೂರು ನಗರಸಭೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ
Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್ಪಿಗೆ ಕರೆ
Medical,Nursing ಕಾಲೇಜು ಹೆಚ್ಚು ಶುಲ್ಕ ಪಡೆದರೆ ಕ್ರಮ: ಡಾ|ಶರಣ ಪ್ರಕಾಶ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ
West Bengal ಕೋರ್ಟ್ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ
Epson ಇಕೊ ಟ್ಯಾಂಕ್ ಪ್ರಿಂಟರ್: ರಶ್ಮಿಕಾ ಮಂದಣ್ಣ ಅಭಿಯಾನ
Hampankatta: ಪಾರ್ಕಿಂಗ್ ಸಮಸ್ಯೆಗೆ ‘ಮಲ್ಟಿ ಲೆವೆಲ್’ ಉತ್ತರ!
Tirupati Case; ಮತಾಂತರಗೊಂಡ ಜಗನ್ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.