![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 20, 2024, 5:32 PM IST
ಹೊಸದಿಲ್ಲಿ: ಟೀಂ ಇಂಡಿಯಾದಲ್ಲಿ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ (Rahul Dravid) ಅವರ ಜತೆ ಬ್ಯಾಟಿಂಗ್ ಕೋಚ್ ಆಗಿದ್ದ ವಿಕ್ರಮ್ ರಾಥೋರ್ (Vikram Rathour) ಅವರು ಇದೀಗ ಮತ್ತೆ ದ್ರಾವಿಡ್ ಜತೆ ಸೇರಿದ್ದಾರೆ. ಹೌದು, ಐಪಿಎಲ್ (IPL) ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್ (Rajasthan Royals) ತಂಡಕ್ಕೆ ವಿಕ್ರಮ್ ರಾಥೋರ್ ಅವರು ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ರಾಹುಲ್ ದ್ರಾವಿಡ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. ಇದೀಗ ಕಳೆದ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದ ಗೆಲುವಿನಲ್ಲಿ ರಾಹುಲ್ ದ್ರಾವಿಡ್ ಜತೆ ಸಹಾಯಕವಾಗಿದ್ದ ವಿಕ್ರಮ್ ರಾಥೋರ್ ಅವರು ಮತ್ತೆ ದ್ರಾವಿಡ್ ಬಳಗಕ್ಕೆ ಸೇರಿದ್ದಾರೆ.
“ಹಲವು ವರ್ಷಗಳಿಂದ ವಿಕ್ರಮ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ನಂತರ, ಅವರ ತಾಂತ್ರಿಕ ಪರಿಣತಿ, ಶಾಂತ ವರ್ತನೆ ಮತ್ತು ಭಾರತೀಯ ಪರಿಸ್ಥಿತಿಗಳ ಆಳವಾದ ತಿಳುವಳಿಕೆಯು ಅವರನ್ನು ರಾಯಲ್ಸ್ ಗೆ ಪರಿಪೂರ್ಣವಾಗಿಸುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ” ಎಂದು ರಾಹುಲ್ ದ್ರಾವಿಡ್ ಅವರು ವಿಕ್ರಮ್ ಹೇಳಿದರು.
“ಒಟ್ಟಾಗಿ, ನಾವು ಬಲವಾದ ಬಾಂಧವ್ಯವನ್ನು ನಿರ್ಮಿಸಿದ್ದೇವೆ, ಯಶಸ್ವಿಯಾಗಿ ಭಾರತಕ್ಕೆ ಮಾರ್ಗದರ್ಶನ ನೀಡಿದ್ದೇವೆ. ಅವರೊಂದಿಗೆ ಮತ್ತೆ ಒಂದಾಗಲು ನಾನು ಸಂತೋಷವಾಗಿದ್ದೇವೆ. ಯುವ ಪ್ರತಿಭೆಗಳನ್ನು ಪೋಷಿಸುವ ಮತ್ತು ಆಟಗಾರರ ಸಾಮರ್ಥ್ಯವನ್ನು ಹೆಚ್ಚಿಸುವ ಅವರ ಸಾಮರ್ಥ್ಯವು ಅಮೂಲ್ಯವಾಗಿದೆ. ನಾವು ನಮ್ಮ ತಂಡವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದ್ದೇವೆ. ಇಲ್ಲಿ ರಾಜಸ್ಥಾನ್ ರಾಯಲ್ಸ್ ನಲ್ಲಿ ವಿಶ್ವ ದರ್ಜೆಯ ತಂಡವನ್ನು ನಿರ್ಮಿಸುವುದನ್ನು ಮುಂದುವರಿಸಲಿದ್ದೇವೆ” ಎಂದು ರಾಹುಲ್ ಹೇಳಿದರು.
2007 ರಿಂದ, ಭಾರತವು ಟಿ20 ವಿಶ್ವಕಪ್ ಗೆದ್ದಿರಲಿಲ್ಲ. 2013 ರಿಂದ ಐಸಿಸಿ ಟ್ರೋಫಿಯನ್ನು ಅನೇಕ ಸಂದರ್ಭಗಳಲ್ಲಿ ಸಮೀಪಿಸಿದರೂ ಬರಗಾಲವನ್ನು ಎದುರಿಸಿತ್ತು. 2024ರಲ್ಲಿ ರಾಹುಲ್- ರಾಥೋರ್ ಜೋಡಿಯ ಕೋಚಿಂಗ್ ನಲ್ಲಿ ಟಿ20 ವಿಶ್ವಕಪ್ ಗೆಲುವು ಸಾಧಿಸಿತು. ಈತನ್ಮಧ್ಯೆ, ರಾಜಸ್ಥಾನ ರಾಯಲ್ಸ್ ನ ಏಕೈಕ ಐಪಿಎಲ್ ಪ್ರಶಸ್ತಿಯು 2008 ರಲ್ಲಿ ಅಂದರೆ ಐಪಿಎಲ್ ನ ಮೊದಲ ಋತುವಿನಲ್ಲಿ ಬಂದಿತ್ತು. ದೀರ್ಘಕಾಲದ ನಂತರ ಮತ್ತೊಂದು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿ ರಾಹುಲ್ – ರಾಥೋರ್ ಜತೆ ಸಾಗುತ್ತಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.