MLA ಇ. ಚಂದ್ರಶೇಖರನ್ ವಿರುದ್ಧ ಫೇಸ್ಬುಕ್ ಪೋಸ್ಟ್; ಡೆಪ್ಯೂಟಿ ತಹಶೀಲ್ದಾರ್ ಅಮಾನತು
Team Udayavani, Sep 20, 2024, 9:11 PM IST
ಕಾಸರಗೋಡು: ಮಾಜಿ ಸಚಿವ, ಕಾಂಞಂಗಾಡ್ ಶಾಸಕ ಇ. ಚಂದ್ರಶೇಖರನ್ ವಿರುದ್ಧ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ ವೆಳ್ಳರಿಕುಂಡ್ ತಾಲೂಕಿನ ಡೆಪ್ಯೂಟಿ ತಹಶೀಲ್ದಾರ್, ಕಾಂಞಂಗಾಡ್ ನಿವಾಸಿ ಎ. ಪವಿತ್ರನ್ನನ್ನು ಜಿಲ್ಲಾಧಿಕಾರಿ ಕೆ. ಇಂಬುಶೇಖರ್ ಅಮಾನತುಗೊಳಿಸಿದ್ದಾರೆ.
ಸೆ. 12ರಂದು ಇ. ಚಂದ್ರಶೇಖರನ್ ಅವರನ್ನು ಆಕ್ಷೇಪಿಸುವ ರೀತಿಯಲ್ಲಿನ ಪೋಸ್ಟ್ ಅನ್ನು ಫೇಸ್ಬುಕ್ನಲ್ಲಿ ಹಾಕಲಾಗಿತ್ತು. ತನ್ನನ್ನು ವೈಯಕ್ತಿಕವಾಗಿ ಆಕ್ಷೇಪಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ನಡೆಸುತ್ತಿರುವುದಾಗಿ ಚಂದ್ರಶೇಖರನ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಗಂಟೆಗಳೊಳಗೆ ಈ ಪೋಸ್ಟ್ ಅನ್ನು ಹಿಂಪಡೆದ ಪವಿತ್ರನ್ ಮುಂದಿನ ದಿನ ನನ್ನಿಂದ ತಪ್ಪಾಗಿದೆ ಎಂದು ವಿವರಣೆಯನ್ನು ನೀಡಿದ್ದರು. ಆದರೆ ಇದರ ಮೊದಲು ಹಲವು ಬಾರಿ ವೈಯಕ್ತಿಕವಾಗಿ ಆಕ್ಷೇಪಿಸುವ ರೀತಿಯಲ್ಲಿ ಪವಿತ್ರನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವುದಕ್ಕೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಇದು ಶಿಸ್ತು ಉಲ್ಲಂಘನೆ ಹಾಗೂ ಕಂದಾಯ ಇಲಾಖೆಗೆ ಕಳಂಕ ಉಂಟು ಮಾಡುವುದಾಗಿದೆ ಎಂದು ಜಿಲ್ಲಾಧಿಕಾರಿ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.