Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!
ಸಿ.ಟಿ.ರವಿ ಮುಂದಿನ ಸಿಎಂ ಆಗಬೇಕು....ನನ್ನ ಮಗನಿಗೆ ಮದುವೆ ಮಾಡು!!! ಹಲವು ಬೇಡಿಕೆಗಳು
Team Udayavani, Sep 20, 2024, 8:07 PM IST
ಚಿಕ್ಕಮಗಳೂರು: ದೇವರ ಹುಂಡಿಯಲ್ಲಿ ಪರೀಕ್ಷೆಯಲ್ಲಿ ಪಾಸ್ ಮಾಡು, ಹುಡುಗಿ ಪ್ರೀತಿಸುವಂತೆ ಮಾಡು, ಆಸ್ತಿ, ದುಡ್ಡು ಸಿಗು ವಂತೆ ಮಾಡು ಎಂಬ ಪತ್ರಗಳನ್ನು ಬರೆದು ಹಾಕಿರುವುದುನ್ನು ಇದುವರೆಗೂ ನೋಡಿದ್ದೇವೆ ಕೇಳಿದ್ದೇವೆ. ಆದರೆ, ಇದೇ ಮೊದಲ ಬಾರೀಗೆ ದೇವರ ಹುಂಡಿಗೆ ಹಿಂದುತ್ವ ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಹುಂಡಿಗೆ ಪತ್ರ ಬರೆದು ಹಾಕಿರುವುದು ಕಂಡು ಬಂದಿದೆ.
ಹಿಂದೂ ಮಹಾಸಭಾದಿಂದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ ಹುಂಡಿಯಲ್ಲಿ ಈ ಪತ್ರಗಳು ಲಭ್ಯವಾಗಿವೆ. ಪತ್ರದಲ್ಲಿ ಭಾರತ ದೇಶ ಸಂಪೂರ್ಣ ಹಿಂದೂರಾಷ್ಟçವಾಗಬೇಕು. ದೇಶದ ೧೪೦ ಕೋಟಿ ಜನರು ಹಿಂದೂಗಳಾಗಬೇಕು. ಸಿ.ಟಿ.ರವಿ ಮುಂದಿನ ಸಿ.ಎಂ ಆಗಬೇಕು ಎಂದು ಬರೆಯಲಾಗಿದೆ.
ಜತೆಗೆ ಈದ್ ಮಿಲಾದ್ ಮೆರವಣಿಗೆಗಿಂತ ಹಿಂದೂಗಳು ನಡೆಸುವ ಮೆರವಣಿಗೆ ಜೋರಾಗಬೇಕು. ಹಿಂದೂಗಳು ಒಗ್ಗಟ್ಟಾಗಿ ಇರಬೇಕು. ದತ್ತಪೀಠ ಆದಷ್ಟು ಬೇಗ ಹಿಂದೂಗಳ ಪೀಠವಾಗಬೇಕು. ನನ್ನ ಮಗನಿಗೆ ಮದುವೆ ಮಾಡು ಮುಂದಿನ ವರ್ಷ ನಿನ್ನ ಸೇವೆ ಮಾಡುತ್ತೇನೆ ಎಂದು ಬರೆದು ಪತ್ರವನ್ನು ಹುಂಡಿಗೆ ಹಾಕಲಾಗಿದೆ. ಸೆ.18 ರಂದು ಗಣಪತಿ ವಿಸರ್ಜನೆ ಬಳಿಕ ಇಂದು ಹುಂಡಿ ಯನ್ನು ತೆರೆದಿದ್ದು, ಪತ್ರ ಲಭ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.